ಆ್ಯಪ್ನಗರ

ಆಪರೇಶನ್‌ ಡಾನ್‌: ಸಿನಿಮಾ ಸ್ಟೈಲ್‌ನಲ್ಲಿ ಸೆರೆಯಾದ ವಂಚಕ

ಒಳ ಸಂಚು, ವಂಚನೆ ಪ್ರಕರಣಗಳಲ್ಲಿ ಆರೋಪಿಯಾದ ಮುಹ್‌ತಾಸಿಂ ಯಾನೆ ತಸ್ಲೀಂನನ್ನು ದಿಲ್ಲಿ ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಬಂಧಿಸಿದ್ದಾರೆ.

Vijaya Karnataka 14 Jan 2019, 5:00 am
ಕಾಸರಗೋಡು: ಒಳ ಸಂಚು, ವಂಚನೆ ಪ್ರಕರಣಗಳಲ್ಲಿ ಆರೋಪಿಯಾದ ಮುಹ್‌ತಾಸಿಂ ಯಾನೆ ತಸ್ಲೀಂನನ್ನು ದಿಲ್ಲಿ ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಬಂಧಿಸಿದ್ದಾರೆ.
Vijaya Karnataka Web operation don cheater arrest
ಆಪರೇಶನ್‌ ಡಾನ್‌: ಸಿನಿಮಾ ಸ್ಟೈಲ್‌ನಲ್ಲಿ ಸೆರೆಯಾದ ವಂಚಕ


ಎರಡು ದಿನಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ತಂಗಿದ್ದ ದಿಲ್ಲಿ ಪೊಲೀಸರು ಯಾರಿಗೂ ತಿಳಿಯದಂತೆ ತಸ್ಲೀಂನೊಂದಿಗೆ ವಿಮಾನದಲ್ಲಿ ದಿಲ್ಲಿಗೆ ಮರಳಿದ್ದಾರೆ. ಆರೋಪಿಯನ್ನು ಬಂಧಿಸಿ ಕೇರಳ ಪೊಲೀಸರು ರಹಸ್ಯವಾಗಿ ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಎರಡನೇ ಶನಿವಾರ ರಜೆಯಾಗಿರುವುದರಿಂದ ಮ್ಯಾಜಿಸ್ಪ್ರೇಟ್‌ ಮನೆಯಲ್ಲಿ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಶನಿವಾರ ಸಂಜೆಯಷ್ಟೇ ಕಾಸರಗೋಡು ಜಿಲ್ಲಾ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಆರ್‌ಎಸ್‌ಎಸ್‌ ನೇತಾರರ ವಿರುದ್ಧ ಸಂಚು, ಭಯೋತ್ಪಾದಕ ನಂಟು ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ ಹಿನ್ನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಎಫ್‌ಐಆರ್‌ ತಯಾರಿಸಲಾಗಿತ್ತು.

ದಿಲ್ಲಿಯಿಂದ ವಿಮಾನದಲ್ಲಿ ಮಂಗಳೂರು ಮೂಲಕ ದಿಲ್ಲಿ ಪೊಲೀಸ್‌ ಅಧಿಕಾರಿಗಳು ಆಗಮಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಕಾಸರಗೋಡು ಜಿಲ್ಲಾ ಪೊಲೀಸರು ಆರೋಪಿಯ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಿ ಶೋಧ ನಡೆಸಿದ್ದರು. ತನ್ನನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂಬ ಮಾಹಿತಿ ಚೆಂಬರಿಕದಲ್ಲಿದ್ದ ಆರೋಪಿಗೆ ಲಭಿಸಿತ್ತು. ಬಳಿಕ ಈತ ವಾಸ ಸ್ಥÜಳ ಬದಲಿಸಿದ್ದ. ಚಟ್ಟಂಚಾಲಿನ ಪತ್ನಿ ಮನೆ ಸಮೀಪದಲ್ಲಿರುವ ಮನೆಯಲ್ಲಿ ಶೋಧ ನಡೆಸಿದಾಗ ಈತ ಪತ್ತೆಯಾಗಿದ್ದಾನೆ. ಆದರೆ ಅಲ್ಲಿಂದ ತಪ್ಪಿಸಿಕೊಂಡ ಆತನನ್ನು ಸಾಹಸದಿಂದ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾನಗರ ಎಸ್‌ಐ ಅನೂಪ್‌ ನೇತೃತ್ವದಲ್ಲಿ ಪೊಲೀಸರು ತಸ್ಲೀಂನನ್ನು ಬಂಧಿಸಿ ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಕಲಿ ಪಾಸ್‌ಪೋರ್ಟ್‌ ಬಳಸಿ ಹಲವಾರು ವಿದೇಶ ಯಾತ್ರೆಗಳನ್ನು ನಡೆಸಿದ ತಸ್ಲೀಂ ಪಡಿತರ ಚೀಟಿ, ಜಾತಿ ಪ್ರಮಾಣಪತ್ರ, ನಕಲಿ ಗುರುತುಚೀಟಿ ತಯಾರಿಸಿ ನೀಡುತ್ತಿದ್ದ ಎನ್ನಲಾಗಿದೆ.

ನಕಲಿ ಪಾಸ್‌ಪೋರ್ಟ್‌ ತಯಾರಿಸಲು ನಕಲಿ ದಾಖಲೆಪತ್ರಗಳು, ಸೀಲ್‌ಗಳನ್ನು ಈತ ತಯಾರಿಸಿರುವುದನ್ನು ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಚಿಕ್ಕಂದಿನಿಂದಲೇ ಮುಂಬಯಿಯಲ್ಲಿದ್ದ ತಸ್ಲೀಂ ಕೆಲವೊಮ್ಮೆ ಕೇರಳಕ್ಕೆ ಬರುತ್ತಿದ್ದ. ಊರಿಗೆ ಬಂದರೆ ಮರಳು ಮಾಫಿಯಾದಲ್ಲಿ ಸಕ್ರಿಯನಾಗಿರುತ್ತಿದ್ದ ಎನ್ನಲಾಗಿದೆ. ಪದೇ ಪದೆ ಗಲ್ಫ್‌ಗೆ ತೆರಳುತ್ತಿದ್ದನು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ