ಆ್ಯಪ್ನಗರ

ಜಿಲ್ಲೆಯಲ್ಲಿ ತೀವ್ರಗೊಂಡ ಕಡಲ್ಕೊರೆತ

ಜಿಲ್ಲೆಯ ಸಮುದ್ರ ತೀರದಲ್ಲಿ ತೀವ್ರಗೊಂಡ ಕಡಲ್ಕೊರೆತದಿಂದಾಗಿ ನೆಲ್ಲಿಕುಂಜೆ ಕಡಪ್ಪುರದಲ್ಲಿರುವ ಬೀಚ್‌ ಪಾರ್ಕ್‌ನ ಸುತ್ತುಗೋಡೆ ಕುಸಿದಿದೆ. ಕೆಲವು ವಾರಗಳ ಹಿಂದೆಯೂ ಪಾರ್ಕ್‌ನ ದಾರಿಯು ಕುಸಿದಿತ್ತು.

Vijaya Karnataka 20 Jul 2019, 5:00 am
ಕಾಸರಗೋಡು: ಜಿಲ್ಲೆಯ ಸಮುದ್ರ ತೀರದಲ್ಲಿ ತೀವ್ರಗೊಂಡ ಕಡಲ್ಕೊರೆತದಿಂದಾಗಿ ನೆಲ್ಲಿಕುಂಜೆ ಕಡಪ್ಪುರದಲ್ಲಿರುವ ಬೀಚ್‌ ಪಾರ್ಕ್‌ನ ಸುತ್ತುಗೋಡೆ ಕುಸಿದಿದೆ. ಕೆಲವು ವಾರಗಳ ಹಿಂದೆಯೂ ಪಾರ್ಕ್‌ನ ದಾರಿಯು ಕುಸಿದಿತ್ತು. ಗುರುವಾರ ಉಂಟಾದ ಕಡಲ್ಕೊರೆತದಿಂದಾಗಿ ಪಾರ್ಕ್‌ ದಾರಿ ಸಂಪೂರ್ಣವಾಗಿಯೂ ಸುತ್ತುಗೋಡೆ ಭಾಗಶಃ ಸಮುದ್ರಪಾಲಾಗಿದೆ.
Vijaya Karnataka Web sea errosion in kasaragodu
ಜಿಲ್ಲೆಯಲ್ಲಿ ತೀವ್ರಗೊಂಡ ಕಡಲ್ಕೊರೆತ


ವರ್ಷಗಳ ಹಿಂದೆಯಷ್ಟೇ ನಗರಸಭೆಯು ಸಮುದ್ರ ವೀಕ್ಷ ಣೆಯೊಂದಿಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡಿ ನವೀಕರಿಸಿದ ಬೀಚ್‌ ಪಾರ್ಕ್‌ ಇದೀಗ ಸಮುದ್ರ ಪಾಲಾಗಿದೆ. ಸುತ್ತುಗೋಡೆ ನಿರ್ಮಿಸಿ ಗೇಟ್‌ ಸಹ ಅಳವಡಿಸಲಾಗಿತ್ತು. ಈ ಮಧ್ಯೆ ದುಷ್ಕರ್ಮಿಗಳು ರಾತ್ರಿಯಲ್ಲಿ ಗೇಟ್‌ ಹಾಗೂ ಕುಳಿತುಕೊಳ್ಳಲು ಸಿದ್ಧಪಡಿಸಿದ ಸಿಮೆಂಟ್‌ ಬೆಂಚ್‌ಗಳನ್ನು ಹಾಳು ಮಾಡಲಾಗಿತ್ತು. ಅಲ್ಲದೇ ಬೀಚ್‌ ಪಾರ್ಕ್‌ನಿಂದ ಸಮುದ್ರ ತೀರಕ್ಕೆ ತೆರಳುವುದಕ್ಕಾಗಿರುವ ದಾರಿಯನ್ನು ಸಹ ನಿರ್ಮಿಸಲಾಗಿತ್ತು.

ಕಳೆದರಡು ದಿನಗಳಿಂದ ಜಿಲ್ಲೆಯ ಸಮುದ್ರ ತೀರದಲ್ಲಿ ಉಂಟಾದ ತೀವ್ರ ಕಡಲ್ಕೊರೆತದಿಂದಾಗಿ ಪಾರ್ಕ್‌ನ ಸುತ್ತುಗೋಡೆ ಕುಸಿದಿದೆ. ಇನ್ನು ತೀವ್ರಗೊಂಡರೆ ಉಳಿದ ಭಾಗವೂ ಸಮುದ್ರ ಪಾಲಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ