ಆ್ಯಪ್ನಗರ

ಶಬರಿಮಲೆ ಮಹಿಳಾ ಪ್ರವೇಶ ತೀರ್ಪು: ರಾಷ್ಟ್ರಪತಿಗಳ ಫೇಸ್‌ಬುಕ್‌ ಪೇಜ್‌ನಲ್ಲಿ ದೂರುಗಳ ಸರಮಾಲೆ

ಶಬರಿಮಲೆ ಸನ್ನಿಧಾನ ದರ್ಶನಕ್ಕಾಗಿ ಮಹಿಳೆಯರಿಗೆ ವಯೋಮಿತಿಯ ವ್ಯಾಪ್ತಿಯಿಲ್ಲದೇ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್‌ ತೀರ್ಪು ವಿರುದ್ಧ ಹಿಂದೂ ಸಂಘಟನೆಗಳು ಕೇರಳದಲ್ಲಿ ...

Vijaya Karnataka 4 Oct 2018, 5:00 am
ಕಾಸರಗೋಡು: ಶಬರಿಮಲೆ ಸನ್ನಿಧಾನ ದರ್ಶನಕ್ಕಾಗಿ ಮಹಿಳೆಯರಿಗೆ ವಯೋಮಿತಿಯ ವ್ಯಾಪ್ತಿಯಿಲ್ಲದೇ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್‌ ತೀರ್ಪು ವಿರುದ್ಧ ಹಿಂದೂ ಸಂಘಟನೆಗಳು ಕೇರಳದಲ್ಲಿ ವ್ಯಾಪಕ ಪ್ರತಿಭಟನೆ ನಡೆಸುವಾಗ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ದೂರುಗಳ ಸುರಿಮಳೆಯಾಗಿದೆ.
Vijaya Karnataka Web president facebook page
ಶಬರಿಮಲೆ ಮಹಿಳಾ ಪ್ರವೇಶ ತೀರ್ಪು: ರಾಷ್ಟ್ರಪತಿಗಳ ಫೇಸ್‌ಬುಕ್‌ ಪೇಜ್‌ನಲ್ಲಿ ದೂರುಗಳ ಸರಮಾಲೆ


ಶಬರಿಮಲೆಗಳ ಆಚಾರಗಳು, ವಿಸ್ವಾಸಗಳನ್ನು ರಕ್ಷಿಸಬೇಕು, ವಯೋಮಿತಿಯಿಲ್ಲದೇ ಮಹಿಳೆಯರಿಗೆ ಪ್ರವೇಶ ನೀಡಿರುವುದು ಸಂಸ್ಕೃತಿಗೆ ವಿರುದ್ಧವಾಗಿದೆ. ತೀರ್ಪು ನಿರಾಶೆದಾಯಕವಾಗಿದೆ ಅದ್ದರಿಂದ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಹೀಗೆ ಫೇಸ್‌ಬುಕ್‌ ಪೇಜ್‌ನಲ್ಲಿ ದೂರುಗಳನ್ನು ಪೋಸ್ಟ್‌ ಮಾಡಲಾಗಿದೆ.

ಫೇಸ್‌ಬುಕ್‌ ಪೇಜ್‌ ಮೂಲಕ ಇತರ ಧರ್ಮಗಳಲ್ಲಿರುವರೂ, ಹೊರರಾಜ್ಯಗಳಿಂದಲೂ ಸಾವಿರಾರು ಮಹಿಳೆಯರು ಸಹಿತ ಭಕ್ತರು ರಾಷ್ಟ್ರಪತಿಯವರ ಅಧಿಕೃತ ಫೇಸ್‌ಬುಕ್‌ನಲ್ಲಿ ಮಹಿಳಾ ಪ್ರವೇಶದ ವಿರುದ್ಧ ದೂರು ನೀಡಿರುವುದು. ಹೆಚ್ಚಿನವರು ತಮ್ಮನ್ನು ಸ್ವತ: ಪರಿಚಯಿಸಿಕೊಂಡು ಫೋಸ್ಟ್‌ ಮಾಡಿರುವುದು. ಇನ್ನಾನೇಕ ಮಂದಿ ದೂರುಗಳನ್ನು ಕಾಮೆಂಟ್‌ ಆಗಿ ಸಹ ದಾಖಲಿಸಿದ್ದಾರೆ.

ಶಬರಿಮಲೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್‌ ಪೇಜ್‌ನಲ್ಲೂ ಸಾವಿರಾರು ಮಂದಿ ಪೋಸ್ಟ್‌ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ