ಆ್ಯಪ್ನಗರ

ವೇಗ ನಿಯಂತ್ರಣರಹಿತ ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆ

ವಾಹನಗಳ ಅತಿವೇಗ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಕೆಎಸ್‌ಟಿಪಿ ಹೆದ್ದಾರಿಯಲ್ಲಿ ಪದೇ ಪದೆ ಉಂಟಾದ ವಾಹನ ಅಪಘಾತದಲ್ಲಿ ಕಳೆದ 2 ವರ್ಷಗಳಲ್ಲಿ ಉಂಟಾದ ಅಪಘಾತಗಳಲ್ಲಿ ನೂರಾರು ಜೀವಗಳು ಬಲಿಯಾಗಿವೆ.

Vijaya Karnataka 29 Nov 2018, 5:00 am
ಕಾಸರಗೋಡು: ವಾಹನಗಳ ಅತಿವೇಗ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಕೆಎಸ್‌ಟಿಪಿ ಹೆದ್ದಾರಿಯಲ್ಲಿ ಪದೇ ಪದೆ ಉಂಟಾದ ವಾಹನ ಅಪಘಾತದಲ್ಲಿ ಕಳೆದ 2 ವರ್ಷಗಳಲ್ಲಿ ಉಂಟಾದ ಅಪಘಾತಗಳಲ್ಲಿ ನೂರಾರು ಜೀವಗಳು ಬಲಿಯಾಗಿವೆ.
Vijaya Karnataka Web no speed controle on highways
ವೇಗ ನಿಯಂತ್ರಣರಹಿತ ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆ


ಇದಕ್ಕೆ, ವೇಗ ನಿಯಂತ್ರಣದ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಕಾರಣ. ಆದರೆ, ಸಮೀಪದ ಜಿಲ್ಲೆಗಳಲ್ಲಿ ಈ ರೀತಿಯ ವ್ಯವಸ್ಥೆಗಳನ್ನು 1 ಕಿ.ಮೀ. ವ್ಯಾಪ್ತಿಯ 4-5 ಪ್ರದೇಶಗಳಲ್ಲಿ ಸ್ಥಾಪಿಸಿರುವುದನ್ನು ಜಿಲ್ಲೆಯ ಅಧಿಕಾರಿಗಳು ಕಾಣದೆ ಹೋಗುತ್ತಿದ್ದಾರೆ.

ರಾಜ್ಯದ ಗಡಿ ಪ್ರದೇಶ ತಲಪಾಡಿಯಿಂದ ಮಂಗಳೂರಿಗೆ ಹೋಗುವ ವಾಹನಗಳು ಹಲವಾರು ವೇಗ ನಿಯಂತ್ರಣ ವ್ಯವಸ್ಥೆ ಗಳನ್ನು ದಾಟಿ ಸಾಗುತ್ತವೆ. ತಲಪಾಡಿ ಟೋಲ್‌ ಬೂತ್‌ ಮುಗಿದು ಅರ್ಧ ಕಿ.ಮೀ.ದೂರ ಸಾಗುವಾಗ ಕೆಸಿ ರೋಡ್‌ನಲ್ಲಿ 2 ಸ್ಥಳಗಳಲ್ಲಿ , ತೊಕ್ಕೋಟು ತಲುಪುವಾಗ 4 ಸ್ಥಳಗಳಲ್ಲಿ, ತೊಕ್ಕೋಟಿನಿಂದ ನೇತ್ರಾವತಿ ಸೇತುವೆಗೆ ತಲುಪುವ ಮೊದಲು 2 ಸ್ಥಳಗಳಲ್ಲಿ , ಸೇತುವೆ ದಾಟಿದರೆ ಮಂಗಳೂರು ಪಂಪ್‌ವೆಲ್‌ ಸರ್ಕಲ್‌ನಲ್ಲಿ ತಲುಪುವ ಮುನ್ನ 2 ಸ್ಥಳಗಳಲ್ಲಿ ನಿಯಂತ್ರಣ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.

ಅಪಾಯ ವಲಯದಲ್ಲಿ ಹೆಚ್ಚಿನ ಅಪಘಾತಗಳು ಪುನರಾವೃತ್ತಿಗೊಳ್ಳುವುದನ್ನು ತಡೆಗಟ್ಟಲು ಸಮೀಪದ ನೆರೆ ರಾಜ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಪೊಲೀಸ್‌ ಒಟ್ಟಿಗೆ ಕೈಜೋಡಿಸಿ ವೇಗನಿಯಂತ್ರಣ ವ್ಯವಸ್ಥೆ ಏರ್ಪಡಿಸಿದ್ದಾರೆ.

ತಲಪಾಡಿಯಿಂದ ಪಂಪ್‌ವೆಲ್‌ ಸರ್ಕಲ್‌ಗೆ ತಲುಪಲಿರುವ ದೂರ ಕೇವಲ 14 ಕಿ.ಮೀ. ಆಗಿದೆ. ಇದರ ಮಧ್ಯೆ 10 ಸ್ಥಳಗಳಲ್ಲಿ ವೇಗನಿಯಂತ್ರಣ ವ್ಯವಸ್ಥೆ ಇದೆ. ತಲಪಾಡಿಯಿಂದ ಮಂಗಳೂರು ವರೆಗಿನ ಚತುಷ್ಪಥ ಹೆದ್ದಾರಿಯ ಹಲವಾರು ಪ್ರದೇಶಗಳಲ್ಲಿ ಈ ವ್ಯವಸ್ಥೆ ಏರ್ಪಡಿಸಲಾಗಿದೆ. ಅತ್ಯಧಿಕ ಟೋಲ್‌ ಮೊತ್ತ ನೀಡಿ ಈ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತವೆ.

ಜಿಲ್ಲೆಯ ಕೆಎಸ್‌ಟಿಪಿ ಹೆದ್ದಾರಿಯಲ್ಲಿ ಕಳೆದ 2 ವರ್ಷಗಳಲ್ಲಿ ನಡೆದ ವಾಹನ ಅಪಘಾತಗಳಲ್ಲಿ 40 ರಷ್ಟು ಜನರು ಮೃತಪಟ್ಟಿದ್ದಾರೆ. ಕೆಎಸ್‌ಟಿಪಿ ಹೆದ್ದಾರಿಯಲ್ಲಿ ಕಾಸರಗೋಡಿನಿಂದ ಕಾಞಂಗಾಡಿಗೆ ಹೋಗುವ ದೂರ 28 ಕಿ.ಮೀ.ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೂ ಹಲವಾರು ಅಪಘಾತಗಳಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಅತ್ಯಧಿಕ ಅಪಘಾತ ಮರಣಗಳು ನಡೆದ ವಲಯಗಳಲ್ಲಿ ಕುನಿಯ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲಾ ಪರಿಸರವೂ ಒಂದಾಗಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾರಾರ‍ಯಚರಿಸುತ್ತಿರುವ ಶಾಲೆಗಳ ಹಲವಾರು ವಿದ್ಯಾರ್ಥಿಗಳು ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.

ಈ ಶೈಕ್ಷ ಣಿಕ ವರ್ಷ ಮಾತ್ರವೇ ಈವರೆಗೆ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳೆದ ಶಾಲೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾಕ್ಕೆ ಹಿಂಭಾಗದಿಂದ ಅತಿವೇಗದಲ್ಲಿ ಬಂದ ಲಾರಿ ಡಿಕ್ಕಿ ಹೊಡೆದು ಆಟೋ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಪ್ರದೇಶದಲ್ಲಿ ಈ ಹಿಂದೆ ಪೊಲೀಸರು ವೇಗನಿಯಂತ್ರಣ ವ್ಯವಸ್ಥೆ ಸ್ಥಾಪಿಸಿದ್ದರೂ, ಜನಪ್ರತಿನಿಧಿಗಳ ಮಿಂಚಿನ ಓಟಕ್ಕೆ ಇದು ಬಾಧಕವಾಗುತ್ತಿದೆ ಎಂಬ ಕಾರಣ ಹೇಳಿ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ