ಆ್ಯಪ್ನಗರ

ವಿಷಾಂಶರಹಿತ ಬೆಲ್ಲ ತಯಾರಿ

ಕಾಸರಗೋಡು ಜಿಲ್ಲೆಯಲ್ಲಿ ಬೆಲ್ಲ ಮಾರಾಟ ನಿಷೇಧಿಸಿದ್ದರೂ ಸರಕಾರ ಮನಸ್ಸು ಮಾಡಿದರೆ ಕಣ್ಣೂರು ಕಬ್ಬು ಸಂಶೋಧನಾ ಕೇಂದ್ರದಿಂದ ವಿಷಾಂಶರಹಿತ ಬೆಲ್ಲ ಉತ್ಪಾದಿಸಬಹುದಾಗಿದೆ.

Vijaya Karnataka 14 Jan 2019, 5:00 am
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬೆಲ್ಲ ಮಾರಾಟ ನಿಷೇಧಿಸಿದ್ದರೂ ಸರಕಾರ ಮನಸ್ಸು ಮಾಡಿದರೆ ಕಣ್ಣೂರು ಕಬ್ಬು ಸಂಶೋಧನಾ ಕೇಂದ್ರದಿಂದ ವಿಷಾಂಶರಹಿತ ಬೆಲ್ಲ ಉತ್ಪಾದಿಸಬಹುದಾಗಿದೆ.
Vijaya Karnataka Web poisionless jaggery from kannur sugarcane research centre
ವಿಷಾಂಶರಹಿತ ಬೆಲ್ಲ ತಯಾರಿ


ಪ್ರಸ್ತುತ ಲಭಿಸುವ ಬೆಲ್ಲದಲ್ಲಿ ಹಲವಾರು ರಾಸಾಯನಿಕ ವಸ್ತುಗಳ ಅಂಶ ಹೆಚ್ಚು ಇರುವುದರಿಂದ ಆರೋಗ್ಯ ಭದ್ರತಾ ಇಲಾಖೆಯು ಮಾರಾಟವನ್ನು ನಿಷೇಧಿಸಿದೆ. ಮಾತ್ರವಲ್ಲದೆ ಇಂತಹ ಬೆಲ್ಲ ಶರೀರಕ್ಕೆ ದೋಷಕಾರಕವಾಗಿದೆ ಎಂಬುದನ್ನು ಅಧ್ಯಯನ ಮೂಲಕ ಪತ್ತೆಹಚ್ಚಲಾಗಿದೆ.

ಬೆಲ್ಲಕ್ಕೆ ಪರಾರ‍ಯಯವಾಗಿ ಹೊಸ ಉತ್ಪನ್ನ ತಯಾರಿಸಲು ಕಣ್ಣೂರು ಕಬ್ಬು ಸಂಶೋಧನಾ ಕೇಂದ್ರ ಕಳೆದ ವರ್ಷ ಮುಂದೆ ಬಂದಿತ್ತು. ಕಬ್ಬು ಸಂಶೋಧನಾ ಕೇಂದ್ರದಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ದ್ರಾವಕ ರೂಪದಲ್ಲಿ ನೂತನ ರೀತಿಯ ಬೆಲ್ಲ ತಯಾರಿಸಲಾಗಿದೆ. ಇದರ ರುಚಿ ಕಬ್ಬು ಹಾಗೂ ಜೇನನ್ನು ಒಳಗೊಂಡದ್ದಾಗಿದೆ ಎಂಬುದು ಇನ್ನೊಂದು ವಿಶೇಷತೆಯಾಗಿದೆ.

ಸರಕಾರ ಮನಸ್ಸು ಮಾಡಿದರೆ ಬೆಲ್ಲ ಉತ್ಪಾದನಾ ಕ್ಷೇತ್ರದಲ್ಲಿ ಕಣ್ಣೂರು ಕಬ್ಬು ಸಂಶೋಧನಾ ಕೇಂದ್ರದ ಮೂಲಕ ಹೊಸದೊಂದು ಸಾಧನೆ ಮಾಡಬಹುದಾಗಿದೆ. ಉತ್ಪಾದನೆ ಹಾಗೂ ವಿತರಣೆಯನ್ನು ಕುಟುಂಬಶ್ರೀ ಮೂಲಕ ನಿರ್ವಹಿಸಲು ರಾಜ್ಯ ವಿಜ್ಞಾನ-ಸಂಶೋಧನಾ ಇಲಾಖೆಗೆ ಯೋಜನೆಯನ್ನು ಸಲ್ಲಿಸಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ.

ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಎರಡು ಘಟಕಗಳಲ್ಲಿ 239 ಲಕ್ಷ ರೂ.ನ ಮುಂಗಡಪತ್ರವನ್ನು ಸಂಶೋಧನಾ ಕೇಂದ್ರ ಸಲ್ಲಿಸಿದೆ. ಸರಕಾರ ಅನುದಾನ ಮಂಜೂರುಗೊಳಿಸಿದರೆ ಕಣ್ಣೂರು, ಕಾಸರಗೋಡು ಜಿಲ್ಲೆಗಳ ಕುಟುಂಬಶ್ರೀ ನೌಕರರಿಗೂ ನೂತನ ರೀತಿಯ ಬೆಲ್ಲವನ್ನು ವಾಣಿಜ್ಯಾಧಾರದಲ್ಲಿ ಉತ್ಪಾದಿಸಲು ಇತಿಮಿತಿಗಳಿವೆ ಎಂದೂ, ಕುಟುಂಬಶ್ರೀ ಘಟಕವನ್ನು ಬಳಸಿಕೊಂಡರೆ ಉದ್ಯೋಗ ಕ್ಷೇತ್ರದಲ್ಲೂ ಭಾರಿ ಬದಲಾವಣೆಗಳನ್ನು ತರಲು ಬೆಲ್ಲ ಉತ್ಪಾದನೆಯ ಮೂಲಕ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ರಾಸಾಯನಿಕ ವಸ್ತುಗಳು: ಪ್ರಸ್ತುತ ಲಭಿಸುವ ಬೆಲ್ಲದಲ್ಲಿ ಬಟ್ಟೆಗೆ ಬಣ್ಣ ಬರಲು ಉಪಯೋಗಿಸುವ ರೋಡಾಮಿನ್‌ ಬಿ, ಬ್ರಿಲ್ಯಂಟ್‌ ಬ್ಲೂ ಮೊದಲಾದ ವಿವಿಧ ರೀತಿಯ ಬಣ್ಣಗಳ, ರಾಸಾಯನಿಕ ವಸ್ತುಗಳ ಅಂಶ ಇರುವುದಾಗಿ ತಪಾಸಣೆ ಮೂಲಕ ಆಹಾರ ಭದ್ರತಾ ಇಲಾಖೆ ಖಚಿತಪಡಿಸಿದೆ.

ಕಬ್ಬು ಸಂಶೋಧನಾ ಕೇಂದ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲ ಉತ್ಪಾದಿಸುವ ಘಟಕ ಆರಂಭಿಸಲು ಸರಕಾರ ಮಧ್ಯಪ್ರವೇಶಿಸಬೇಕು ಎಂದು ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ