ಆ್ಯಪ್ನಗರ

ಶೀಲಾಂಜ್‌ ನಿರ್ಮಾಣ ಅಂತಿಮ ಹಂತದಲ್ಲಿ

ಜಿಲ್ಲೆಯ ಮೊತ್ತ ಮೊದಲ ಶೀಲಾಂಜ್‌ ನಿರ್ಮಾಣ ಅಂತಿಮ ಹಂತದಲ್ಲಿದೆ. ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯ ಸುರಕ್ಷೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಚೆರ್ವತ್ತೂರು ಗ್ರಾಮ ಪಂಚಾಯಿತಿ ಜಾರಿಗೊಳಿಸುತ್ತಿರುವ ಯೋಜನೆ ಇದಾಗಿದೆ.

Vijaya Karnataka 31 May 2019, 5:00 am
ಕಾಸರಗೋಡು: ಜಿಲ್ಲೆಯ ಮೊತ್ತ ಮೊದಲ ಶೀಲಾಂಜ್‌ ನಿರ್ಮಾಣ ಅಂತಿಮ ಹಂತದಲ್ಲಿದೆ. ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯ ಸುರಕ್ಷೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಚೆರ್ವತ್ತೂರು ಗ್ರಾಮ ಪಂಚಾಯಿತಿ ಜಾರಿಗೊಳಿಸುತ್ತಿರುವ ಯೋಜನೆ ಇದಾಗಿದೆ.
Vijaya Karnataka Web news/kasaragod/shelaunge
ಶೀಲಾಂಜ್‌ ನಿರ್ಮಾಣ ಅಂತಿಮ ಹಂತದಲ್ಲಿ


ಶೀಲಾಂಜ್‌ ಎಂಬುದು ಮಹಿಳಾ ಪ್ರಯಾಣಿಕರ ವಿಶ್ರಾಂತಿ ಕೇಂದ್ರವಾಗಿದೆ. ಮಹಿಳೆ ಏಕಾಂಗಿಯಾಗಿ ಪ್ರಯಾಣ ನಡೆಸುತ್ತಿದ್ದರೆ, ದಾರಿ ಮಧ್ಯೆ ವಿಶ್ರಾಂತಿ ಪಡೆಯುವ, ಒಂದು ರಾತ್ರಿ ತಂಗುವುದಿದ್ದಲ್ಲಿ ಸರಕ್ಷಿತವಾದ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಚೆರ್ವತ್ತೂರು ರೈಲು ನಿಲ್ದಾಣ ಬಳಿಯ ಹೆದ್ದಾರಿ ಬದಿ ಪಂಚಾಯಿತಿ ಬಸ್‌ ನಿಲ್ದಾಣದಲ್ಲಿ ಈ ಕಟ್ಟಡವಿದ್ದು, ಮಹಿಳೆಯರಿಗೆ ಪ್ರಯೋಜನಕಾರಿಯಾಗಲಿದೆ. ಪಂಚಾಯಿತಿಯ ಸ್ವಂತ ನಿಧಿಯಿಂದ ಮೀಸಲಿರಿಸಿದ 15 ಲಕ್ಷ ರೂ. ವೆಚ್ಚದಲ್ಲಿ ಶೀಲಾಂಜ್‌ ನಿರ್ಮಾಣಗೊಳ್ಳುತ್ತಿದೆ. ಈ ವರ್ಷ ಫೆಬ್ರವರಿಯಲ್ಲಿ ನಿರ್ಮಾಣ ಆರಂಭಿಸಿದ್ದು, ಜೂನ್‌ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ನಾನಾ ಅಗತ್ಯಗಳಿಗಾಗಿ ಚೆರ್ವತ್ತೂರಿಗೆ ಆಗಮಿಸುವ ಮಹಿಳೆಯರು ಸುರಕ್ಷಿತವಾಗಿ ವಸತಿ ಹೂಡುವ ನಿಟ್ಟಿನಲ್ಲಿ ಸದಾ ತೆರೆದಿರುವ ಶೀಲಾಂಜ್‌ನ್ನು ಗ್ರಾಮ ಪಂಚಾಯಿತಿ ನಿರ್ಮಿಸುತ್ತಿದೆ. ವಿಶ್ರಾಂತಿ ಕೊಠಡಿ, ಶೌಚಾಲಯ ಸಹಿತದ ಕಟ್ಟಡ ಇದಾಗಿದೆ. ನಿರ್ಮಾಣ ಪೂರ್ಣಗೊಳ್ಳುತ್ತಿದ್ದಂತೆ ಪೀಠೋಪಕರಣ ಸಹಿತ ಸೌಲಭ್ಯಗಳನ್ನು ಸಿದ್ಧಪಡಿಸಲಾಗುವುದು ಎಂದು ಪಂಚಾಯಿತಿ ಪದಾಧಿಕಾರಿಗಳು ತಿಳಿಸಿದರು.

ಮಹಿಳೆಯರು ಧೈರ್ಯದಿಂದ ಪ್ರಯಾಣ ನಡೆಸಲು ಈ ಶೀಲಾಂಜ್‌ ಪ್ರೇರಣೆಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಧವನ್‌ ಮಣಿಯರ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ