ಆ್ಯಪ್ನಗರ

ಮಳೆ ಓಣಂ ಆಚರಣೆ ಕೈ ಬಿಟ್ಟ ಕೇರಳ ಸರಕಾರ

ಪ್ರಾಕೃತಿಕ ವಿಕೋಪದಿಂದಾಗಿ ಕೇರಳ ರಾಜ್ಯದಲ್ಲಿ 193 ಗ್ರಾಮಗಳಲ್ಲದೇ ಇನ್ನು 251 ಗ್ರಾಮಗಳನ್ನು ನೆರೆ ಬಾಧಿತ ಗ್ರಾಮವನ್ನಾಗಿ ಘೋಷಿಸಲಾಗಿದೆ .

Vijaya Karnataka 15 Aug 2018, 10:21 pm
ಕಾಸರಗೋಡು: ಪ್ರಾಕೃತಿಕ ವಿಕೋಪದಿಂದಾಗಿ ಕೇರಳ ರಾಜ್ಯದಲ್ಲಿ 193 ಗ್ರಾಮಗಳಲ್ಲದೇ ಇನ್ನು 251 ಗ್ರಾಮಗಳನ್ನು ನೆರೆ ಬಾಧಿತ ಗ್ರಾಮವನ್ನಾಗಿ ಘೋಷಿಸಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ಮನೆಯಿಂದ ನಿರಾಶ್ರಿತರ ಶಿಬಿರಗಳಲ್ಲಿರುವ ಪ್ರತಿಯೊಂದು ಕುಟುಂಬಕ್ಕೆ ತುರ್ತು ಸಹಾಯವಾಗಿ 10000 ರೂ. ನೀಡಲಾಗುವುದು. ಸಂಪೂರ್ಣವಾಗಿ ಮನೆ ಕೊಚ್ಚಿಹೋದ ಕುಟುಂಬಗಳಿಗೆ ಮನೆ ನಿರ್ಮಿಸಲು ನಾಲ್ಕು ಲಕ್ಷ ರೂ. ನೀಡುವುದು. ಮನೆ ಹಾಗೂ ಸ್ಥಳವನ್ನು ಕಳಕೊಂಡವರಿಗೆ 3ರಿಂದ 5 ಸೆಂಟ್ಸ್‌ ಸ್ಥಳ ಖರೀದಿಸುವುದಕ್ಕಾಗಿ ಐದು ಲಕ್ಷ ರೂ. ನೀಡಲಾಗುವುದು ಎಂದರು.
Vijaya Karnataka Web no onum celebration this year
ಮಳೆ ಓಣಂ ಆಚರಣೆ ಕೈ ಬಿಟ್ಟ ಕೇರಳ ಸರಕಾರ


ಈ ಬಾರಿ ಸರಕಾರ ಓಣಂ ಆಚರಣೆಯ ಕಾರ್ಯಕ್ರಮವನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ. ಓಣಂ ಆಚರಣೆಗಾಗಿ ನಾನಾ ಇಲಾಖೆಗಳಿಗೆ ಸರಕಾರ ಮಂಜೂರುಗೊಳಿಸಿದ ಹಣವನ್ನು ನಿರಾಶ್ರಿತರಿಗಾಗಿ ವಿನಿಯೋಗಿಸಲಾಗುವುದು. ವ್ಯಕ್ತಿಗಳು ಸಂಸ್ಥೆಗಳು ಓಣಂ ಆಚರಣೆಗಾಗಿ ಮೀಸಲಿಟ್ಟ ಹಣವನ್ನು ಕೊಡುಗೆಯಾಗಿ ನೀಡಬೇಕು.

ಸರಕಾರಿ, ಖಾಸಗಿ ಕಂಪೆನಿಗಳ ಸಿಬ್ಬಂದಿಗಳು ಎರಡು ದಿನದ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕೆಂದು ಸಿಎಂ ಪಿಣರಾಯಿ ವಿಜಯನ್‌ ವಿನಂತಿಸಿದ್ದಾರೆ.

ಪ್ರಕೃತಿ ವಿಕೋಪದಿಂದಾಗಿ ನಷ್ಟವಾದ ದಾಖಲೆಗಳನ್ನು ನೀಡಲು ಯಾವುದೇ ವಿಳಂಬ ನೀತಿಯನ್ನು ಅನುಸರಿಸಬಾರದು. ಅಲ್ಲದೇ ಶುಲ್ಕವನ್ನು ಪಡೆಯುವಂತಿಲ್ಲ. ಅದಕ್ಕಾಗಿ ಅದಾಲತ್‌ ನಡೆಸುವುದು. ಸಂಬಂಧಪಟ್ಟ ದಾಖಲೆಗಳಿಗಾಗಿ ಅಕ್ಷ ಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿರುವ ಶುಲ್ಕವನ್ನು ಸರಕಾರ ನೀಡುವುದು.

ಪ್ರತ್ಯೇಕಗೊಂಡ ಮುನ್ನಾರ್‌: ಭಾರಿ ಮಳೆಯಿಂದಾಗಿ ಜಲಾವೃತಗೊಂಡು ಮುನ್ನಾರ್‌ ಪ್ರತ್ಯೇಕಗೊಂಡಿದೆ. ಮುನ್ನಾರ್‌ಗೆ ತೆರಳುವ ರಸ್ತೆ ಸಂಪೂರ್ಣವಾಗಿ ಮುಳುಗಿದೆ. ಮಾಟ್ಟುಪ್ಪೆಟ್ಟಿ ಅಣೆಕಟ್ಟಿನ ಗೇಟ್‌ ತೆರೆಳದ ಕಾರಣ ಮುನ್ನಾರ್‌ನಲ್ಲಿ ಜಾಗ್ರತಾ ನಿರ್ದೇಶ ನೀಡಲಾಗಿದೆ. ಹಳೆಯ ಮುನ್ನಾರ್‌ ಸಹಿತ ನಾನಾ ಪ್ರದೇಶಗಳು ಜಲಾವೃತಗೊಂಡಿದೆ. ಮಾಟ್ಟುಪೆಟ್ಟಿ ಅಣೆಕಟ್ಟಿನ ಮೂರನೇ ಗೇಟ್‌ತೆರೆಯುವುದರೊಂದಿಗೆ ಸಂಪೂರ್ಣವಾಗಿ ಮುನ್ನಾರ್‌ ಪೇಟೆ ಸಂಪೂರ್ಣವಾಗಿ ನೀರಿನಿಂದ ಮುಳಗಲಿದೆ.

ವಯನಾಡು, ಕಲ್ಲಿಕೋಟೆಯಲ್ಲಿ ಮುಂದುವರಿದ ಮಳೆ:
ರಾಜ್ಯದ ವಯನಾಡು ಹಾಗೂ ಕಲ್ಲಿಕೋಟೆ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದೆ. ಇಲ್ಲಿಯ ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ವನಾಯಡು ಜಿಲ್ಲೆಯ ಮಕ್ಕಿಮಲೆಯಲ್ಲಿ ಭೂ ಕುಸಿತ ಉಂಟಾಗಿದೆ. ಈ ಪ್ರದೇಶದಲ್ಲಿ ಓರ್ವ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಇವರ ಪತ್ತೆಗಾಗಿ ರಕ್ಷ ಣ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ತಾಲಪ್ಪುಯ, ಪೆರಾರ‍ಯ ಭಾಗಗಳಲ್ಲಿ ತೋಡುಗಳು ತುಂಬಿ ಹರಿಯುತ್ತಿದೆ. ಕೆಲವು ಪ್ರದೇಶಗಳು ಪ್ರತ್ಯೇಕಗೊಂಡಿದೆ.

ಕಲ್ಲಿಕೋಟೆ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲೂ ಮಳೆಯು ಭಾರೀ ಗಾಳಿಯಿಂದಾಗಿ ಆತಂಕ ಉಂಟಾಗಿರುವುದು. ಕಾಕ್ಕಾಯಂ ಅಣೆಕಟ್ಟು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಗೇಟ್‌ ತೆರೆಯುವ ಸಾಧ್ಯತೆಯು ಇದೆ. ಹೊಳೆಯ ಸಮೀಪ ವಾಸವಾಗಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ಕಲ್ಲಿಕೋಟೆಯ ಜಿಲ್ಲೆಯ ಆರು ತಾಲೂಕುಗಳ ಎಂಟು ಪಂಚಾಯಿತಿಗಳಲ್ಲಾಗಿ 11 ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ. ಸುಮಾರು 293 ಕುಟುಂಬಗಳಿಂದಾಗಿ 1028 ಮಂದಿ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ