ಆ್ಯಪ್ನಗರ

ಪ್ರಧಾನಿಗೆ ಪತ್ರ ಕಳುಹಿಸಿ ಪ್ರತಿಭಟನೆ

ದೇಶದಲ್ಲಿಹೆಚ್ಚುತ್ತಿರುವ ಹತ್ಯಾ ಕಾಂಡಗಳಲ್ಲಿಆತಂಕ ವ್ಯಕ್ತಪಡಿಸಲು ಪ್ರಧಾನಮಂತ್ರಿಗೆ ಪತ್ರ ಕಳುಹಿಸಿ ಯೂತ್‌ಲೀಗ್‌ ಪ್ರತಿಭಟಿಸಿದೆ.

Vijaya Karnataka Web 7 Oct 2019, 5:00 am
ಕಾಸರಗೋಡು: ದೇಶದಲ್ಲಿಹೆಚ್ಚುತ್ತಿರುವ ಹತ್ಯಾ ಕಾಂಡಗಳಲ್ಲಿಆತಂಕ ವ್ಯಕ್ತಪಡಿಸಲು, ಸರಕಾರದ ಗಮನಕ್ಕೆ ತರಲು ಪ್ರಧಾನಮಂತ್ರಿಗೆ ಪತ್ರ ಕಳುಹಿ ಸಿದ ಹಿನ್ನೆಲೆಯಲ್ಲಿಅಡೂರು ಗೋಪಾಲಕೃಷ್ಣ ಸಹಿತ 49 ಸಾಂಸ್ಕೃತಿಕ ಪ್ರಮುಖರ ಹೆಸರಿನಲ್ಲಿರಾಷ್ಟ್ರದ್ರೋಹ ಅಪರಾಧ ವಿಧಿಸಿ ಕೇಸುದಾಖಲಿಸಿದ ಕ್ರಮದ ವಿರುದ್ಧ, ಹತ್ಯಾಕಾಂಡ ನಿಯಂತ್ರಿಸಲು ನಿಯಮ ನಿರ್ಮಾಣ ನಡೆಸಬೇಕು ಎಂದು ಆಗ್ರ ಹಿಸಿ ಪ್ರಧಾನಮಂತ್ರಿಗೆ ಪತ್ರ ಕಳುಹಿಸಿ ಯೂತ್‌ಲೀಗ್‌ ಪ್ರತಿಭಟಿಸಿದೆ.
Vijaya Karnataka Web protest through letetr to prime minister
ಪ್ರಧಾನಿಗೆ ಪತ್ರ ಕಳುಹಿಸಿ ಪ್ರತಿಭಟನೆ

ಸಾಂಸ್ಕೃತಿಕ ನೇತಾರರ ವಿರುದ್ಧ ಕೇಸು ದಾಖಲಿ ಸಿರುವುದನ್ನು ಪ್ರತಿಭಟಿಸಿ ಮುಸ್ಲಿಂ ಯೂತ್‌ ಲೀಗ್‌ ಕಾರ‍್ಯಕರ್ತರು ಪ್ರಧಾನಮಂತ್ರಿಗೆ ಪತ್ರ ಕಳುಹಿಸಿ ಪ್ರತಿಭಟಿಸಿದರು.
ಮುಸ್ಲಿಂ ಯೂತ್‌ ಲೀಗ್‌ ಮೊಗ್ರಾಲ್‌ಪುತ್ತೂರು ಪಂಚಾಯಿತಿ ಸಮಿತಿ ಎರಿಯಾಲ್‌ ಕೂಡ್ಲುಅಂಚೆಕಚೇರಿ ಎದುರು ನಡೆದ ಕಾರ‍್ಯಕ್ರಮವನ್ನು ಜಿಲ್ಲಾಕಾರ‍್ಯದರ್ಶಿ ಎಂ. ಎ. ನಜೀಬ್‌ ಮೊದಲ ಕಾಗದವನ್ನು ಪೋಸ್ಟ್‌ ಮಾಡಿ ಉದ್ಘಾಟಿಸಿದರು. ಪ್ರಧಾನ ಕಾರ‍್ಯದರ್ಶಿ ನವಾಸ್‌ ಎರಿಯಾಲ್‌, ಎ. ಪಿ. ಹನೀಫ್‌, ಹಸೀಬ್‌ ಚೌಕಿ, ಮುಜೀಬ್‌ ಲಿಬಾಸ್‌, ಸಫ್ವಾನ್‌ ಮೊಗರ್‌, ಹಂರಾಸ್‌ ಎರಿಯಾಲ್‌, ಅಶ್ರಫ್‌ ಎರಿಯಾಲ್‌ ಅರ್ಶಾದ್‌ ಬೆಳ್ಳೀರ್‌, ಸಮೀರ್‌ ಸಿದ್ಧಕಟ್ಟೆ, ಅಸ್ರು ಕುಳಂಗರೆ, ಅಹಮ್ಮದ್‌ ಆಝಾದ್‌ ನಗರ್‌ ಉಪಸ್ಥಿತರಿದ್ದರು.
ಕಾಸರಗೋಡು ಸಾಂಸ್ಕೃತಿಕ ನಾಯಕರ ವಿರುದ್ಧ ಕೇಸು ದಾಖಲಿಸಿದ ಕ್ರಮವನ್ನು ಪ್ರತಿಭಟಿಸಿ ಮುಸ್ಲಿಂ ಯೂತ್‌ ಲೀಗ್‌ ಕಾರ್ಯಕರ್ತರು ಪ್ರಧಾನಮಂತ್ರಿಗೆ ಪತ್ರ ಕಳುಹಿಸಿ ಪ್ರತಿಭಟಿಸಿದರು. ಮುಸ್ಲಿಂ ಲೀಗ್‌ ನಗರಸಭೆ ಕಾರ್ಯದರ್ಶಿ ಹಮೀದ್‌ ಬೆದಿರ ಉದ್ಘಾಟಿಸಿದರು. ಹಖೂಂ ಅಜ್ಮಲ್‌ ತಳಂಗರೆ ಅಧ್ಯಕ್ಷತೆ ವಹಿಸಿದ್ದರು.
ಯೂತ್‌ ಲೀಗ್‌ ಮಂಡಲ ಅಧ್ಯಕ್ಷ ಸಹೀರ್‌ ಮಂಡಲ ಅಧ್ಯಕ್ಷ ಸಹೀದ್‌ ಅಸಿಫ್‌, ಅಷ್ಪಾಕ್‌ ಅಬೂಬಕ್ಕರ್‌ ತುರ್ತಿ, ಫಿರೊಸ್‌ ಅಡ್ಕತ್ತಬೈಲು, ಹಾರಿಸ್‌ ಬೆದಿರ, ನೌಫಲ್‌ ತಾಯಲ್‌, ರಶೀದ್‌ ಗಝಾಲಿ, ಮುಸಮ್ಮಿಲ್‌ ಎಸ್‌. ಕೆ., ಖಲೀಲ್‌ ಶೇಖ್‌ ಕೊಲ್ಲಂಪಾಡಿ, ಸಿದ್ಧೀಕ್‌ ಚಕ್ಕರೆ, ಶೆಬೀರ್‌ ತುರ್ತಿ, ಶೆಬೀರ್‌ ಕಂಡತ್ತಿಲ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ