ಆ್ಯಪ್ನಗರ

ಸಾತ್ವಿಕ ಚಿಂತನೆ ಮೂಲಕ ಭಗವಂತನ ಅರಿವು

ಯಜ್ಞ ಯಾಗಾದಿಗಳಿಂದ ಪ್ರಕೃತಿಯಲ್ಲಿ ಕಲ್ಮಷÜಗಳು ದೂರವಾಗಿ ಪರಿಶುದ್ಧಗೊಳ್ಳುತ್ತವೆ. ಶುದ್ಧತೆಯೊಂದಿಗೆ ಹೊಸತನದೊಂದಿಗೆ ಪ್ರಕೃತಿ ಬದಲಾವಣೆಯನ್ನು ಪಡೆಯುತ್ತದೆ ಎಂದು ಅನುಭಗಳಿಂದ ತಿಳಿದುಬರುತ್ತವೆ ಎಂದು ಕಾರ್ಕಳ ಬಲ್ಯೊಟ್ಟು ಶಿವಗಿರಿ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.

Vijaya Karnataka 22 Feb 2019, 5:00 am
ಉಪ್ಪಳ: ಯಜ್ಞ ಯಾಗಾದಿಗಳಿಂದ ಪ್ರಕೃತಿಯಲ್ಲಿ ಕಲ್ಮಷÜಗಳು ದೂರವಾಗಿ ಪರಿಶುದ್ಧಗೊಳ್ಳುತ್ತವೆ. ಶುದ್ಧತೆಯೊಂದಿಗೆ ಹೊಸತನದೊಂದಿಗೆ ಪ್ರಕೃತಿ ಬದಲಾವಣೆಯನ್ನು ಪಡೆಯುತ್ತದೆ ಎಂದು ಅನುಭಗಳಿಂದ ತಿಳಿದುಬರುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಅನೇಕ ವರ್ಷಗಳ ಹಿಂದೆ ಭೋಪಾಲ್‌ನಲ್ಲಿ ನಡೆದ ಅನಿಲ ದುರಂತದಲ್ಲಿ ಯಜ್ಞದ ಮೂಲಕ ನಿರಂತರ ಅಗ್ನಿಯನ್ನು ಕಾಪಾಡಿಕೊಂಡು ಬಂದ ಅಗ್ನಿಹೋತೃಗಳ ಮನೆಗಳಲ್ಲಿ ಮಾತ್ರ ಯಾವುದೇ ಅಪಾಯ ಸಂಭವಿಸದಿರುವುದು. ಆದ್ದರಿಂದ ಸಾತ್ವಿಕ ಚಿಂತನೆಯಿಂದ ಮಾತ್ರ ಭಗವಂತನ್ನು ಕಾಣಬಹುದು ಎಂದು ಕಾರ್ಕಳ ಬಲ್ಯೊಟ್ಟು ಶಿವಗಿರಿ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.
Vijaya Karnataka Web sathwika chinthane moolaka bhagavanthana arivu
ಸಾತ್ವಿಕ ಚಿಂತನೆ ಮೂಲಕ ಭಗವಂತನ ಅರಿವು


ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18ರಿಂದ 24ರವರೆಗೆ ನಡೆಯುತ್ತಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಪ್ರಯುಕ್ತ ಗುರುವಾರ ನಡೆದ ಧರ್ಮಸಂದೇಶ ಸಭೆಯಲ್ಲಿ ಅವರು ಆಶೀರ್ವಚನ ನೀಡಿ, ವೈದಿಕ ಕಾಲದ ವಿಧಿ ವಿಧಾನಗಳನ್ನು ಕೇಳಿ ತಿಳಿದೇ ಹೊರತು ಅನುಭವಿಸಿ ತಿಳಿದಿಲ್ಲ. ಆದರೆ ಕೊಂಡೆವೂರು ಆಶ್ರಮದಲ್ಲಿ ನಡೆಯುತ್ತಿರುವ ಯಜ್ಞಗಳ ಫಲವನ್ನು ಜನತೆ ಅಭವಿಸುತ್ತಿದ್ದಾರೆ. ಸತ್‌ ಚಿಂತನೆಗಳ ಸತ್‌ ಪ್ರವೃತ್ತಿಗಳ ಸದಾಚಾರದ ಕೆಲಸಗಳು ಕೊಂಡೆವೂರು ಪರಿಸರದಲ್ಲಿ ಇನ್ನಷ್ಟು ನಡೆದು ಒಗ್ಗಟ್ಟಿನಿಂದ ಬಾಳುವೆ ನಡೆಸುವಂತಾಗಲಿ ಎಂದು ಹಾರೈಸಿದರು.

ಕನ್ಯಾನ ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿ, ಯೋಗಿಗಳು ಮಾಡಿದ ಯಾಗಗಳು ಅತ್ಯಂತ ಶ್ರೇಷ್ಠ. ಇದರಿಂದ ಸುಭಿಕ್ಷೆ ಉಂಟಾಗುತ್ತದೆ. ಯಾಗಗಳಿಂದ ಲಭ್ಯವಾಗುವ ಅಚೇತನ ಶಕ್ತಿ ಶಾಶ್ವತವಾಗಿದ್ದು, ಸನ್ಮಂಗಳಕರವಾಗಿರುತ್ತದೆ ಎಂದು ಹೇಳಿದರು.

ವಿಶ್ವದಲ್ಲೇ ಭಾರತದ ಮಣ್ಣಿನಲ್ಲಿ ಮಾತ್ರ ವಿಶಿಷ್ಟ ಆಧ್ಯಾತ್ಮಿಕ ಚೌಕಟ್ಟಿದೆ. ಇಲ್ಲಿನ ಸಾಧು ಸಂತರ, ಸಾಧಕರ ತ್ಯಾಗಗಳಿಂದ ಪುನೀತವಾದ ಪರಂಪರೆಯನ್ನು ಮುನ್ನಡೆಸುತ್ತಿರುವ ಕೊಂಡೆವೂರು ಶ್ರೀಕ್ಷೇತ್ರದ ಚಟುವಟಿಕೆಗಳು ಅನುಕರಣೀಯ ಎಂದು ಹೇಳಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ