ಆ್ಯಪ್ನಗರ

ಕಾಸರಗೋಡು: ಉಕ್ಕಿ ಹರಿದ ಚಂದ್ರಗಿರಿ ನದಿ, ತಗ್ಗು ಪ್ರದೇಶದ ಜನರ ಸ್ಥಳಾಂತರ

ಚಂದ್ರಗಿರಿ ನದಿ ಉಕ್ಕಿ ಹರಿದ ಪರಿಣಾಮ ಕಾಸರಗೋಡು ತಾಲೂಕಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿ ವಾಸವಾಗಿದ್ದವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಕಳನಾಡು ಸಮೂಹ ಗ್ರಾಮಗಳ 14 ಕುಟುಂಬಗಳ ಸದಸ್ಯರನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.

Vijaya Karnataka Web 11 Aug 2020, 1:57 pm
ಕಾಸರಗೋಡು: ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಇಬ್ಬರೂ ನೀರಿಗೆ ಬಿದ್ದು ಕಾಣೆಯಾಗಿದ್ದು, ಅವರ ಮೃತದೇಹಗಳು ಪತ್ತೆಯಾಗಿವೆ.
Vijaya Karnataka Web chandragiri river


ಕಳ್ಳಾರ್‌ ಗ್ರಾಮದ ಕಾಂಞಿರತ್ತಡಿ ನಿವಾಸಿ ನಾರಾಯಣನ್‌ ನಾಯರ್‌ ಅವರ ಪುತ್ರಿ ಶ್ರೀಲಕ್ಷ್ಮಿ(26) ಅವರ ಮೃತದೇಹ ಮನೆ ಬಳಿಯ ನೀರು ತುಂಬಿಕೊಂಡಿರುವ ಹಳ್ಳದಲ್ಲಿ ಪತ್ತೆಯಾಗಿದೆ. ವೆಳ್ಳರಿಕುಂಡ್‌ನಲ್ಲಿ ನೀರು ಪಾಲಾಗಿದ್ದ ಕಪ್ಪಿಲತ್‌ ಎಂಬ ವೃದ್ಧೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಕರಿಪುರ್ ವಿಮಾನ ದುರಂತ : ಕಣ್ಣೂರಿನಲ್ಲಿಳಿದ ವಿಮಾನ ಪ್ರಯಾಣಿಕರಿಗೆ ಯುವಕರ ತಂಡದಿಂದ ಫ್ರೀ ಫುಡ್‌ ಸೇವೆ..!

ಇತ್ತ ಚಂದ್ರಗಿರಿ ನದಿ ಉಕ್ಕಿ ಹರಿದ ಪರಿಣಾಮ ಕಾಸರಗೋಡು ತಾಲೂಕಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿ ವಾಸವಾಗಿದ್ದವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಕಳನಾಡು ಸಮೂಹ ಗ್ರಾಮಗಳ 14 ಕುಟುಂಬಗಳ ಸದಸ್ಯರನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಗ್ರಾಮ ವ್ಯಾಪ್ತಿಯ ಚಳಿಯಗೋಡು, ಪಳ್ಳಿಪ್ಪುರಂ, ಮಣಲ್‌, ಚೆಮ್ನಾಡ್‌, ಕೊಳಂಬೆಕ್ಕಾಲ್‌ ಪ್ರದೇಶಗಳ 64 ಮಂದಿ ಸ್ಥಳಾಂತರಗೊಂಡವರು.

ಮಗಳ ಮದುವೆಗೆ ಕೂಡಿಟ್ಟಿದ್ದ 1 ಲಕ್ಷ ಹಣವನ್ನು ಸಿಎಂ ನಿಧಿಗೆ ನೀಡಿದ ಕಾಸರಗೋಡಿನ ವ್ಯಕ್ತಿ

ಕರಿಚ್ಚೇರಿ ಹೊಳೆ ಉಕ್ಕಿ ಹರಿದು ಕೊಳತ್ತೂರು ಗ್ರಾಮದ 4 ಕುಟುಂಬಗಳ ಸದಸ್ಯರನ್ನು, ಚೆಂಗಳ ಗ್ರಾಮದ ಬೇವಿಂಜೆಯ ಒಂದು ಕುಟುಂಬದ ಸದಸ್ಯರನ್ನೂ ಸಂಬಂಧಿಕರ ಮನೆಗಳಿಗೆ, ಚಂದ್ರಗಿರಿ ಪ್ರದೇಶದ 16 ಕುಟುಂಬಗಳ 116 ಮಂದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಚಂದ್ರಗರಿ ನದಿ ತಟದ ಕೆಲವು ಪ್ರದೇಶಗಳಲ್ಲಿ ನೆರೆ ಭೀತಿ ಹೆಚ್ಚಳಗೊಳ್ಳುವ ಭೀತಿಯಿದೆ.

ಮಂಗಳೂರಿನ ಭಯಾನಕ ವಿಮಾನ ದುರಂತವನ್ನು ನೆನಪಿಸಿದ ಕೇರಳದ ವಿಮಾನ ಅಪಘಾತ..!

ಇನ್ನು ಆದೂರು, ಕುಂಬ್ಡಾಜೆ, ನೀರ್ಚಾಲು ಗ್ರಾಮಗಳಲ್ಲಿ ತಲಾ ಒಂದು ಮನೆಗಳು ಭಾಗಶಃ ಹಾನಿಗೊಂಡಿವೆ. ನೀರ್ಚಾಲು ಗ್ರಾಮದ ಮನೆಯೊಂದರ ಆವರಣ ಗೋಡೆ ಕುಸಿದಿದೆ. ತಳಂಗರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಆರಂಭಿಸಲಾಗಿರುವ ಕಾಳಜಿ ಕೇಂದ್ರದಲ್ಲಿಈಗ 13 ಕುಟುಂಬಗಳು ಆಸರೆ ಪಡೆದಿವೆ. ಕಾಸರಗೋಡು ನಗರದ ಸಿಟಿ ಟವರ್‌ ಸಂಸ್ಥೆಯ ಎದುರು ಬದಿಯ ಕಟ್ಟಡದ ಹಿಂಬದಿಯ ಗುಡ್ಡದ ಮಣ್ಣು ಕುಸಿದು ಅಪಾಯ ಸೂಚಿಸುತ್ತಿದೆ. ಸಮೀಪ ಪ್ರದೇಶಗಳಲ್ಲಿವಾಸಿಸುತ್ತಿರುವವರನ್ನು ಬೇರೆಡೆ ಸ್ಥಳಾಂತರಿಸುವಂತೆ ಕಾಸರಗೋಡು ಗ್ರಾಮಾಧಿಕಾರಿ ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ