ಆ್ಯಪ್ನಗರ

ಹೊರರಾಜ್ಯದ ಮೀನು ಬಂದರೂ ಬೆಲೆ ಇಳಿಕೆಯಿಲ್ಲ

ಆಳಸಮುದ್ರ ಮೀನುಗಾರಿಕಾ ನಿಷೇಧ ಆರಂಭಗೊಂಡಿರುವುದರಿಂದ ಮೀನಿನ ಬೆಲೆ ದುಪ್ಪಟ್ಟಾಗಿದೆ.

Vijaya Karnataka Web 17 Jun 2019, 5:00 am
ಕಾಸರಗೋಡು: ಆಳಸಮುದ್ರ ಮೀನುಗಾರಿಕಾ ನಿಷೇಧ ಆರಂಭಗೊಂಡಿರುವುದರಿಂದ ಮೀನಿನ ಬೆಲೆ ದುಪ್ಪಟ್ಟಾಗಿದೆ.
Vijaya Karnataka Web other state fish import rate hike
ಹೊರರಾಜ್ಯದ ಮೀನು ಬಂದರೂ ಬೆಲೆ ಇಳಿಕೆಯಿಲ್ಲ


ಬೂತಾಯಿ 300, ಬಂಗುಡೆ 300, ಇತರ ಮೀನುಗಳಿಗೆ 300ರಿಂದ 800 ರೂ. ವರೆಗೆ ಬೆಲೆ ಇದೆ. ಪ್ರತಿಯೊಂದು ತಳಿಯ ಮೀನಿಗೂ ಕಳೆದ ಎರಡು ತಿಂಗಳನ್ನು ಹೋಲಿಸಿದರೆ ನೂರು ರೂ.ನಷ್ಟು ಹೆಚ್ಚಳ ಉಂಟಾಗಿದೆ. ಸಾಮಾನ್ಯವಾಗಿ ಮೀನುಗಾರಿಕಾ ನಿಷೇಧದ ಬಳಿಕ ಮೀನು ಕುಸಿತವಾಗಿದ್ದರೂ ಈ ಬಾರಿ ಕಳೆದ ಎರಡು ತಿಂಗಳುಗಳಿಂದ ಸಮುದ್ರತೀರ ಖಾಲಿಯಾಗಿದೆ. ಒಂದು ಕಿಲೋ ಬೂತಾಯಿ 15ರಷ್ಟು ಮೀನುಗಳು ಮಾತ್ರ ತೂಕದಲ್ಲಿ ಬರುತ್ತವೆ. ಅಂದರೆ ಒಂದು ಬೂತಾಯಿಗೆ 20 ರೂ. ಬೆಲೆಯಾಗಿದೆ. ಬೇರೆ ಮೀನುಗಳ ಸ್ಥಿತಿ ಕೂಡ ಇದೇ ಆಗಿದೆ.

ಆದರೆ ಅತ್ಯಧಿಕ ಬೆಲೆ ನೀಡಿದರೂ ಕೂಡಾ ಒಳ್ಳೆ ಮೀನು ಲಭಿಸುವುದಿಲ್ಲ. ಕನಿಷ್ಠ 15 ದಿನಗಳಷ್ಟು ಹಳೆಯ ಮೀನುಗಳು ವಿದೇಶಗಳಿಂದ, ಹೊರರಾಜ್ಯಗಳಿಂದ ಜಿಲ್ಲೆಗೆ ಬರುತ್ತವೆ.

ಈ ಹಿಂದೆ ಹತ್ತು ಟನ್‌ನಷ್ಟು ಮೀನು ಮಾರುಕಟ್ಟೆಗೆ ಬರುತ್ತಿದ್ದೂ ಈಗ ಕಷ್ಟಪಟ್ಟು ಎರಡು ಟನ್‌ ಮೀನು ಮಾತ್ರವೇ ಬರುತ್ತದೆ. ತಮಿಳುನಾಡು, ಆಂಧ್ರ ಮೊದಲಾದ ರಾಜ್ಯಗಳಲ್ಲಿ ಮೀನುಗಾರಿಕಾ ನಿಷೇಧ ಆರಂಭಿಸಿದ ಸಮಯದಲ್ಲೇ ಕೇರಳದಲ್ಲೂ ಮೀನುಗಾರಿಕಾ ನಿಷೇಧ ಕಾಲಾವಧಿ ಜಾರಿಗೆ ಬರುವುದು ಅತ್ಯಂತ ಸಂದಿಗ್ಧತೆಯನ್ನು ಉಂಟುಮಾಡುತ್ತಿದೆ.

ಈ ಕಾರಣದಿಂದ ಕೇರಳಕ್ಕೆ ಧಾರಾಳವಾಗಿ ಮೀನು ಬರುವ ತಮಿಳುನಾಡಿನ ಮೀನು ಮಾರುಕಟ್ಟೆಯೂ ಮುಚ್ಚುಗಡೆಯ ಸ್ಥಿತಿಯಲ್ಲಿದೆ. ಆದರೆ ಸಣ್ಣ ದೋಣಿಗಳ ಮೂಲಕ ತಮಿಳುನಾಡಿನಲ್ಲಿ ಹಾಗೂ ಆಂಧ್ರದಲ್ಲಿ ಹಿಡಿಯುವ ಮೀನುಗಳು ಈಗ ಮಾರುಕಟ್ಟೆಯಲ್ಲಿ ಸಣ್ಣದೊಂದು ಭರವಸೆಯಾಗಿದೆ. ಇದೇ ಸಂದರ್ಭ ಹೊರರಾಜ್ಯಗಳಲ್ಲಿ ಜೂ. 17ರಿಂದ ಮೀನುಗಾ ರಿಕಾ ನಿಷೇಧ ಕೊನೆಗೊಳ್ಳುತ್ತಿದ್ದು ಮೀನು ಮಾರುಕಟ್ಟೆ ಎಚ್ಚೆತ್ತುಕೊಳ್ಳಲಿದೆ ಎಂಬುದು ಮೀನು ವ್ಯಾಪಾರಿಗಳ ನಿರೀಕ್ಷೆ.

ಇತರ ರಾಜ್ಯಗಳ ಮೀನುಗಾರಿಕಾ ನಿಷೇಧ ಒಣ ಮೀನು ಮಾರುಕಟ್ಟೆಯನ್ನು ಕೂಡಾ ಬಾಧಿಸಿದೆ. ಮೀನಿನ ಕೊರತೆ ಈ ವಲಯವನ್ನು ಕೂಡಾ ಬಾಧಿಸಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ