ಆ್ಯಪ್ನಗರ

ಚೆಕ್‌ಡ್ಯಾಂ, ರಸ್ತೆಗಳ ನವೀಕರಣ ಯೋಜನೆಗಳಿಗೆ ಅಂಗೀಕಾರ

2019-20ನೇ ವರ್ಷದ ಹಲವಾರು ಯೋಜನೆಗಳು ಹಾಗೂ ಮೆಕ್ಕಾಡಂ ಡಾಮರೀಕರಣ ಮೊದಲಾದ ರಸ್ತೆಗಳ ದುರಸ್ತಿ ಕಾಮಗಾರಿಗಳ ಟೆಂಡರ್‌ಗಳನ್ನು ಬುಧವಾರ ನಡೆದ ಜಿಪಂಸಭೆಯಲ್ಲಿ ಅಂಗೀಕರಿಸಲಾಯಿತು.

Vijaya Karnataka 21 Dec 2018, 4:48 pm
ಕಾಸರಗೋಡು: 2019-20ನೇ ವರ್ಷದ ಹಲವಾರು ಯೋಜನೆಗಳು ಹಾಗೂ ಮೆಕ್ಕಾಡಂ ಡಾಮರೀಕರಣ ಮೊದಲಾದ ರಸ್ತೆಗಳ ದುರಸ್ತಿ ಕಾಮಗಾರಿಗಳ ಟೆಂಡರ್‌ಗಳನ್ನು ಬುಧವಾರ ನಡೆದ ಜಿ.ಪಂ.ಸಭೆಯಲ್ಲಿ ಅಂಗೀಕರಿಸಲಾಯಿತು.
Vijaya Karnataka Web ok for chekdam road rinovation plan
ಚೆಕ್‌ಡ್ಯಾಂ, ರಸ್ತೆಗಳ ನವೀಕರಣ ಯೋಜನೆಗಳಿಗೆ ಅಂಗೀಕಾರ


ಚೆಕ್‌ಡ್ಯಾಂಗಳ ನವೀಕರಣ ಮೊದಲಾದ ಯೋಜನೆಗಳಿಗೆ ಅಂಗೀಕಾರ ನೀಡಲಾಗಿದೆ. ಬ್ಲಾಕ್‌ ಪಂಚಾಯಿತಿಗಳು ಜಿ.ಪಂ.ಗೆ ಹಸ್ತಾಂತರಿಸಿದ ಯೋಜನೆಗಳಿಗೆ ಅಗತ್ಯ ಮೊತ್ತ ಮಂಜೂರುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಚೆಕ್‌ಡ್ಯಾಂಗಳ ನವೀಕರಣಕ್ಕೆ 40ಲಕ್ಷ ರೂ., ಹೈನುಗಾರಿಕಾ ವಲಯಕ್ಕೆ 1.50 ಕೋಟಿ, ನದಿ ಸಂರಕ್ಷ ಣೆಗೆ 5 ಲಕ್ಷ ರೂ., ಶಾಲೆಗಳ ಸೋಲಾರ್‌ ಯೋಜನೆಗಾಗಿ 1.75 ಕೋಟಿ, ಶಾಲೆಗಳಲ್ಲಿ ಅರಣ್ಯೀಕರಣ ಯೋಜನೆಗೆ 10ಲಕ್ಷ ರೂ. ಇತ್ಯಾದಿ ಯೋಜನೆಗಳಿಗೆ ಸಭೆ ಅಂಗೀಕಾರ ನೀಡಿದೆ. ಜಿಲ್ಲೆಯ ಆರು ಬ್ಲಾಕ್‌ ಪಂಚಾಯಿತಿಗಳು ನೀಡಿದ ಯೋಜನಾ ನಿರ್ದೇಶನಗಳನ್ನು ಸಭೆ ಅಂಗೀಕರಿಸಿತು.

ಕಾಸರಗೋಡು ಬ್ಲಾಕ್‌ ಪಂಚಾಯಿತಿನ ಚೆಕ್‌ಡ್ಯಾಂ ಯೋಜನೆಗಳಿಗಿರುವ 45 ಲಕ್ಷ ರೂ., ಕಾರಡ್ಕ ಬ್ಲಾಕ್‌ ಪಂಚಾಯಿತಿನ 15ಲಕ್ಷ ರೂ. ಯೋಜನೆ, ಕಾಞಂಗಾಡು ಬ್ಲಾಕ್‌ ಪಂಚಾಯಿತಿನ 35 ಲಕ್ಷ ರೂ.ಯೋಜನೆ, ಮಂಜೇಶ್ವರ ಬ್ಲಾಕ್‌ ಪಂಚಾಯಿತಿಯ 25 ಲಕ್ಷ ರೂ. ಯೋಜನೆ ಇತ್ಯಾದಿ ಬ್ಲಾಕ್‌ ಪಂಚಾಯಿತಿಗಳು ಜಿಲ್ಲಾ ಪಂಚಾಯಿತಿಗೆ ನೀಡಿದ ಯೋಜನಾ ನಿರ್ದೇಶನಗಳಾಗಿವೆ.

ಕಾಸರಗೋಡು ಬ್ಲಾಕ್‌ ಪಂಚಾಯಿತಿಗೆ ಹೆಚ್ಚುವರಿ ಮೊತ್ತಕ್ಕಿರುವ ಯೋಜನಾ ಅನುದಾನವನ್ನು ಮಂಜೂರುಗೊಳಿಸುವುದು, ಮಂಜೇಶ್ವರಕ್ಕೆ ಕಡಿಮೆ ಮೊತ್ತ ಮಂಜೂರುಗೊಳಿಸುವುದರ ಕುರಿತು ಚರ್ಚೆ ನಡೆಯಿತು.

ಬ್ಲಾಕ್‌ ಪಂಚಾಯಿತಿಗಳು ಯೋಜನಾ ನಿರ್ದೇಶನಗಳನ್ನು ನೀಡಿರುವುದಾಗಿಯೂ ಇದರಲ್ಲಿ ಜಿ.ಪಂ.ಮಧ್ಯೆ ಪ್ರವೇಶಿಸಿಲ್ಲ ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಅಧ್ಯಕ್ಷ ಎ. ಜಿ. ಸಿ. ಬಶೀರ್‌ ಹೇಳಿದರು. ಕಾಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ ನೇತ್ರರೋಗ ವಿಭಾಗ ಮಂಜೂರುಗೊಳಿಸಿದ್ದು, ಅಗತ್ಯದ ಸಿದ್ಧತೆ ಕೈಗೊಳ್ಳುವಂತೆ ಅಧ್ಯಕ್ಷ ರು ಸಭೆಯಲ್ಲಿ ಸೂಚಿಸಿದರು.

ನ್ಯಾಯವಾದಿ ವಿ. ಪಿ. ಪಿ. ಮುಸ್ತಫಾ, ಹರ್ಷಾದ್‌ ವರ್ಕಾಡಿ, ಇ. ಪದ್ಮಾವತಿ, ಶಾನವಾಸ್‌ ಪಾದೂರು, ಎ. ಪಿ. ಉಷಾ, ಪುಷ್ಪಾ ಅಮೇಕ್ಕಳ ಜೋಸ್‌ ಪತಾಲಿಲ್‌ ಉಪಸ್ಥಿತರಿದ್ದರು.

ಕನ್ನಡದಲ್ಲಿ ಅಂಗನವಾಡಿ ಕೈಪಿಡಿ: ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ನೌಕರಿ ನಿರ್ವಹಿಸುತ್ತಿರುವ ಅಂಗನವಾಡಿ ಕಾರ‍್ಯಕರ್ತೆಯರಿಗಿರುವ ಕೈಪಿಡಿಯು ಕನ್ನಡ ಭಾಷೆಯಲ್ಲಿ ನೀಡಬೇಕು ಎಂದು ಜಿ.ಪಂ.ಸಭೆ ಸರಕಾರದೊಡನೆ ಆಗ್ರಹಿಸಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್‌ ವರ್ಕಾಡಿ ಮಂಡಿಸಿದ ಠರಾವುವನ್ನು ಏಕಕಂಠದಲ್ಲಿ ಅಂಗೀಕರಿಸಲಾಯಿತು.

ಮಲೆಯಾಳದಲ್ಲಿ ಮಾತ್ರವೇ ಸಾಮಾಜಿಕ ನ್ಯಾಯ ಇಲಾಖೆ ಕೈಪಿಡಿ ಹೊರಡಿಸುತ್ತಿದೆ. ಇದು ಕನ್ನಡ ಪ್ರದೇಶದಲ್ಲಿ ಕಾರಾರ‍ಯಚರಿಸುತ್ತಿರುವ ಅಂಗನವಾಡಿ ಕಾರ‍್ಯಕರ್ತೆಯರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೈಪಿಡಿಯನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸಬೇಕು ಎಂದು ಠರಾವಿನಲ್ಲಿ ಹೇಳಲಾಯಿತು.

ಕೇಂದ್ರ ಸರಕಾರ ದೊಡ್ಡ ಮೊತ್ತವನ್ನು ಈ ವಲಯದಲ್ಲಿ ವಿನಿಯೋಗಿಸುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಸಾಮಾಜಿಕ ನ್ಯಾಯ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಚರ್ಚೆಯಲ್ಲಿ ಜಿ.ಪಂ.ಅಧ್ಯಕ್ಷ ಎ. ಜಿ. ಸಿ. ಬಶೀರ್‌ ಬಲವಾಗಿ ಪ್ರತಿಪಾದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ