ಆ್ಯಪ್ನಗರ

ಕಾಣಿಕೆ ಹುಂಡಿಯಲ್ಲಿ ಹಣಕ್ಕಿಂತ ಕಾಗದದ ತುಂಡುಗಳೇ ಹೆಚ್ಚು!

ಸುಪ್ರೀಂ ಕೋರ್ಟ್‌ ತೀರ್ಪು ಬಂದ ಕೂಡಲೇ ದೇವಸ್ವಂ ಮಂಡಳಿ ಅಧೀನದಲ್ಲಿರುವ ಕ್ಷೇತ್ರಗಳಲ್ಲಿ ಕಾಣಿಕೆ ಹಾಕದಂತೆ ವ್ಯಾಪಕ ಪ್ರಚಾರ ನಡೆಸಲಾಗಿತ್ತು. ಕ್ಷೇತ್ರಗಳಲ್ಲಿ ಬರುವ ಆದಾಯವನ್ನು ಸರಕಾರ ದರೋಡೆ ಮಾಡುತ್ತಿರುವುದಾಗಿ ಪ್ರಚಾರ ನಡೆದಿತ್ತು.

Vijaya Karnataka 23 Oct 2018, 8:13 am
ಕಾಸರಗೋಡು: ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆಯ ಕಾಣಿಕೆ ಹುಂಡಿಯಲ್ಲಿ ಹಣದ ಬದಲು ಅಯ್ಯಪ್ಪ ಭಕ್ತರು ‘ಸೇವ್‌ ಶಬರಿಮಲೆ’, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಬರೆದು ಹಾಕಿರುವ ಕಾಗದಗಳೇ ಹೆಚ್ಚಿನ ಪ್ರಮಾಣದಲ್ಲಿವೆ.
Vijaya Karnataka Web Shabarimala


ಸುಪ್ರೀಂ ಕೋರ್ಟ್‌ ತೀರ್ಪು ಬಂದ ಕೂಡಲೇ ದೇವಸ್ವಂ ಮಂಡಳಿ ಅಧೀನದಲ್ಲಿರುವ ಕ್ಷೇತ್ರಗಳಲ್ಲಿ ಕಾಣಿಕೆ ಹಾಕದಂತೆ ವ್ಯಾಪಕ ಪ್ರಚಾರ ನಡೆಸಲಾಗಿತ್ತು. ಕ್ಷೇತ್ರಗಳಲ್ಲಿ ಬರುವ ಆದಾಯವನ್ನು ಸರಕಾರ ದರೋಡೆ ಮಾಡುತ್ತಿರುವುದಾಗಿ ಪ್ರಚಾರ ನಡೆದಿತ್ತು.

ಇನ್ನು ತುಲಾ ಮಾಸದ ಪೂಜೆ ಅವಧಿಯಲ್ಲಿ ಸಂಗ್ರಹವಾದ ಕಾಣಿಕೆಯೂ ಕಳೆದ ವರ್ಷಕ್ಕಿಂತ ಗಣನೀಯವಾಗಿ ಕುಸಿದಿದೆ. ದರ್ಶನ ಆರಂಭಗೊಂಡ ಅ.17ರಿಂದ ನಾಲ್ಕು ದಿನಗಳ ಆದಾಯವು ಕಳೆದ ವರ್ಷಕ್ಕಿಂತ 44.50ಲಕ್ಷ ರೂ. ಇಳಿಕೆಯಾಗಿದೆ. ಕಳೆದ ವರ್ಷದ ತುಲಾ ಮಾಸ ಪೂಜೆಯ ಮೊದಲ ದಿನವೇ 8.42ಲಕ್ಷ ರೂ. ಕಾಣಿಕೆ ಬಂದಿದ್ದರೆ, ಈ ಬಾರಿ 4.83ಲಕ್ಷ ರೂ. ಮಾತ್ರ ಸಂದಾಯವಾಗಿದೆ.

ಎರಡನೇ ದಿನ 19.30ಲಕ್ಷ ರೂ. ಬಂದಿದೆ. ಕಳೆದ ವರ್ಷ 45.59ಲಕ್ಷ ರೂ. ಸಂಗ್ರಹವಾಗಿತ್ತು. ಅಂದರೆ 26.28ಲಕ್ಷ ರೂ. ಇಳಿಕೆಯಾಗಿದೆ. ಮೂರನೇ ದಿನ 17.51ಲಕ್ಷ ರೂ. ಕಾಣಿಕೆ ಬಂದಿದೆ. ಕಳೆದ ವರ್ಷ ಅದು 32.30ಲಕ್ಷ ರೂ.ಗಳಾಗಿದ್ದು, ಇದರಲ್ಲಿ 14.79ಲಕ್ಷ ಇಳಿಕೆಯಾಗಿದೆ. ನಾಲ್ಕನೇ ದಿನ ಶನಿವಾರ ಮಾತ್ರ ಕಳೆದ ವರ್ಷಕ್ಕಿಂದ 15,800 ರೂ. ಅಧಿಕ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ