ಆ್ಯಪ್ನಗರ

ಕಾಸರಗೋಡಿಗೆ ಆಗಮಿಸಿದ ಲಂಕಾ ಪ್ರಧಾನಿ; ಬೇಳ ಕುಮಾರಮಂಗಲ ಕ್ಷೇತ್ರದಲ್ಲಿ ವಿಶೇಷ ಸೇವೆ

ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ವಿಶೇಷ ಚಂಡಿಕಾ ಹೋಮ ಮತ್ತಿತರ ಸೇವೆಗಳನ್ನು ನಡೆಸಿದ ಬಳಿಕ ಕಾಸರಗೋಡಿನ ಬೇಳ ಸಮೀಪದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Vijaya Karnataka Web 27 Jul 2019, 3:34 pm
ಕಾಸರಗೋಡು: ಕಾಸರಗೋಡು ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಹೊರದೇಶದ ಮೊದಲ ಪ್ರಧಾನಿ ಶ್ರೀಲಂಕಾದ ರೆನಿಲ್ ವಿಕ್ರಮ್ ಸಿಂಘೆ ಆಗಮಿಸಿದ್ದಾರೆ. ಅವರಿಗೆ ಸಕಲ ಸರಕಾರಿ ಗೌರಗಳೊಂದಿಗೆ ಬರಮಾಡಿಕೊಳ್ಳಲಾಯಿತು.
Vijaya Karnataka Web Ranil Wickramasinghe- Lanka PM


ಶನಿವಾರ ಶ್ರೀ ಕ್ಷೇತ್ರದಲ್ಲಿ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಗಣಪತಿಹೋಮ, ನವಕಾಭಿಷೇಕ, ಆಶ್ಲೇಷ ಬಲಿ, ಅಲಂಕಾರ ಪೂಜೆಯ ಬಳಿಕ ಮಹಾಪೂಜೆ ನಡೆಯಿತು. ಶುಕ್ರವಾರ ರಾತ್ರಿಯೇ ರಂಗಪೂಜೆ ನಡೆಸಲಾಯಿತು. ಜ್ಯೋತಿಷ್ಯರತ್ನ ಬೇಳ ಪದ್ಮನಾಭ ಶರ್ಮ ಅವರು ಹಿಂದೆ ಶ್ರೀಲಂಕಾ ಪ್ರಧಾನಿ ಮನೆಯಲ್ಲಿ ಪ್ರಶ್ನೆ ಚಿಂತನೆ ಇರಿಸಿದಾಗ ಕಂಡ ದೋಷ ಪರಿಹಾರಕ್ಕಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ಹಾಗೂ ಕುಮಾರಮಂಗಲ ಶ್ರೀಸುಬ್ರಹ್ಮಣ್ಯ ದೇವರಿಗೆ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ, ಬೇಳ ರಾಮಚಂದ್ರ ಅಡಿಗ, ಕಿಳಿಂಗಾರು ಗೋಪಾಲಕೃಷ್ಣ ಭಟ್, ಮುರಳೀಕೃಷ್ಣ ಅಸ್ರ ವೈದಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು. ಅಂತಾರಾಷ್ಟ್ರೀಯ ಮಟ್ಟದ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ, ಆಡಳಿತ ಸಮಿತಿ ಪದಾಧಿಕಾರಿಗಳಾದ ಬಿ. ವಸಂತ ಪೈ ಬದಿಯಡ್ಕ, ಶ್ರೀಧರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಕಾಸರಗೋಡು ಎಸ್ಪಿ ಜೇಮ್ಸ್ ಥೋಮಸ್, ಡಿವೈಎಸ್ಪಿ ಶಿಲ್ಪಾ ಡಿ, ಸಹಾಯಕ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ಶ್ರೀಲಂಕಾ ಪ್ರಧಾನಿಗೆ ಬೀಳ್ಕೊಡುಗೆ:

ಕೇರಳದ ಕಾಸರಗೋಡಿಗೆ ಪ್ರಥಮ ಬಾರಿಗೆ ಖಾಸಗಿ ಭೇಟಿಗಾಗಿ ಆಗಮಿಸಿ ಕ್ಷೇತ್ರ ದರ್ಶನದ ಬಳಿಕ ಹಿಂತಿರುಗಿದ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್‌ಸಿಂಘೆ ಅವರನ್ನು ಕಾಸರಗೋಡು ಜಿಲ್ಲಾಕಾರಿ ಡಾ.ಡಿ. ಸಜಿತ್ ಬಾಬು ನೇತೃತ್ವದಲ್ಲಿ ಬೇಕಲ್ ಲಲಿತ್ ರೆಸಾರ್ಟ್ ಹೆಲಿಪ್ಯಾಡ್‌ನಲ್ಲಿ ಬೀಳ್ಕೊಡುಗೆ ನೀಡಲಾಯಿತು. ಅವರೊಂದಿಗೆ ಚೆನ್ನೈಯ ಶ್ರೀಲಂಕಾ ಡೆಪ್ಯೂಟಿ ಹೈಕಮೀಷನರ್ ವಿಶ್ವನಾಥ್ ಅಪೋನ್ಸು, ಕಾಸರಗೋಡು ಎಸ್ಪಿ ಜೇಮ್ಸ್ ಥೋಮಸ್ ಜೊತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ