ಆ್ಯಪ್ನಗರ

ಕಾಲೇಜು ಪ್ರಿನ್ಸಿಪಾಲ್‌ಗೆ ವಿಚಿತ್ರ ಬೀಳ್ಕೊಡುಗೆ

ಪಡನ್ನಕ್ಕಾಡು ನೆಹರೂ ಕಾಲೇಜಿನ ಪ್ರಿನ್ಸಿಪಾಲರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸಿದ ಪೋಸ್ಟರ್‌ ಅಂಟಿಸಿ, ಸಿಡಿಮದ್ದು ಸಿಡಿಸಿ ಸಂಭ್ರಮಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

87654322 31 Mar 2018, 5:00 am
ಕಾಸರಗೋಡು: ಪಡನ್ನಕ್ಕಾಡು ನೆಹರೂ ಕಾಲೇಜಿನ ಪ್ರಿನ್ಸಿಪಾಲರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸಿದ ಪೋಸ್ಟರ್‌ ಅಂಟಿಸಿ, ಸಿಡಿಮದ್ದು ಸಿಡಿಸಿ ಸಂಭ್ರಮಿಸಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ವಾಟ್ಸ್ಯಾಪ್‌ಗಳಲ್ಲಿ ವಿದ್ಯಾರ್ಥಿಗಳು ಈ ಸಂಭ್ರಮವನ್ನು ಪೋಸ್ಟ್‌ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
Vijaya Karnataka Web peculiar fairwell
ಕಾಲೇಜು ಪ್ರಿನ್ಸಿಪಾಲ್‌ಗೆ ವಿಚಿತ್ರ ಬೀಳ್ಕೊಡುಗೆ


ಕಾಲೇಜಿನಲ್ಲಿ ಅಂಟಿಸಿದ ಪೋಸ್ಟರ್‌ನಲ್ಲಿ 'ವಿದ್ಯಾರ್ಥಿಗಳ ಮನಸ್ಸಲ್ಲಿ ನಿಧನರಾದ ಪ್ರಿನ್ಸಿಪಾಲ್‌ಗೆ ಶ್ರದ್ಧಾಂಜಲಿ. ದುರಂತ ನಿವಾರಣೆಯಾಗಿ ಕ್ಯಾಂಪಸ್‌ ಸ್ವತಂತ್ರಗೊಂಡಿದೆ-ನೆಹರೂಗೆ ಶಾಪ ಮೋಕ್ಷ ' ಎಂಬ ಬರಹ ವಿವಾದಕ್ಕೀಡಾಗಿದೆ.

33 ವರ್ಷಗಳ ಕಾಲ ನೆಹರೂ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ಪ್ರಿನ್ಸಿಪಾಲರಾಗಿ ನಿವೃತ್ತರಾಗಲಿರುವ ಡಾ. ಪಿ.ವಿ. ಪುಷ್ಪಜ ಅವರ ಬೀಳ್ಕೊಡುಗೆಯನ್ನು ಎಸ್‌ಎಫ್‌ಐ ವಿದ್ಯಾರ್ಥಿಗಳು ಈ ರೀತಿ ಸಂಭ್ರಮಿಸಿದ್ದಾರೆ.

ಪ್ರಿನ್ಸಿಪಾಲರಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದು ತಾವು ಎಂಬುದಾಗಿ ಕಾಲೇಜಿನ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ನೇತಾರರು ಬಹಿರಂಗವಾಗಿ ಹೇಳಿಕೆ ನೀಡಿರುವುದೇ ಇದಕ್ಕೆ ಸಾಕ್ಷಿ ಎಂಬುದಾಗಿ ಡಾ. ಪಿ.ವಿ. ಪುಷ್ಪಜ ಪ್ರತಿಕ್ರಿಯಿಸಿದ್ದಾರೆ. ಆದರೆ ಪೋಸ್ಟರ್‌ ಮತ್ತು ಸಂಭ್ರಮದಲ್ಲಿ ಎಸ್‌ಎಫ್‌ಐಗೆ ಯಾವುದೇ ಸಂಬಂಧವಿಲ್ಲ ಎಂಬುದಾಗಿಯೂ, ಇಂತಹ ಕೃತ್ಯ ಯಾರು ಮಾಡಿದರೂ ಅದನ್ನು ಒಪ್ಪಿಕೊಳ್ಳಲಾಗದು ಎಂಬುದಾಗಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಕೆ. ಮಹೇಶ್‌ ಹೇಳಿದ್ದಾರೆ.

2016ರಲ್ಲಿ ಪಾಲ್ಘಾಟ್‌ ವಿಕ್ಟೋರಿಯಾ ಕಾಲೇಜಿನಲ್ಲಿ ಪ್ರಿನ್ಸಿಪಾಲರು ನಿವೃತ್ತಿಯಾದ ಸಂದರ್ಭದಲ್ಲಿ ಕಾಲೇಜು ಸಮೀಪ ಸಮಾಧಿ ನಿರ್ಮಿಸಿ ರೀತ್‌ ಇಟ್ಟ ಇದೇ ರೀತಿಯ ಘಟನೆ ನೆಹರೂ ಕಾಲೇಜಿನಲ್ಲಿ ನಡೆದಿತ್ತು.

ಕ್ಯಾಂಪಸ್‌ನಲ್ಲಿ ಪೋಸ್ಟ್‌ ಹಾಕಿದಲ್ಲದೇ ಬೀಳ್ಕೊಡುಗೆ ಕಾರ್ಯಕ್ರಮ ನಡೆಯುವಾಗಲೇ ವಿದ್ಯಾರ್ಥಿಗಳ ಸಂಘಟನೆಗಳು ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಯುಡಿಎಫ್‌ ಬೆಂಬಲಿತ ಅಧ್ಯಾಪಕ ಸಂಘಟನೆಯಾದ ಕೇರಳ ಪ್ರೈವೇಟ್‌ ಕಾಲೇಜು ಟೀಚರ್ಸ್‌ ಅಸೋಸಿಯೇಶನ್‌ನ ರಾಜ್ಯ ಕಾರ‍್ಯಕಾರಿ ಸಮಿತಿ ಸದಸ್ಯೆ, ಜಿಲ್ಲಾಧ್ಯಕ್ಷೆಯಾಗಿದ್ದ ಡಾ. ಪುಷ್ಪಜ 2016ರಲ್ಲಿ ನೆಹರೂ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಮೇ 31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಪ್ರಿನ್ಸಿಪಾಲರಾಗಿದ್ದ ಸಂದರ್ಭದಲ್ಲಿ ಅನೇಕ ಬಾರಿ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಎಸ್‌ಎಫ್‌ಐ ವಿದ್ಯಾರ್ಥಿಗಳ ಸಂಘಟನೆಗಳು ಪ್ರಿನ್ಸಿಪಾಲರನ್ನು ದಿಗ್ಬಂಧನಗೊಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ