ಆ್ಯಪ್ನಗರ

ಪಡಿತರ ಕಾರ್ಡು ಆಧಾರ್‌ ಲಿಂಕಿಂಗ್‌ಗೆ ಇಂದು ಕೊನೆ

ಪಡಿತರ ಕಾರ್ಡಿನೊಂದಿಗೆ ಆಧಾರ್‌ ಲಿಂಕ್‌ ಮಾಡಲಿರುವ ಅಂತಿಮ ದಿನಾಂಕ ಸೆ. 30 ಆಗಿದೆ.

Vijaya Karnataka 30 Sep 2019, 5:00 am
ಕಾಸರಗೋಡು: ಪಡಿತರ ಕಾರ್ಡಿನೊಂದಿಗೆ ಆಧಾರ್‌ ಲಿಂಕ್‌ ಮಾಡಲಿರುವ ಅಂತಿಮ ದಿನಾಂಕ ಸೆ. 30 ಆಗಿದೆ. ಪಡಿತರ ಕಾರ್ಡ್‌ ಮಾಲೀಕ ಹಾಗೂ ಪಡಿತರ ಕಾರ್ಡಿನಲ್ಲಿರುವ ಇತರ ಸದಸ್ಯರು ಆಧಾರ್‌ ಲಿಂಕ್‌ ಮಾಡಬೇಕಿದೆ. ಪಡಿತರ ಕಾರ್ಡಿನೊಂದಿಗೆ ಆಧಾರ್‌ ಲಿಂಕ್‌ ಮಾಡದಿದ್ದಲ್ಲಿ ಆ ಸದಸ್ಯನಿಗೆ ಸೆ. 30ರಿಂದ ಪಡಿತರ ಸಾಮಗ್ರಿಗಳು ಅಲಭ್ಯವಾಗಲಿವೆ. ಕೇರಳದಲ್ಲಿಈಗಾಗಲೇ ಶೇ.99 ಪಡಿತರ ಕಾರ್ಡು ಮಾಲೀಕರು ಹಾಗೂ ಶೇ.85 ಪಡಿತರ ಕಾರ್ಡು ಸದಸ್ಯರು ಆಧಾರ್‌ ಲಿಂಕ್‌ ಪೂರ್ತಿಗೊಳಿಸಿದ್ದಾರೆ.
Vijaya Karnataka Web ration card adhar link
ಪಡಿತರ ಕಾರ್ಡು ಆಧಾರ್‌ ಲಿಂಕಿಂಗ್‌ಗೆ ಇಂದು ಕೊನೆ


ಲಿಂಕ್‌ ಮಾಡುವ ವಿಧಾನ:

*ಆಧಾರ್‌ ಹಾಗೂ ಪಡಿತರ ಕಾರ್ಡಿನೊಂದಿಗೆ ಪಡಿತರ ಅಂಗಡಿಗೆ ತೆರಳಿ ಇ-ಪೋಸ್‌ ಯಂತ್ರದ ಮೂಲಕ ಲಿಂಕ್‌ ಮಾಡಬೇಕು.

*ಆಧಾರ್‌ ನಂಬ್ರ ಹಾಗೂ ದೂರವಾಣಿ ಸಂಖ್ಯೆ ಸೇರ್ಪಡಿಸಲು ತಾಲೂಕು ಸಪ್ಲೆತ್ರೖ ಕಚೇರಿ, ಸಇಟಿ ರೇಶನಿಂಗ್‌ ಕಚೇರಿ ಎಂಬೆಡೆಗಳಲ್ಲಿಆಧಾರ್‌, ಪಡಿತರ ಕಾರ್ಡುಗಳನ್ನು ಹಾಜರುಪಡಿಸಬೇಕಿದೆ. ದೂರವಾಣಿ ಸಂಖ್ಯೆ ಲಿಂಕ್‌ ಮಾಡಿದರೆ ಪಡಿತರ ಸಾಮಗ್ರಿಗಳ ಕುರಿತು ಎಸ್‌ಎಂಎಸ್‌ ಲಭಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ