ಆ್ಯಪ್ನಗರ

ಸೀತಾರಾಮ ಯೆಚೂರಿ ಗಿಳಿವಿಂಡುಗೆ ಭೇಟಿ

ಸಿಪಿಎಂ ಪಕ್ಷ ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇತ್ತೀಚೆಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿಗೆ ಭೇಟಿ ನೀಡಿ ಕೆಲ ಸಮಯ ಕಳೆದರು.

Vijaya Karnataka 19 Feb 2019, 5:00 am
ಉಪ್ಪಳ: ಸಿಪಿಎಂ ಪಕ್ಷ ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇತ್ತೀಚೆಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿಗೆ ಭೇಟಿ ನೀಡಿ ಕೆಲ ಸಮಯ ಕಳೆದರು. ನೂತನವಾಗಿ ನಿರ್ಮಾಣಗೊಂಡಿರುವ ಭವನಿಕಾ ರಂಗ ಮಂದಿರ ಸೇರಿದಂತೆ ಪಾರ್ತಿಸುಬ್ಬ ಯಕ್ಷ ಗಾನ ವೇದಿಕೆ, ಗ್ರಂಥಾಲಯ ಮತ್ತು ಯಕ್ಷ ಕಲಾ ಮಂದಿರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Vijaya Karnataka Web seetharama yechury visits gilivindu
ಸೀತಾರಾಮ ಯೆಚೂರಿ ಗಿಳಿವಿಂಡುಗೆ ಭೇಟಿ


ಕೆಲ ಕಾಲ ಸ್ಥಳೀಯ ಮಕ್ಕಳೊಂದಿಗೆ ಕಳೆದ ಸೀತಾರಾಂ ಯೆಚೂರಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡಬೇಕು ಮಾತ್ರವಲ್ಲದೆ ಇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಕಿವಿ ಮಾತು ಹೇಳಿದರು.

ಮಂಜೇಶ್ವರದಂತಹ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಗೋವಿಂದ ಪೈ ಬಹು ಭಾಷಾ ಪಂಡಿತರಾಗಿ, ಸಂಶೋಧಕರಾಗಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ವೈಶಾಖಿ, ಗೋಲ್ಗಥಾ, ದಿಲ್ಲಿ ಕಂಡ ಕಾವ್ಯಗಳು ಸಹಿತ ಇಂಡಿಯಾನಾ ಕೃತಿಯು ಅವರ ಭಾಷಾ ಪ್ರಭುತ್ವ ಸಹಿತ ಸಂಶೋಧನಾತ್ಮಕತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ ಸದಸ್ಯ ಕೆ.ಆರ್‌. ಜಯಾನಂದ, ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್‌ ಮಾಸ್ತರ್‌, ರಾಜ್ಯ ಸಮಿತಿ ಸದಸ್ಯ ಕೆ.ಪಿ. ಸತೀಶ್ಚಂದ್ರನ್‌, ಏರಿಯಾ ಕಮಿಟಿ ಸದಸ್ಯ ಅಬ್ದುಲ್‌ ರಜಾಕ್‌ ಚಿಪ್ಪಾರು, ಪ್ರಶಾಂತ್‌ ಕನಿಲ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ