ಆ್ಯಪ್ನಗರ

ಅಂಚೆ ಕಚೇರಿ ಜನಪರ ಸೇವಾ ಕೇಂದ್ರಗಳು

ಅಂಚೆ ಕಚೇರಿಗಳು ಜನಪರ ಸೇವಾ ಕೇಂದ್ರಗಳಾಗುತ್ತಿವೆ. ವಿದ್ಯುತ್‌ ಬಿಲ್‌ಗಳನ್ನು ಪಾವತಿಸಲು ರೈಲು ಟಿಕೆಟ್‌ ಬುಕ್ಕಿಂಗ್‌ ಮೊದಲಾದ 42 ಸೇವೆಗಳು ಅಂಚೆ ಕಚೇರಿಯಿಂದ ಲಭ್ಯವಾಗಲಿವೆ.

Vijaya Karnataka 16 Oct 2019, 5:00 am
ಕಾಸರಗೋಡು: ಅಂಚೆ ಕಚೇರಿಗಳು ಜನಪರ ಸೇವಾ ಕೇಂದ್ರಗಳಾಗುತ್ತಿವೆ. ವಿದ್ಯುತ್‌ ಬಿಲ್‌ಗಳನ್ನು ಪಾವತಿಸಲು ರೈಲು ಟಿಕೆಟ್‌ ಬುಕ್ಕಿಂಗ್‌ ಮೊದಲಾದ 42 ಸೇವೆಗಳು ಅಂಚೆ ಕಚೇರಿಯಿಂದ ಲಭ್ಯವಾಗಲಿವೆ.
Vijaya Karnataka Web post office people oriented
ಅಂಚೆ ಕಚೇರಿ ಜನಪರ ಸೇವಾ ಕೇಂದ್ರಗಳು

ಜನನ, ಮರಣ, ಜಾತಿ, ಆದಾಯ ಪ್ರಮಾಣ ಪತ್ರಗಳಿಗೆ ಇನ್ನು ಮುಂದೆ ಅಂಚೆ ಕಚೇರಿಗಳನ್ನು ಸಂಪರ್ಕಿಸಬ ಹುದಾಗಿದೆ. ಗ್ರಾಮೀಣ ವಲಯ ಉದ್ಯಮಿ (ಗ್ರಾಮ ಮಟ್ಟದ ಎಂಟರ್‌ಪ್ರಣರ್‌ ವಿಎಲ್‌ಇ) ಎಂಬ ಹೆಸರಿನ ಯೋಜನೆ ಇದಾಗಿದೆ. ಅಕ್ಷಯ ಕೇಂದ್ರಗಳಿಗೆ ಸಮಾನವಾಗಿ ಕೇಂದ್ರಗಳು ಕಾರ್ಯಾಚರಿಸಲಿವೆ.
ಗ್ರಾಮೀಣ ವಲಯಗಳಲ್ಲಿರುವ ಅಂಚೆ ಕಚೇರಿಗಳಲ್ಲಿಇಂತಹ ಜನಪರ ಸೇವೆಗಳು ಲಭ್ಯವಾಗಲಿವೆ. ವಿಶ್ವವಿದ್ಯಾಲಯ ಶುಲ್ಕ ಗಳು ಇತ್ಯಾದಿ ಪಾವತಿಸಲು ಸಾಧ್ಯವಿರುವು ದರಿಂದ ಯೋಜನೆಗೆ ಬೇಡಿಕೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ನಾನಾ ಸೇವೆಗಳಿಗೆ ರಾಜ್ಯ ಸರಕಾರ ನಿಗದಿಪಡಿಸಿದ ಹಣವನ್ನು ನೀಡಬೇಕಿದೆ.
ಈ ಕುರಿತು ಕೇಂದ್ರ ಅಂಚೆ ಇಲಾಖೆಯ ನಿರ್ದೇಶನಕ್ಕೆ ಪ್ರತಿಕ್ರಿಯೆಯಾಗಿ 23 ಅಂಚೆ ಡಿವಿಶನ್‌ಗಳ ಪ್ರತಿಯೊಂದು ಅಂಚೆ ಕಚೇರಿಗಳನ್ನು ಪೈಲೆಟ್‌ ಯೋಜನೆಯಲ್ಲಿಸೇರ್ಪಡಿಸಬೇಕು ಎಂದು ಕೇರಳ ಅಂಚೆ ಇಲಾಖೆ ಪತ್ರ ಕಳುಹಿಸಿದೆ. ಗ್ರಾಮಗಳಲ್ಲಿನವೀನ ಕಾರಾರ‍ಯಚರ ಣೆಯ ಮೂಲಕ ಅಂಚೆ ಇಲಾಖೆಯ ಮುಖನೋಟ ಬದಲಾಯಿಸುವುದು ಪ್ರಧಾನ ಉದ್ದೇಶವಾಗಿದೆ.
ಭಾರತದ 1,55,000 ಅಂಚೆ ಕಚೇರಿಗಳಲ್ಲಿಗ್ರಾಮೀಣ ವಲಯದ 1,29,000 ಕಚೇರಿಗಳಲ್ಲಿವಿಎಲ್‌ಇ ಯೋಜನೆ ಬರಲಿದೆ. ಅಂಚೆ ಕಚೇರಿ ಗಳಲ್ಲಿಯೋಜನೆಯನ್ನು ಆರಂಭಿಸು ವುದರಿಂದ ನೂತನ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಬೇಕಾಗಿಲ್ಲ. ಪ್ರಸ್ತುತ ಆನ್‌ಲೈನ್‌ ಜಾಲ ಇತ್ಯಾದಿ ಇರುವುದ ರಿಂದ ಅಧಿಕ ಖರ್ಚಿಲ್ಲ. ಜನರಿಗೆ ಅತ್ಯುತ್ತಮ ಸೇವೆ ನೀಡುವುದರಿಂದ ನೌಕರರಿಗೆ ಸೇವಾದರದ ಶೇ.80 ನೀಡಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ