ಆ್ಯಪ್ನಗರ

ಕೇರಳದಲ್ಲಿ ಘೋಷಿಸಿದ್ದ ರೆಡ್‌ ಅಲರ್ಟ್‌ ಹಿಂತೆಗೆತ

ಕೇರಳದಲ್ಲಿ ಘೋಷಿಸಿದ್ದ ರೆಡ್‌ ಅಲರ್ಟ್‌ನ್ನು ಕೇಂದ್ರ ಹವಾಮಾನ ಇಲಾಖೆ ಹಿಂತೆಗೆದಿದೆ. ಆದರೆ ಜೂ.10, 11, 12ರಂದು ಕೇರಳದ ವಿವಿಧ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಜಾರಿಯಲ್ಲಿರಲಿದೆ ಎಂದು ಕೇಂದ್ರ ಹವಾಮಾನ ನಿರೀಕ್ಷ ಣಾ ಇಲಾಖೆ ತಿಳಿಸಿದೆ.

Vijaya Karnataka 10 Jun 2019, 5:00 am
ಕಾಸರಗೋಡು: ಕೇರಳದಲ್ಲಿ ಘೋಷಿಸಿದ್ದ ರೆಡ್‌ ಅಲರ್ಟ್‌ನ್ನು ಕೇಂದ್ರ ಹವಾಮಾನ ಇಲಾಖೆ ಹಿಂತೆಗೆದಿದೆ. ಆದರೆ ಜೂ.10, 11, 12ರಂದು ಕೇರಳದ ವಿವಿಧ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಜಾರಿಯಲ್ಲಿರಲಿದೆ ಎಂದು ಕೇಂದ್ರ ಹವಾಮಾನ ನಿರೀಕ್ಷ ಣಾ ಇಲಾಖೆ ತಿಳಿಸಿದೆ.
Vijaya Karnataka Web red alert announcement in kerala withdrawn
ಕೇರಳದಲ್ಲಿ ಘೋಷಿಸಿದ್ದ ರೆಡ್‌ ಅಲರ್ಟ್‌ ಹಿಂತೆಗೆತ


ಜೂ.10ರಂದು ಎರ್ನಾಕುಳಂ, ಮಲಪ್ಪುರಂ ಜಿಲ್ಲೆ, ಜೂ.11ರಂದು ಎರ್ನಾಕುಳಂ, ತ್ರಿಶೂರು, ಮಲಪ್ಪುರ ಜಿಲ್ಲೆ, ಜೂ.12ರಂದು ಎರ್ನಾಕುಳಂ, ಕೋಝಿಕ್ಕೋಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಜಾರಿಯಲ್ಲಿರಲಿದೆ. ಈ ಜಿಲ್ಲೆಗಳಲ್ಲಿ 115 ಮಿ.ಮೀ.ವರೆಗೆ ಮಳೆ ಅಥವಾ 115 ಮಿ.ಮೀ.ನಿಂದ 204.5 ಮಿ.ಮೀ.ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ತಿಳಿಸಲಾಗಿದೆ.

ಜೂ.10ರಂದು ಕೊಟ್ಟಾಯಂ, ತ್ರಿಶೂರು, ಕೋಝಿಕ್ಕೋಡು, ಕಣ್ಣೂರು, ವಯನಾಡು, ಕಾಸರಗೋಡು ಜಿಲ್ಲೆ, ಜೂ.11ರಂದು ಕೊಲ್ಲಂ, ಆಲಪ್ಪುಯ, ಕೋಝಿಕ್ಕೋಡು, ವಯನಾಡು ಜಿಲ್ಲೆ, ಜೂ.12ರಂದು ಆಲಪ್ಪುಯ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಪ್ರತಿ ಬಾರಿಯೂ ಏಪ್ರಿಲ್‌ನಲ್ಲೇ ಆರಂಭಗೊಳ್ಳುವ ಮಳೆ ಈ ಬಾರಿ ತಡವಾಗಿದೆ. ಕಳೆದ ಡಿಸೆಂಬರ್‌ನಿಂದಲೇ ಹಲವೆಡೆ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದು, ಈಗಲೂ ಮುಂದುವರಿದಿದೆ. ಬತ್ತಿದ ಬಾವಿ, ಹೊಳೆ ಮೊದಲಾದ ಜಲಾಶಯಗಳು ಇನ್ನೂ ತುಂಬಿಲ್ಲ. ಮಳೆಯ ಸೂಚನೆ ಲಭಿಸದೆ ಭತ್ತ ಕೃಷಿಗೆ ಇಳಿಯಲು ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಬಾರಿ ಭತ್ತ ಕೃಷಿ ಕಷ್ಟವಾಗಲಿದೆ. ತರಕಾರಿ, ಹಣ್ಣುಹಂಪಲು, ಅಕ್ಕಿ ಇನ್ನಿತರ ನಿತ್ಯೋಪಯೋಗಿ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ದಿನೇ ದಿನೆ ಬೆಲೆ ಏರುತ್ತಿರುವಾಗ ಜನಸಾಮಾನ್ಯರು ಬಾಯಿಬಿಟ್ಟು ನೋಡುವಂತಾಗಿದೆ. ಮಳೆರಾಯ ದಯೆ ತೋರಿಸದಿದ್ದರೆ ಜನಜೀವನ ಸಂಕಷ್ಟಕ್ಕೀಡಾಗಲಿದೆ.

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಗಾಳಿ: ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯಾದ್ಯಂತ ಭಾನುವಾರ ಬೆಳಗ್ಗಿನಿಂದಲೇ ಭಾರೀ ಗಾಳಿ ಬೀಸುತ್ತಿದ್ದು, ಮಳೆಯ ಆಗಮನವನ್ನು ಸೂಚಿಸುತ್ತಿದೆ. ಭಾರೀ ಗಾಳಿ ಪರಿಣಾಮ ಹಲವೆಡೆ ವಿದ್ಯುತ್‌ ಕೈಕೊಟ್ಟಿದೆ. ಕರಾವಳಿಯ ಹಲವೆಡೆ ತುಂತುರು ಮಳೆ ಸುರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ