ಆ್ಯಪ್ನಗರ

ಮಣ್ಣು ರಹಿತ ತರಕಾರಿ ಕೃಷಿ ವೀಕ್ಷ ಣೆ

ಸ್ಥಳೀಯ ನಾಲಂದ ಮಹಾ ವಿದ್ಯಾಲಯದ ಗ್ರಾಮ ವಿಕಾಸ ಸಮಿತಿ ಸಾವಯವ ಕೃಷಿ ಅಭಿವೃದ್ಧಿಯತ್ತ ಗಮನ ಹರಿಸುವ ನಿಟ್ಟಿನಲ್ಲಿ ಕೇರಳ ಟೂರಿಸಂ ಡೆವಲಪ್‌ಮೆಂಟ್‌ ಸೊಸೈಟಿ (ಕೆಟಿಡಿಎಸ್‌) 'ಗ್ರೋಬ್ಯಾಗ್‌'ಗಳಲ್ಲಿ ಮಣ್ಣು ರಹಿತ ಹಾಗೂ ಪಂಚಗವ್ಯ ಉಪಯೋಗಿಸಿ ಬೆಳೆಸಲಾದ ತರಕಾರಿ, ಕೃಷಿ, ಹಣ್ಣು ಹಂಪಲು ಗಿಡಗಳನ್ನು ವೀಕ್ಷಿಸಿ, ಮಾಹಿತಿ ಸಂಗ್ರಹಿಸಿತು.

Vijaya Karnataka 7 Dec 2018, 5:00 am
ಕಾಸರಗೋಡು: ಸ್ಥಳೀಯ ನಾಲಂದ ಮಹಾ ವಿದ್ಯಾಲಯದ ಗ್ರಾಮ ವಿಕಾಸ ಸಮಿತಿ ಸಾವಯವ ಕೃಷಿ ಅಭಿವೃದ್ಧಿಯತ್ತ ಗಮನ ಹರಿಸುವ ನಿಟ್ಟಿನಲ್ಲಿ ಕೇರಳ ಟೂರಿಸಂ ಡೆವಲಪ್‌ಮೆಂಟ್‌ ಸೊಸೈಟಿ (ಕೆಟಿಡಿಎಸ್‌) 'ಗ್ರೋಬ್ಯಾಗ್‌'ಗಳಲ್ಲಿ ಮಣ್ಣು ರಹಿತ ಹಾಗೂ ಪಂಚಗವ್ಯ ಉಪಯೋಗಿಸಿ ಬೆಳೆಸಲಾದ ತರಕಾರಿ, ಕೃಷಿ, ಹಣ್ಣು ಹಂಪಲು ಗಿಡಗಳನ್ನು ವೀಕ್ಷಿಸಿ, ಮಾಹಿತಿ ಸಂಗ್ರಹಿಸಿತು.
Vijaya Karnataka Web soilless vegitable agricuiltur
ಮಣ್ಣು ರಹಿತ ತರಕಾರಿ ಕೃಷಿ ವೀಕ್ಷ ಣೆ


ಕಾಞಂಗಾಡ್‌ ಕೆಟಿಡಿಸಿ ಅಧಿಕಾರಿ ಚಾಕೋ ಜೋಸೆಫ್‌, ಕೇವಲ 8 ಸೆಂಟ್ಸ್‌ ಸ್ಥಳದಲ್ಲಿ ಗ್ರೋಬ್ಯಾಗ್‌ ಗಳಲ್ಲಿ ಮಣ್ಣು ರಹಿತವಾಗಿ ತೆಂಗಿನ ಸಿಪ್ಪೆ, ಜೀವಾಮೃತ ಉಪಯೋಗಿಸಿ ಬೆಳೆಸಲಾದ ನಾನಾ ಬಗೆಯ ಕೃಷಿ, ತರಕಾರಿ ಬೆಳೆಗಳಿಗೆ ಅವಶ್ಯಕತೆಗೆ ತಕ್ಕ ನಿಯಮಿತ ನೀರಿನ ಬಳಕೆ ಪೋಷಕಾಂಶ, ಎಲೆ ತಿನ್ನುವ ಹುಳು ಕೀಟಗಳ ಬಾಧೆ ನಿವಾರಣೆಗೆ ಪಂಚಗವ್ಯ, ಇಎಂ1, ಫಿಶ್‌ ಅಮಿನೊ ಆ್ಯಸಿಡ್‌, ವಿಕರ್ಶ ಸಿಂಪಡನೆ, ಬೆಳೆಗಳ ಬೆಳವಣಿಗೆ ಹಾಗೂ ಸಂಪುಷ್ಟಿಗೆ ಪೂರಕವಾಗಿ ನೆಲಕಡಲೆ ಹಿಂಡಿ, ಬೆಲ್ಲ ಮಿಶ್ರಣ ವಿಕರ್ಶ ಬಳಕೆಯ ಕೃಷಿ ರೀತಿಯನ್ನು ಅರಿತರು.

ಪನತ್ತಡಿ ಕಳ್ಳಾರ್‌ ಶ್ರೀ ವಿಷ್ಣು ಮಹೇಶ್ವರ ಕ್ಷೇತ್ರ ಬಳಿಯ ವಸಂತ ಕುಮಾರಿ ಅವರ ಕೃಷಿ ತೋಟಕ್ಕೆ ತೆರಳಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿನ ಬಳಕೆಗಾಗಿ ಬೆಳೆದ ತರಕಾರಿ ಗಿಡ, ಹುಲುಸಾಗಿ ಬೆಳೆದ ವೀಳ್ಯದೆಲೆ ಕೃಷಿ ವೀಕ್ಷಿಸಿದರು. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಸಲಾದ ತರಕಾರಿ ಕೃಷಿಯ ಕೀಟಬಾಧೆ ನೀಗಿಸಲು ಬಳಸುವ ಶುದ್ಧ ತಳಿಯ ಗೋಮೂತ್ರ, ಬೆಳ್ಳುಳ್ಳಿ, ಗಾಂಧಾರಿ ಮೆಣಸು, ಗೋಮೂತ್ರ ಮಿಶ್ರಣ, ಬೇವಿನೆಣ್ಣೆ ಬಳಕೆ ಪೋಷಕಾಂಶವಾಗಿ ಗ್ರೋತ್‌ ಪ್ರಮೋಟರ್‌ ಬಳಕೆ ವಿಧಾನಗಳ ಮಾಹಿತಿ ಸಂಗ್ರಹಿಸಿದರು.

ಸಮಿತಿ ಸದಸ್ಯರಾದ ಜಗದೀಶ್‌ ಕುತ್ತಾಜೆ, ಶಿವಪ್ರಕಾಶ್‌ ಪಾಲೆಪ್ಪಾಡಿ, ಶ್ಯಾಮಲಾ ಪತ್ತಡ್ಕ, ನಳಿನಿ ಸೈಪಂಗಲ್ಲು, ಶರ್ಮಿಳಾ ಸುಮಿತ್‌ ಮತ್ತಿತರರು ತಂಡದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ