ಆ್ಯಪ್ನಗರ

ಪಾರ್ವತಿ, ಪುತ್ರಿಗೆ ಸ್ನೇಹಾಲಯ ರಕ್ಷೆ

ನೋಡಿಕೊಳ್ಳಲು ಯಾರೂ ಇಲ್ಲದ ತಾಯಿ ಹಾಗೂ ಪುತ್ರಿ ಇನ್ನು ಮಂಜೇಶ್ವರದ ಸ್ನೇಹಾಲಯದಲ್ಲಿಸುರಕ್ಷಿತರು.

Vijaya Karnataka 8 Sep 2019, 5:00 am
ಕಾಸರಗೋಡು: ನೋಡಿಕೊಳ್ಳಲು ಯಾರೂ ಇಲ್ಲದ ತಾಯಿ ಹಾಗೂ ಪುತ್ರಿ ಇನ್ನು ಮಂಜೇಶ್ವರದ ಸ್ನೇಹಾಲಯದಲ್ಲಿಸುರಕ್ಷಿತರು. ಮಧೂರು ಗ್ರಾಮ ಪಂಚಾಯಿತಿಯ 17ನೇ ವಾರ್ಡ್‌ ಮನ್ನಿಪ್ಪಾಡಿ ಲಕ್ಷಂವೀಡು ಕಾಲೊನಿಯ 78ರ ಹರೆಯದ ಪಾರ್ವತಿ ಹಾಗೂ 47ರ ಹರೆಯದ ಲೋಕದ ಪರಿವೆಯೇ ಇಲ್ಲದ ಪುತ್ರಿ ಸುನೀತಾರ ಕರುಣಾಜನಕವಾದ ಜೀವನಕ್ಕೆ ಮಧೂರು ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಿದ್ದರೂ ಅವರಿಗೆ ಸೂಕ್ತ ಸಂರಕ್ಷಣೆಯ ದೃಷ್ಟಿಯಲ್ಲಿಇನ್ನು ಸ್ನೇಹಾಲಯದಲ್ಲಿರುತ್ತಾರೆ.
Vijaya Karnataka Web snehalaya protest parvathi and daughter
ಪಾರ್ವತಿ, ಪುತ್ರಿಗೆ ಸ್ನೇಹಾಲಯ ರಕ್ಷೆ


ಸುನಿತಾ ಹುಟ್ಟಿನಿಂದಲೇ ದೈಹಿಕವಾಗಿಯೂ, ಮಾನಸಿಕವಾಗಿಯೂ ಸ್ಥಿಮಿತ ಕಳೆದುಕೊಂಡಿದ್ದರು. ತಾಯಿ ಪಾರ್ವತಿ 10 ವರ್ಷ ಹಿಂದೆ ಕೈ ಹಿಡಿದ ಪತಿ ನಿಧನರಾದ ಬಳಿಕ ಪುತ್ರಿಯನ್ನು ನೋಡಿಕೊಳ್ಳುತ್ತಿದ್ದರು. ಉಳಿದ ಮಕ್ಕಳ ವಿವಾಹ ನೆರವೇರಿತ್ತು. ಇದರಿಂದಾಗಿ ಸುನೀತಾಳ ಬಗ್ಗೆ ಕಾಳಜಿ ವಹಿಸುವವರು ಇಲ್ಲವಾಯಿತು. ಅವರಿವರ ಮನೆಗಳಲ್ಲಿಸಣ್ಣಪುಟ್ಟ ಕೆಲಸ ಮಾಡಿ ಮಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ವೃದ್ಧಾಪ್ಯ ಹಿನ್ನೆಲೆಯಲ್ಲಿಸಾಧ್ಯವಾಗದೆ ಪರಿತಪಿಸುತ್ತಿದ್ದರು. ಇವರ ಸ್ಥಿತಿಗತಿ ಬಗ್ಗೆ ತಿಳಿದುಕೊಂಡಿದ್ದ ಮಧೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳು ಮಂಜೇಶ್ವರ ಸ್ನೇಹಾಲಯವನ್ನು ಸಂಪರ್ಕಿಸಿದ ಪರಿಣಾಮ ಸ್ನೇಹಾಲಯದಿಂದ ಮುಖ್ಯಸ್ಥ ಜೋಸೆಫ್‌ ಕ್ರಾಸ್ತಾ ಭೇಟಿ ನೀಡಿ ಸ್ನೇಹಾಲಯದಲ್ಲಿಆಶ್ರಯ ನೀಡುವ ಭರವಸೆ ನೀಡಿ, ಅವರನ್ನು ಸ್ನೇಹಾಲಯಕ್ಕೆ ಕರೆದೊಯ್ದರು.

ಈ ಸಂದರ್ಭ ಮಧೂರು ಗ್ರಾಪಂ ಅಧ್ಯಕ್ಷೆ ಮಾಲತಿ ಸುರೇಶ್‌, ಗ್ರಾಪಂ ಉಪಾಧ್ಯಕ್ಷ ದಿವಾಕರ ಆಚಾರ್ಯ, ಆರೋಗ್ಯ ಕೇಂದ್ರದ ಹೆಲ್ತ್‌ ಇನ್ಸ್‌ಪೆಕ್ಟರ್‌ ಎಂ. ಚಂದ್ರನ್‌, ಪಾಲಿಯೇಟಿವ್‌ ಕೇರ್‌ ನರ್ಸ್‌ ಕೆ.ರಾಧಾ, ಜೆಎಚ್‌ಐ ಸಿ. ಅರುಣ್‌ ಕುಮಾರ್‌, ಜೆಪಿಎಚ್‌ಎನ್‌ ಕೆ.ಜಿ. ಅಂಬಿಲಿ, ಆಶಾ ಕಾರ್ಯಕರ್ತರು ಜತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ