ಆ್ಯಪ್ನಗರ

ಸೈನುಲ್‌ ಆಬಿದ್‌ಗೆ ಜಿಲ್ಲಾ ಪೊಲೀಸರ ಅಭಿನಂದನೆ

ಚೆಂಡಾಟ ಆಡುತ್ತಿದ್ದಾಗ 20 ಅಡಿ ಆಳದ ಕೊಳಕ್ಕೆ ಬಿದ್ದ ಇಬ್ಬರು ಸ್ನೇಹಿತರನ್ನು ರಕ್ಷಿಸಿದ ಯುಕೆಜಿ ವಿದ್ಯಾರ್ಥಿಯನ್ನು ಕಾಸರಗೋಡು ಜಿಲ್ಲಾ ಪೊಲೀಸರು ಅಭಿನಂದಿಸಿದರು.

Vijaya Karnataka 27 Jul 2018, 3:16 pm
ಕಾಸರಗೋಡು: ಚೆಂಡಾಟ ಆಡುತ್ತಿದ್ದಾಗ 20 ಅಡಿ ಆಳದ ಕೊಳಕ್ಕೆ ಬಿದ್ದ ಇಬ್ಬರು ಸ್ನೇಹಿತರನ್ನು ರಕ್ಷಿಸಿದ ಯುಕೆಜಿ ವಿದ್ಯಾರ್ಥಿಯನ್ನು ಕಾಸರಗೋಡು ಜಿಲ್ಲಾ ಪೊಲೀಸರು ಅಭಿನಂದಿಸಿದರು.
Vijaya Karnataka Web sinul felicitated by police
ಸೈನುಲ್‌ ಆಬಿದ್‌ಗೆ ಜಿಲ್ಲಾ ಪೊಲೀಸರ ಅಭಿನಂದನೆ


ಮುಳಿಯಾರು ಅಮ್ಮಂಗೋಡಿನ ಸೈನುದ್ದೀನ್‌-ಅಸ್ಮ ದಂಪತಿಯ ಪುತ್ರ ಸೈನುಲ್‌ ಆಬಿದ್‌ನ ಸಾಂದರ್ಭಿಕ ಜ್ಞಾನ, ಶೌರ್ಯವನ್ನು ಅಭಿನಂದಿಸಿ ಕಾಸರಗೋಡು ಜಿಲ್ಲಾ ಪೊಲೀಸರು ಚೆರ್ಕಳ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಅಭಿನಂದನ ಪತ್ರ ಸಲ್ಲಿಸಿದರು.

ಸೈನುಲ್‌ ಆಬಿದ್‌ ಹಾಗೂ ಮಕ್ಕಳು ಮನೆ ಸಮೀಪದಲ್ಲಿ ಆಟ ಆಡುತ್ತಿದ್ದರು. ಈ ವೇಳೆ, ಕೊಳಕ್ಕೆ ಬಿದ್ದ ಚೆಂಡು ತೆಗೆಯಲು ಹೋದ ಇಬ್ಬರು ಮಕ್ಕಳು ಕಾಲು ಜಾರಿ ಸುಮಾರು 20 ಅಡಿಯಷ್ಟು ಆಳದ ಕೊಳಕ್ಕೆ ಬಿದ್ದರು. ತಕ್ಷಣ ಸಮಯಪ್ರಜ್ಞೆ ಮೆರೆದ ಸನುಲ್‌ ಆಬಿದ್‌, ಮರದ ರೆಂಬೆ ತಂದು ಅದನ್ನು ಕೊಳದಲ್ಲಿ ಇಟ್ಟು ಹಿಡಿದು ನಿಲ್ಲುವಂತೆ ಹೇಳಿದ್ದ. ರೆಂಬೆಯನ್ನು ಹಿಡಿದು ಮೇಲಕ್ಕೆ ಬರುವಂತೆ ಹೇಳಿದ್ದ ಮಾತ್ರವಲ್ಲ; ಕೈ ಹಿಡಿದು ಮೇಲಕ್ಕೂ ಎತ್ತಿದ್ದ.

ಮುಳಿಯಾರು ಪಂಚಾಯಿತಿನ ಮಲ್ಲಂ ಸಸಿಹಿತ್ಲುವಿನ ಮುನೀರ್‌-ಸಾಜಿದ ದಂಪತಿಯ ಪುತ್ರ ಬಾಸಿಂ ಸಮಾನ್‌(5), ಸಾಜಿದಳ ಸಹೋದರ ಆರಿಫ್‌ ನಿಸಾನ್‌ರ ಪುತ್ರ ಅಬ್ದುಲ್‌ ಶಾಮಿಲ್‌(5) ಕೊಳಕ್ಕೆ ಬಿದ್ದ ಬಾಲಕರು. ಈ ಇಬ್ಬರು ಬಾಲಕರು ಪೊವ್ವಲ್‌ ಮುಳಿಯಾರು ಮಾಪಿಳ ಎಲ್‌ಪಿ ಶಾಲೆಯ ಯುಕೆಜಿ ವಿದ್ಯಾರ್ಥಿಗಳಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ