ಆ್ಯಪ್ನಗರ

ಶಾಲಾ ವಾಹನಗಳ ಸುರಕ್ಷತೆ: ನಗರದಲ್ಲಿ ತಪಾಸಣೆ

ಶಾಲಾರಂಭಗೊಳ್ಳುವ ಪೂರ್ವ ಭಾವಿಯಾಗಿ ಜಿಲ್ಲೆಯ ಆರ್‌ಟಿಒ ಅಧೀನದಲ್ಲಿರುವ ಶಾಲಾ ವಾಹನಗಳ ತಪಾಸಣೆ ಬುಧವಾರ ವಿದ್ಯಾನಗರ ನಗರಸಭಾ ಕ್ರೀಡಾಂಗಣ ನಡೆಯಿತು.

Vijaya Karnataka 17 May 2018, 3:13 pm
ಕಾಸರಗೋಡು: ಶಾಲಾರಂಭಗೊಳ್ಳುವ ಪೂರ್ವ ಭಾವಿಯಾಗಿ ಜಿಲ್ಲೆಯ ಆರ್‌ಟಿಒ ಅಧೀನದಲ್ಲಿರುವ ಶಾಲಾ ವಾಹನಗಳ ತಪಾಸಣೆ ಬುಧವಾರ ವಿದ್ಯಾನಗರ ನಗರಸಭಾ ಕ್ರೀಡಾಂಗಣ ನಡೆಯಿತು.
Vijaya Karnataka Web school bus
ಶಾಲಾ ವಾಹನಗಳ ಸುರಕ್ಷತೆ: ನಗರದಲ್ಲಿ ತಪಾಸಣೆ


ತಪಾಸಣೆಗಾಗಿ 45ರಷ್ಟು ಶಾಲಾ ವಾಹನಗಳು ಆರ್‌ಟಿಒ ಆಧಿಕಾರಿಗಳ ಎದುರು ಹಾಜರು ಪಡಿಸಲಾಗಿತ್ತು. ಉಳಿದ ವಾಹನಗಳನ್ನು ಮುಂದಿನ ದಿನಗಳಲ್ಲಿ ಆರ್‌ಟಿಒ ಚಾಲಕರು ಚಲಾಯಿಸಿ ವಾಹನಗಳ ಸಾಮರ್ಥ್ಯ‌ವನ್ನು ಖಾತರಿ ಪಡಿಸಿದ ಬಳಿಕ ಸ್ಟಿಕ್ಕರ್‌ ಅಳವಡಿಸಲಾಯಿತು.

ಕಾಸರಗೋಡು ಆರ್‌ಟಿಒ ವ್ಯಾಪ್ತಿಯಲ್ಲಿ ಈ ಮೊದಲೇ ತಪಾಸಣೆ ನಡೆಸಿ ಸುಮಾರು 100ರಷ್ಟು ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಶಾಲಾ ವಾಹನಗಳ ತಪಾಸಣೆ ವಾಹನಗಳನ್ನು ಹಾಜರುಪಡಿಸಿ ವಾಹನಗಳ ಸಾಮರ್ಥ್ಯ‌ ತಪಸಾಣೆ ಪಡೆದುಕೊಳ್ಳಬಹುದು. ಫಿಟ್‌ನೆಶ್‌ ಇಲ್ಲದೇ ವಾಹನಗಳನ್ನು ಓಡಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ತಪಾಸಣೆಯಲ್ಲಿ ಎಂವಿಎಗಳಾದ ಕೆ.ಪಿ.ದಿಲೀಪ್‌, ಶ್ರೀಜಿತ್‌ ಕೆ., ವೇಣುಗೋಪಾಲನ್‌ ಟಿವಿ, ಎಂಎಂವಿಗಳಾದ ಜಿಸೋರ್‌ ಆರ್‌.ಎಸ್‌, ಚಂದ್ರ ಕುಮಾರ್‌ ಟಿ., ಸಿಜು ಕೆ., ಬಿಜು ಪಿ.ವಿ., ರಾಮನಾಥ್‌ ಪಿ ಹಾಗೂ ಸುಧಾಕರನ್‌ ಇದ್ದರು.

ಶಾಲಾ ಬಸ್‌ಗಳ ಸುರಕ್ಷೆಯ ಕುರಿತು ಕಟ್ಟುನಿಟ್ಟಿನ ನಿರ್ದೇಶನಗಳನ್ನು ಮೋಟಾರು ವಾಹನ ಇಲಾಖೆ ಹೊರಡಿಸಿಲಾಗಿದೆ. ಶಾಲಾ ವಾಹನ ಅಪಘಾತಗಳನ್ನು ತಡೆಗಟ್ಟಲು ಈ ನಿರ್ದೇಶನಗಳನ್ನು ಹೊರಡಿಸಿದ್ದು, ವಾಹನಗಳ ಸಾಮರ್ಥ್ಯ‌ ಖಾತರಿಪಡಿಸಿ ಸ್ಟಿಕ್ಕರ್‌ ಅಳವಡಿಸಿರುವುದು.

ಶಾಲಾ ವಾಹನಗಳಿಗೆ ಸಾಮರ್ಥ್ಯ‌ ಸರ್ಟಿಫಿಕೆಟ್‌ ಲಭಿಸಿರುವುದಾಗಿ ಖಾತರಿಪಡಿಸಬೇಕು, ಡೋರ್‌ ತಪಾಸಣೆ ಕಡ್ಡಾಯ, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹತ್ತಲು ಇಳಿಯಲು ನೆರವಾಗುವುದರ ಜತೆಗೆ ಅವರನ್ನು ರಸ್ತೆ ದಾಟಿಸಬೇಕು, ವಾಹನದ ಹಿಂಭಾಗದಲ್ಲಿ ತುರ್ತು ನಿರ್ಗಮನ ಇರಬೇಕು, ವಾಹನಗಳಲ್ಲಿ ನೊಂದಣಿ ರಕ್ಷಿಸಿಡಬೇಕಿದೆ, ಶಾಲೆಯ ಹೆಸರು, ಸ್ಥಳ, ಫೋನ್‌ ನಂಬರ್‌, ಮಕ್ಕಳ ಸಂಖ್ಯೆ, ರಕ್ಷಕರ ದೂರವಾಣಿ ಸಂಖ್ಯೆ ನೊಂದಣಿ ಪುಸ್ತಕದಲ್ಲಿರಬೇಕಿದೆ. ವೇಗದ ಗರಿಷ್ಠ 50 ಕಿಲೋಮೀಟರ್‌ ನಿಗದಿಪಡಿಸಬೇಕು. ಸ್ಪೀಡ್‌ ಗರ್ವನರ್‌ ಕಡ್ಡಾಯವಾಗಿ ಅಳವಡಿಸಬೇಕು. ಕನಿಷ್ಠ 10 ವರ್ಷ ಅನುಭವಸ್ಥ ಚಾಲಕನನ್ನೆ ಆಯ್ಕೆ ಮಾಡಬೇಕು. ಅಗ್ನಿಶಮನ ಉಪಕರಣಗಳು ವಾಹನದಲ್ಲಿರಬೇಕು. ವಾಹನದ ಎರಡೂ ಬದಿಗಳಲ್ಲಿ ಶಾಲೆಯ ಫೋನ್‌ ನಂಬ್ರ, ಚೈಲ್ಡ್‌ಲೈನ್‌ ನಂಬ್ರ 1098 ಸ್ಪಷ್ಟವಾಗಿ ಬರೆದಿರಬೇಕು ಎಂಬುದು ಮೋಟಾರು ವಾಹನ ಇಲಾಖೆಯ ನಿರ್ದೇಶನ ನೀಡಿವೆ.

*ಶಾಲಾ ವಾಹನ ತಪಾಸಣೆಯನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬಂದಂತಹ ವಾಹನಗಳನ್ನು ಮೊದಲೆ ತಪಾಸಣೆ ನಡೆಸಿ ಸಾಮರ್ಥ್ಯ‌ ದೃಢಿಕರಣ ನೀಡಲಾಗಿದೆ. ಉಳಿದ ವಾಹನಗಳನ್ನು ಮುಂದಿನ ದಿನಗಳಲ್ಲಿ ಹಾಜರುಪಡಿಸಿ ಫಿಟ್‌ನೆಶ್‌ ಪಡೆದುಕೊಳ್ಳಬೇಕು. ದೋಷಗಳು ಕಂಡು ಬಂದ ಶಾಲಾ ವಾಹನಗಳನ್ನು ತಿರುಗಿ ಕಳುಹಿಸಲಾಗುವುದು. ಸಾಮರ್ಥ್ಯ‌ ಇಲ್ಲದ ವಾಹನಗಳನ್ನು ಚಲಾಯಿಸುವಂತಿಲ್ಲ.
-ವೇಣುಗೋಪಾಲ್‌ ಟಿವಿ, ಎಂವಿಐ, ಕಾಸರಗೋಡು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ