ಆ್ಯಪ್ನಗರ

ಧರಾಶಾಯಿಯಾಗುತ್ತಿವೆ ಸಾಲು ಮರಗಳು

ಪರಪ್ಪ ರಕ್ಷಿತಾರಣ್ಯ ವಲಯ, ಎಣ್ಮಕಜೆ ಹಾಗೂ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವರ್ಗ-ಕಿನ್ನಿಂಗಾರು ರಸ್ತೆ ಬದಿಗಳಲ್ಲಿ ಅಪಾಯ ಸಾಧ್ಯತೆಯ ರಸ್ತೆಗೆ ವಾಲಿ ನಿಂತ ಹಲವು ಮರಗಳಲ್ಲಿ ಒಂದೊಂದೇ ಧರೆಗುರುಳುತ್ತಿವೆ.

Vijaya Karnataka 20 Jun 2019, 5:00 am
ಪೆರ್ಲ: ಪರಪ್ಪ ರಕ್ಷಿತಾರಣ್ಯ ವಲಯ, ಎಣ್ಮಕಜೆ ಹಾಗೂ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವರ್ಗ-ಕಿನ್ನಿಂಗಾರು ರಸ್ತೆ ಬದಿಗಳಲ್ಲಿ ಅಪಾಯ ಸಾಧ್ಯತೆಯ ರಸ್ತೆಗೆ ವಾಲಿ ನಿಂತ ಹಲವು ಮರಗಳಲ್ಲಿ ಒಂದೊಂದೇ ಧರೆಗುರುಳುತ್ತಿವೆ.
Vijaya Karnataka Web salu mara uprooted
ಧರಾಶಾಯಿಯಾಗುತ್ತಿವೆ ಸಾಲು ಮರಗಳು


ಲೋಕೋಪಯೋಗಿ ಇಲಾಖೆ ಅಧೀನದ 5.280 ಕಿ.ಮೀ. ರಸ್ತೆಯ ಸ್ವರ್ಗ ಕಿನ್ನಿಂಗಾರು ರಸ್ತೆಯ ದೇಲಂತರುವಿನಿಂದ ದೇಶಮೂಲೆವರೆಗಿನ 3 ಕಿ.ಮೀ. ರಸ್ತೆ ಬದಿಗಳಲ್ಲಿ ನಿರ್ಜೀವ ಮರಗಳೂ ಸೇರಿದಂತೆ ರಸ್ತೆ ಉದ್ದಕ್ಕೂ ಹಲವು ಸಾಲು ಮರಗಳು ವಾಲಿ ನಿಂತಿವೆ.

ದೇಶಮೂಲೆಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್‌ ತಂತಿಗೆ ತಾಗಿ ನಿಂತಿದ್ದ ಅಕೇಶಿಯಾ ಮರವನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಜಿಲ್ಲಾಧಿಕಾರಿ, ಅರಣ್ಯ ಇಲಾಖೆ, ವಿದ್ಯುತ್‌ ಇಲಾಖೆ ಅಧಿಕಾರಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ನೀಡಿದ್ದರು.

ಅಪಾಯ ಸಾಧ್ಯತೆ ಇರುವ ಮರಗಳ ತೆರವು ನಡೆಸುವಂತೆ ವಿಜಯ ಕರ್ನಾಟಕ

ಎರಡು ಬಾರಿ ಚಿತ್ರ ಸಹಿತ ವರದಿ ಪ್ರಕಟಿಸಿದ್ದಲ್ಲದೆ ಸಂಬಂಧಿಸಿದವರಿಗೆ ಮಾಹಿತಿ ರವಾನಿಸಿದ್ದರೂ ಮಂಗಳವಾರ ರಾತ್ರಿ ತನಕ ತೆರವು ಕಾರ್ಯ ನಡೆದಿರಲಿಲ್ಲ.

ಮಂಗಳವಾರ ರಾತ್ರಿ 11ರ ವೇಳೆ ಸುರಿದ ಸಣ್ಣ ಮಳೆಗೆ ಅಕೇಶಿಯಾ ಮರ ಮತ್ತಷ್ಟು ವಾಲಿದ್ದು, ಹೈಟೆನ್ಷನ್‌ ವಿದ್ಯುತ್‌ ತಂತಿಗಳು ಕೈಗೆಟಕುವ ಹಂತಕ್ಕೆ ತಲುಪಿತ್ತು. ರಾತ್ರಿಯಾದುದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಈ ರಸ್ತೆಯ ಹಲವೆಡೆ ಮರಗಳ ಬುಡಗಳಲ್ಲಿ ಮಣ್ಣಿನ ಕೊರೆತ ಉಂಟಾಗಿದ್ದು, ಭಾರಿ ಮಳೆಯಾದಲ್ಲಿ ಮರಗಳು ಬುಡ ಸಮೇತ ರಸ್ತೆಗೆ ಉರುಳಲಿದೆ. ನಿರ್ಜೀವ ಹಾಗೂ ಧರೆಗುರುಳಲು ಸಾಧ್ಯತೆ ಇರುವ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರವನ್ನು ಅಪಾಯ ಮುಕ್ತಗೊಳಿಸಬೇಕಾಗಿದೆ.

ಅಂಗನವಾಡಿ ಪುಟಾಣಿಗಳು ಸೇರಿದಂತೆ ವಾಣೀನಗರದ ಪಡ್ರೆ ಸರಕಾರಿ ಶಾಲೆ, ಮುಳ್ಳೇರಿಯಾ, ಬದಿಯಡ್ಕ, ಪೆರ್ಲ, ಬೆಟ್ಟಂಪಾಡಿ, ಪುತ್ತೂರು, ಅಡ್ಯನಡ್ಕದ ವಿದ್ಯಾಸಂಸ್ಥೆಗಳಿಗೆ ಹಲವು ಮಕ್ಕಳು ತೆರಳಿತ್ತಿದ್ದಾರೆ.

ಕಿನ್ನಿಂಗಾರು, ದೇಶಮೂಲೆ ಭಾಗಗಳಿಂದ ಸ್ವರ್ಗ ಕಡೆಗೆ ಬಸ್‌ ಸೌಕರ್ಯ ಇಲ್ಲದ ಕಾರಣ ಬೆಳಗ್ಗೆ ವಾಣೀನಗರ ತನಕ ಸಂಜೆ ವಾಣೀನಗರದಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದು ಸಾಗಬೇಕಾಗಿದೆ.

ಪೆರ್ಲ ಭಾಗದ 50ಕ್ಕೂ ಹೆಚ್ಚು ಮಕ್ಕಳು ಹೈಯರ್‌ ಸೆಕೆಂಡರಿ ಶಿಕ್ಷ ಣಕ್ಕಾಗಿ ಪಡ್ರೆ ವಾಣೀನಗರ ಸರಕಾರಿ ಶಾಲೆಗೆ ಬರುತ್ತಿದ್ದು, ಬಸ್‌ ಸಂಚಾರ ಸ್ಥಗಿತಗೊಂಡಾಗ ಸ್ವರ್ಗದಿಂದ ನಡೆದೇ ಸಾಗ ಬೇಕಾಗಿದೆ.

ಹಲವು ಶಾಲಾ ವಾಹನಗಳು, ಮೂರು ಖಾಸಗೀ ಬಸ್‌, ಸರಕು ಸಾಗಾಟ, ಬಾಡಿಗೆ ವಾಹನಗಳು, ಇತರ ಲಘು ಹಾಗೂ ದ್ವಿಚಕ್ರ ವಾಹನಗಳು ಅಪಾಯ ಭೀತಿಯೊಂದಿಗೆ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಜನರು ಕಾಲ್ನಡಿಗೆಯಲ್ಲಿ ಸಂಚರಿಸುವ ಅಥವಾ ವಾಹನಗಳ ಮೇಲೆ ಉರುಳಿದರೆ ಅನಾಹುತ ಉಂಟಾಗಲಿದೆ.

ಮಳೆಯೊಂದಿಗೆ ಪ್ರಬಲ ಗಾಳಿ ಬೀಸಿದಲ್ಲಿ ಇನ್ನಷ್ಟು ಮರ ಹಾಗೂ ರೆಂಬೆಗಳು ಮುರಿದು ಬೀಳಲಿದ್ದು, ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತು ಅಪಾಯ ಸಾಧ್ಯತೆ ಇರುವ ಮರಗಳನ್ನು ತೆರವು ಗೊಳಿಸುವ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ