ಆ್ಯಪ್ನಗರ

ದೇಶದಲ್ಲಿಜಾತ್ಯತೀತಕ್ಕೆ ಭಯವಿಲ್ಲ

ಭಾರತದಲ್ಲಿಹಿಂದೂಗಳು ಬಹುಸಂಖ್ಯಾತರಾಗಿರುವಷ್ಟು ಕಾಲ ಜಾತ್ಯತೀತಕ್ಕೆ ಯಾವುದೇ ಭಯವಿಲ್ಲ, ಯಾವಾಗ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೋ ಆವಾಗ ಭಾರತ ಮತೀಯ ರಾಷ್ಟ್ರವಾಗಲಿದೆ ಎಂದು ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಕುಟ್ಟಿ ಅಭಿಪ್ರಾಯಪಟ್ಟರು.

Vijaya Karnataka Web 18 Jan 2020, 5:00 am
ಕಾಸರಗೋಡು: ಭಾರತದಲ್ಲಿಹಿಂದೂಗಳು ಬಹುಸಂಖ್ಯಾತರಾಗಿರುವಷ್ಟು ಕಾಲ ಜಾತ್ಯತೀತಕ್ಕೆ ಯಾವುದೇ ಭಯವಿಲ್ಲ, ಯಾವಾಗ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೋ ಆವಾಗ ಭಾರತ ಮತೀಯ ರಾಷ್ಟ್ರವಾಗಲಿದೆ ಎಂದು ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಕುಟ್ಟಿ ಅಭಿಪ್ರಾಯಪಟ್ಟರು.
Vijaya Karnataka Web caa


ಬಿಜೆಪಿ ಉದುಮ ಮಂಡಲ ನೇತೃತ್ವದಲ್ಲಿಬೋವಿಕ್ಕಾನದಲ್ಲಿಶುಕ್ರವಾರ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಿಎಎ ವಿರುದ್ಧ ಭಾರತದಲ್ಲಿಪ್ರತಿಪಕ್ಷಗಳು ನಡೆಸುತ್ತಿರುವ ಅಪಪ್ರಚಾರ ವಿರುದ್ಧ ಬಿಜೆಪಿಯ ಜಾಗೃತ ಸಮಾವೇಶದ ವಿರುದ್ಧ ಬೋವಿಕ್ಕಾನದಲ್ಲಿಮುಸ್ಲಿಂ ಲೀಗ್‌ ಹರತಾಳ ನಡೆಸುತ್ತಿರುವ ರೀತಿಯು ಕಾಶ್ಮೀರ ಭಯೋತ್ಪದಕರಂತೆ ಆಗಿದೆ. ಅಸ್ಸಾಂನಲ್ಲಿಎನ್‌ಪಿಆರ್‌ ಜಾರಿಗೊಳಿಸಿರುವುದು ಯುಪಿಎ ಸರಕಾರವಾಗಿದೆ. ಅಸ್ಸಾಂನಲ್ಲಿಬಂಗಾಳಿಗಳ ಉಪಟಳ ತಾಳದೆ ರಾಜೀವ ಗಾಂಧಿ ಒಡಂಬಡಿಕೆ ಮಾಡಿಕೊಂಡಿದ್ದರು. ಸುಪ್ರೀಂ ಕೋರ್ಟ್‌ ನೇರವಾಗಿ ಎನ್‌ಆರ್‌ಸಿ ಜಾರಿಗೊಳಿಸಿದೆ. ಪೌರತ್ವ ವಿಷಯದಲ್ಲಿಕೇಂದ್ರ ಸರಕಾರದ ಕ್ರಮ ಸಮರ್ಪಕವಾಗಿದೆ. ಇಲ್ಲಿಪ್ರತಿಭಟನೆ ನಡೆಸುತ್ತಿರುವ ಮುಸ್ಲಿಮರೇ ನಿಮಗೆ ಸೌದಿ ಅರೇಬಿಯಾಕ್ಕೆ ತೆರಳಿ ಪೌರತ್ವ ಕೇಳಲು ಧೈರ್ಯವಿದೆಯೇ, ಅಲ್ಲಿನಿರ್ಣಯ ಮಂಡಿಸಲು ಸಾಧ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.

ಭಾರತ ದೇಶ ಒಂದು ಜಾತ್ಯತೀತ ರಾಷ್ಟ್ರವಾಗಿರುವುದೇ ಹಿಂದೂ ಸಂಸ್ಕಾರದಿಂದಾಗಿದೆ. ಇದೀಗ ಮುಸ್ಲಿಮರನ್ನು ಮುಖ್ಯ ವಾಹಿನಿಯಿಂದ ಹೊರಗಡೆ ನಿಲ್ಲಿಸುವ ರೀತಿಯಲ್ಲಿಕಮ್ಯೂನಿಸ್ಟ್‌ ಹಾಗೂ ಕಾಂಗ್ರೆಸ್‌ನವರು ಪ್ರಯತ್ನಿಸುತ್ತಿದ್ದಾರೆ. ಇದು ಮುಸ್ಲಿಂ ಸಮುದಾಯಕ್ಕೆ ಆಪತ್ತಾಗಿದೆ. ಈ ಮೊದಲೇ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್‌ ಶಾ ದೇಶದ ಒಂದಿಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲಎಂಬುದಾಗಿ ಹೇಳಿದರು. ಅದರಂತೆ ನಡೆದುಕೊಂಡಿದ್ದಾರೆ. ಕಮ್ಯೂನಿಸ್ಟ್‌ ಹಾಗೂ ಕಾಂಗ್ರೆಸ್‌ ನೇತಾರರು ಯಾಕೆ ಸಿಎಎ ಬಗ್ಗೆ ಚರ್ಚೆಗೆ ಬರುವುದಿಲ್ಲ, ಎನ್‌ಆರ್‌ಸಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಭಯ ಬೇಡ. ಅದು ದೇಶದ ಭದ್ರತೆ ಮುಖ್ಯವಾಗಿದೆ.

ಸಿಎಎ ಬಗ್ಗೆ ಕೇರಳದಲ್ಲಿಅಪ ಪ್ರಚಾರ ಮತ್ತು ವಿಧಾನಸಭೆಯಲ್ಲಿನಿರ್ಣಯ ಮಂಡಿಸಿ ಕೇರಳದಲ್ಲಿಜಾರಿಗೊಳಿಸುವುದಿಲ್ಲಎಂಬ ಹೇಳಿಕೆ ಬಾಲಿಶವಾಗಿದೆ. ಅಲ್ಲದೆ ಸುಪ್ರೀಂಕೋರ್ಟ್‌ನಲ್ಲಿದಾವೆ ಹೂಡಿರುವುದು ಸಹ ಅವರ ಅಲ್ಪತನವನ್ನು ತೋರಿಸುಯತ್ತದೆ ಎಂದು ಹೇಳಿದರು.

ಮತ ಬ್ಯಾಂಕ್‌ ಸೃಷ್ಟಿಗಾಗಿ ಪಿಣರಾಯಿ ವಿಜಯನ್‌ ಎಲ್ಲರಿಗೂ ರೇಶನ್‌ ಕಾರ್ಡ್‌ ನೀಡುವ ಘೋಷಣೆ ಮಾಡಿದ್ದಾರೆ. ಕೇರಳದಲ್ಲಿರುವ ಬಾಂಗ್ಲಾದೇಶದವರಿಗೂ ಪಡಿತರ ಚೀರ್ಟಿ ನೀಡಿ ಆ ಮೂಲಕ ಓಟು ಪಡೆಯುವ ಪ್ರಯತ್ನವಾಗಿದೆ. ಆದ್ದರಿಂದ ನಾವು ಜಾಗೂರಕರರಾಗಿರಬೇಕು. ಇಲ್ಲಿಗೆ ಕೆಲಸ ಆರಿಸಿಕೊಂಡು ಬಂದ ಒಬ್ಬ ಬಂಗಾಳಿ ಪ್ರಜೆಗೂ ಪಡಿತರ ಚೀಟಿ ನೀಡಲು ಬಿಡಬಾರದೆಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾಯ್‌್ಕ, ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಜಿಲ್ಲಾಉಪಾಧ್ಯಕ್ಷ ನಂಜಲ್‌ ಕುಂಞಿರಾಮನ್‌, ನಾಯಕರಾದ ಎ. ವೇಲಾಯುಧನ್‌, ಕೆ.ಟಿ. ಪುರುಷೋತ್ತಮನ್‌, ಎನ್‌. ಬಾಬುರಾಜ್‌, ಚಂದ್ರನ್‌, ಮಧುಸೂದನ್‌ ಮತ್ತಿತರರು ಮಾತನಾಡಿದರು.

ಹರತಾಳ ಛಾಯೆ:
ಬಿಜೆಪಿ ನೇತೃತ್ವದಲ್ಲಿಬೋವಿಕ್ಕಾನದಲ್ಲಿನಡೆದ ಜನಜಾಗ್ರತಿ ಸಮಾವೇಶದ ಸಂದರ್ಭದಲ್ಲಿ ಮುಸ್ಲಿಂ ಲೀಗ್‌ ನೇತೃತ್ವದ ಪ್ರತಿಪಕ್ಷಗಳು ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿದರು. ಇದರಿಂದ ಬೋವಿಕ್ಕಾನ ಪೇಟೆಯಲ್ಲಿಹರತಾಳದ ಛಾಯೆ ಮೂಡಿತು. ಅಲ್ಲದೆ ಆಟೋ-ಟ್ಯಾಕ್ಸಿಗಳನ್ನು ಓಡಿಸದಂತೆ ವಾಟ್ಸ್ಯಾಪ್‌ ಸಹಿತ ಸಾಮಾಜಿಕ ತಾಣಗಳಲ್ಲಿಪ್ರಚಾರಪಡಿಸಿದ್ದಾರೆ. ಯಾವುದಾದರೂ ಅಂಗಡಿ ತೆರೆದು ಕಾರ್ಯಾಚರಿಸಿದರೆ ಅಂತಹ ಅಂಗಡಿಗಳನ್ನು ಬಹಿಷ್ಕರಿಸುವಂತೆ ಬೆದರಿಕೆ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಆರೋಪಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ