ಆ್ಯಪ್ನಗರ

ಸೆಮಿ ಹೈ ರೈಲು ಯೋಜನೆಗೆ ಜೀವ

ಕೇರಳ ರಾಜ್ಯದ ರೈಲು ಸಾರಿಗೆ ವಲಯದ ಕನಸಿನ ಯೋಜನೆಯಾದ ಕೊಚ್ಚುವೇಳಿ-ಕಾಸರಗೋಡು ಅರೆ ಅತಿ ವೇಗ (ಸೆಮಿ ಹೈ) ರೈಲು ಮಾರ್ಗ ಯೋಜನೆಗೆ ಮತ್ತೆ ಜೀವ ಬಂದಿದೆ.

Vijaya Karnataka 4 Nov 2019, 5:00 am
ಕಾಸರಗೋಡು: ಕೇರಳ ರಾಜ್ಯದ ರೈಲು ಸಾರಿಗೆ ವಲಯದ ಕನಸಿನ ಯೋಜನೆಯಾದ ಕೊಚ್ಚುವೇಳಿ-ಕಾಸರಗೋಡು ಅರೆ ಅತಿ ವೇಗ (ಸೆಮಿ ಹೈ) ರೈಲು ಮಾರ್ಗ ಯೋಜನೆಗೆ ಮತ್ತೆ ಜೀವ ಬಂದಿದೆ. ಈ ರೈಲು ಮಾರ್ಗಕ್ಕಿರುವ ಆಕಾಶ ಸರ್ವೆ ಶೀಘ್ರ ನಡೆಯಲಿದೆ. ಕೇಂದ್ರ ಸಚಿವಾಲಯ ಇದಕ್ಕೆ ಅನುಮತಿ ನೀಡಿದೆ.
Vijaya Karnataka Web semi high railu plan
ಸೆಮಿ ಹೈ ರೈಲು ಯೋಜನೆಗೆ ಜೀವ


ಸರ್ವೆ ವ್ಯಾಪ್ತಿಯಲ್ಲಿರುವ ಇಪ್ಪತ್ತು ತಂತ್ರಪ್ರಧಾನ ಸ್ಥಳಗಳ ಚಿತ್ರಗಳನ್ನು ಚಿತ್ರೀಕರಿಸಬಾರದು, ವ್ಯೋಮ ರಕ್ಷಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲಿಸಬೇಕು ಮತ್ತಿತರ ನಿಬಂಧನೆಗಳೊಂದಿಗೆ ರೈಲು ಮಾರ್ಗಕ್ಕೆ ಅನುಮತಿ ನೀಡಲಾಗಿದೆ.

ಸರ್ವೆಯಿಂದ ಲಭಿಸುವ ಮಾಹಿತಿಗಳನ್ನು ಸೈನಿಕ ಇಂಟೆಲಿಜೆನ್ಸ್‌ಗೆ ಹಾಗೂ ಇಂಟೆಲಿಜೆನ್ಸ್‌ ಬ್ಯೂರೋಗೆ ಹಸ್ತಾಂತರಿಸಿ ಅವರು ಅನುಮತಿ ನೀಡಿದ ಬಳಿಕವೇ ಯೋಜನಾ ಚಟುವಟಿಕೆಗಳಿಗಾಗಿ ಬಳಸಬಹುದಾಗಿದೆ ಎಂದು ನಿರ್ದೇಶಿಸಲಾಗಿದೆ.

ಸರ್ವೆ ನಡೆಸುವ ಕುರಿತಾದ ಮಾಹಿತಿಯನ್ನು ಆಯಾ ಸ್ಥಳೀಯಾಡಳಿತ ಕೂಟಗಳಿಗೆ ತಿಳಿಸಬೇಕಾಗಿದೆ. ಸರ್ವೆಗಾಗಿ ಲಿಡಾರ್‌ ಎಂಬ ರಿಮೋಟ್‌ ಸೆನ್ಸಿಂಗ್‌ ವಿಧಾನವನ್ನು ಉಪಯೋಗಿಸಲಾಗುವುದು. ಆಕಾಶ ಸರ್ವೆಗಾಗಿ ಗ್ರೌಂಡ್‌ ಪಾಯಿಂಟ್‌ಗಳನ್ನು ಇಡುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. 25 ಕಿ.ಮೀ. ಅಂತರದಲ್ಲಿಗ್ರೌಂಡ್‌ ಪಾಯಿಂಟ್‌ಗಳನ್ನು ಇರಿಸಲಾಗುವುದು. ಐದು ಕಿ.ಮೀ. ಅಂತರದಲ್ಲಿ600 ಮೀಟರ್‌ ಅಗಲದಲ್ಲಿಸೆಂಟ್ರಲ್‌ ಪಾಯಿಂಟ್‌ ನಿಗದಿಪಡಿಸಲಾಗುವುದು.

ಗ್ರೌಂಡ್‌ ಪಾಯಿಂಟ್‌ಗಳನ್ನು ಇಡುವುದನ್ನು ಕಂಡು ಯೋಜನೆಗೆ ಸ್ಥಳ ಸ್ವಾಧೀನಪಡಿಸಲಾಗುತ್ತಿದೆ ಎಂದು ತಪ್ಪು ತಿಳಿದು ಕೆಲವೆಡೆಗಳಲ್ಲಿಪ್ರದೇಶ ನಿವಾಸಿಗಳು, ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಯೋಜನೆಗಾಗಿ 25 ಮೀಟರ್‌ ಅಗಲ ಮಾತ್ರ ಸಾಕು ಎಂದು ಕೇರಳ ರೈಲ್ವೆ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ (ಕೆಆರ್‌ಡಿಸಿಎಲ್‌) ಈಗಾಗಲೇ ವ್ಯಕ್ತಪಡಿಸಿದೆ.

ತಿರುವನಂತಪುರದಿಂದ ಕಾಸರಗೋಡಿಗೆ ಇರುವ ಪ್ರಯಾಣ ಸಮಸ್ಯೆಯನ್ನು ಆರು ಗಂಟೆಗಳಿಗೆ ಇಳಿಸುವುದು ಯೋಜನೆ ಉದ್ದೇಶವಾಗಿದೆ. 46,769 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ.

ತಿರುವುಗಳನ್ನು ಹೊರತುಪಡಿಸಿ 180 ಕಿ.ಮೀ. ವೇಗದಲ್ಲಿರೈಲುಗಳನ್ನು ಓಡಿಸಲು ಸಾಧ್ಯವಾಗುವ ರೀತಿಯಲ್ಲಿ531.45 ಕಿ.ಮೀ. ಉದ್ದಕ್ಕೆ ನೂತನ ರೈಲು ಮಾರ್ಗ ನಿರ್ಮಿಸಲಾಗುವುದು. ಸರ್ವೆ ಪೂರ್ಣವಾದ ಬಳಿಕ ಸರಕಾರದ ಅನುಮತಿಯೊಂದಿಗೆ ಯೋಜನೆಗಿರುವ ಅಲೈನ್‌ಮೆಂಟ್‌ ನಿಗದಿಪಡಿಸಲಾಗುವುದು.

ಯೋಜನೆ ಕಾರ್ಯಾರಂಭಗೊಂಡರೆ ಕಾಸರಗೋಡಿನ ನಿವಾಸಿಗಳಿಗೆ ನಾನಾ ಅಗತ್ಯಗಳಿಗಾಗಿ ರಾಜಧಾನಿಗೆ ತೆರಳುವುದು ಸುಲಭವಾಗಲಿದೆ. ಸಮಯ ಉಳಿತಾಯದೊಂದಿಗೆ ಹಣ ಉಳಿತಾಯ ಸಾಧ್ಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ