ಆ್ಯಪ್ನಗರ

ಮುಸೋಡಿಯಲ್ಲಿತೀವ್ರ ಕಡಲ್ಕೊರೆತ, ಸಂಸದ ಭೇಟಿ

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಮುಸೋಡಿ, ಮಣಿಮುಂಡ, ಹನುಮಾನ್‌ ನಗರ ಹಾಗೂ ಶಾರದಾ ನಗರದ ಮೀನು ಕಾರ್ಮಿಕ ಕುಟುಂಬಗಳು ಅಕ್ಷರಶಃ ನಲುಗಿ ಹೋಗಿದ್ದು, ಭಾರಿ ನಾಶ ನಷ್ಟ ಸಂಭವಿಸಿದೆ.

Vijaya Karnataka 11 Aug 2019, 5:00 am
ಕುಂಬಳೆ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಮುಸೋಡಿ, ಮಣಿಮುಂಡ, ಹನುಮಾನ್‌ ನಗರ ಹಾಗೂ ಶಾರದಾ ನಗರದ ಮೀನು ಕಾರ್ಮಿಕ ಕುಟುಂಬಗಳು ಅಕ್ಷರಶಃ ನಲುಗಿ ಹೋಗಿದ್ದು, ಭಾರಿ ನಾಶ ನಷ್ಟ ಸಂಭವಿಸಿದೆ. ಮುಸೋಡಿ ಹಾಗೂ ಮಣಿಮುಂಡದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಈಗಾಗಲೇ 12 ಮನೆಗಳು ಕಡಲು ಸೇರಿ ಹಾನಿ ಸಂಭವಿಸಿದೆ.
Vijaya Karnataka Web sea errosion ay musodi
ಮುಸೋಡಿಯಲ್ಲಿತೀವ್ರ ಕಡಲ್ಕೊರೆತ, ಸಂಸದ ಭೇಟಿ


ಹಾನಿ ಉಂಟಾದ ಮನೆಗಳಿಗೆ ಶನಿವಾರ ಕಾಸರಗೋಡು ಸಂಸದ ರಾಜ್‌ಮೋಹನ ಉಣ್ಣಿತ್ತಾನ್‌ ಭೇಟಿ ನೀಡಿದ್ದು, ಕುಟುಂಬ ವರ್ಗದವರನ್ನು ಸಾಂತ್ವನ ನೀಡಿ, ಶೀಘ್ರ ಪರಿಹಾರ ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಇನ್ನೂ 20ಕ್ಕಿಂತಲೂ ಹೆಚ್ಚು ಮನೆಗಳು ಅಪಾಯದಲ್ಲಿದ್ದು, ಮಳೆಯ ಪ್ರಮಾಣ ಕುಂಠಿತವಾಗದಿದ್ದಲ್ಲಿ ಭಾರಿ ಅನಾಹುತ ಸಂಭವಿಸುವ ಮುನ್ಸೂಚನೆ ಇದೆ. ಮಣಿಮುಂಡ ಪ್ರದೇಶದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಗೀಡಾಗಿವೆ ಹಾಗೂ ನೂರಕ್ಕಿಂತಲೂ ಹೆಚ್ಚು ತೆಂಗಿನ ಮರ, ಕೃಷಿ ಬೆಳೆ ನಾಶಗೊಂಡಿದೆ. ಈಗಾಗಲೇ ಮನೆ ಹಾನಿಗೊಳಗಾದ ಹಾಗೂ ಅಪಾಯವಿರುವ ಮನೆಯ ಸದಸ್ಯರು ಮಣಿಮುಂಡ ಶಾಲೆ ಹಾಗೂ ಸಂಬಂಧಿಕರ ಮನೆಗಳಲ್ಲಿ ವಾಸ್ತವ್ಯಹೂಡಿದ್ದು, ಶೀಘ್ರ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯಾಗಬೇಕಿದೆ.

ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರೊಂದಿಗೆ ಮಂಜೇಶ್ವರ ಬ್ಲಾಕ್‌ ಪಂಚಾಯಿತಿ ಅಧ್ಯಕ್ಷ ಎಕೆಎಂ ಅಶ್ರಫ್‌, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್‌ ವರ್ಕಾಡಿ, ಲಕ್ಷ್ಮಣ ಪ್ರಭು, ಉಮ್ಮರ್‌ ಬೋರ್ಕಳ, ಗೋಲ್ಡನ್‌ ರಹಿಮಾನ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ