ಆ್ಯಪ್ನಗರ

ರಾಜ್ಯದಲ್ಲಿ ಪೊಲೀಸರ ಮೇಲೆಯೇ ಕಟ್ಟೆಚ್ಚರ

ರಾಜ್ಯದಲ್ಲಿ ಪೊಲೀಸರ ಮೇಲೆ ಹೆಚ್ಚಿನ ನಿಯಂತ್ರಣ ಏರ್ಪಡಿಸಲಾಗುವುದು. ಪೊಲೀಸ್‌ ಠಾಣೆಗಳನ್ನು ಆನ್‌ಲೈನ್‌ಗೊಳಿಸುವುದರ ಜತೆಗೆ ಪೊಲೀಸ್‌ ವಾಹನಗಳು ಮುಖ್ಯಸ್ಥರ ನೇರವಾದ ಅಧೀನದಲ್ಲಿರಲಿದೆ.

Vijaya Karnataka 31 Jul 2019, 5:00 am
ಕಾಸರಗೋಡು: ರಾಜ್ಯದಲ್ಲಿ ಪೊಲೀಸರ ಮೇಲೆ ಹೆಚ್ಚಿನ ನಿಯಂತ್ರಣ ಏರ್ಪಡಿಸಲಾಗುವುದು. ಪೊಲೀಸ್‌ ಠಾಣೆಗಳನ್ನು ಆನ್‌ಲೈನ್‌ಗೊಳಿಸುವುದರ ಜತೆಗೆ ಪೊಲೀಸ್‌ ವಾಹನಗಳು ಮುಖ್ಯಸ್ಥರ ನೇರವಾದ ಅಧೀನದಲ್ಲಿರಲಿದೆ.
Vijaya Karnataka Web state police
ರಾಜ್ಯದಲ್ಲಿ ಪೊಲೀಸರ ಮೇಲೆಯೇ ಕಟ್ಟೆಚ್ಚರ


ಇದರ ಮುಂದುವರಿಕೆ ಎಂಬಂತೆ ವಾಹನಗಳಲ್ಲಿ ಟ್ಯಾಬ್‌ಗಳನ್ನು ಅಳವಡಿಕೆ ಆರಂಭಿಸಲಾಗಿದೆ. ವಾಹನದಲ್ಲಿ ಇರುವವರನ್ನು ನೇರವಾಗಿ ನೋಡಲು ಸಾಧ್ಯವಾಗುವ ರೀತಿಯಲ್ಲಿ ಟ್ಯಾಬ್‌ ಅಳವಡಿಸಲಾಗುವುದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ವಾಹನಗಳಲ್ಲಿ ನಡೆಯುವ ವಿಷಯಗಳನ್ನು ನೋಡಲು ಸಾಧ್ಯವಿದೆ.

ಪೊಲೀಸರನ್ನು, ಪೊಲೀಸ್‌ ಠಾಣೆಗೆ ಬರುವವರನ್ನು ವೀಕ್ಷಿಸಲು ಸಾಧ್ಯವಾಗುವ ರೀತಿಯಲ್ಲಿ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತಿರುವನಂತಪುರದ ಪೊಲೀಸ್‌ ಕೇಂದ್ರದಲ್ಲಿ ಕುಳಿತುಕೊಂಡರೆ ಪೊಲೀಸ್‌ ಠಾಣೆಗಳ ದೈನಂದಿನ ಕಾರ್ಯಾಚರಣೆಗಳನ್ನು ವೀಕ್ಷಿಸಲು ಸಾಧ್ಯವಿದೆ.

ಪೊಲೀಸ್‌ ವಾಹನಗಳಲ್ಲಿ ಟ್ಯಾಬ್‌ ವ್ಯವಸ್ಥೆ ಜಾರಿಗೆ ಬರುವುದರಿಂದ ಖಾಸಗಿ ಅಗತ್ಯಗಳು ಮೊದಲಾದವುಗಳಿಗೆ ವಾಹನಗಳನ್ನು ಉಪಯೋಗಿಸುವುದನ್ನು ನಿಯಂತ್ರಿಸಲು ಸಾಧ್ಯವಿದೆ.

ಉಳಿದವರನ್ನು ಪೊಲೀಸ್‌ ವಾಹನಗಳಲ್ಲಿ ಕೊಂಡೊಯ್ಯುವುದನ್ನು ನಿಯಂತ್ರಿಸಬಹುದು. ಪೊಲೀಸ್‌ ವಾಹನದಲ್ಲಿ ಆರೋಪಿಗಳಿಗೆ ದೌರ್ಜನ್ಯವೆಸಗುವುದನ್ನು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಾಣಲು ಸಾಧ್ಯವಿದೆ. ಠಾಣೆಯ ಹೊಣೆಗಾರಿಕೆ ಇರುವ ಅಧಿಕಾರಿಗಳು ವಾಹನ ತಪಾಸಣೆಯನ್ನು ಉಳಿದವರಿಗೆ ವಹಿಸಿ ಜಾಗ ಖಾಲಿ ಮಾಡಿದರೆ ಇನ್ನು ಮುಂದೆ ಮೇಲಾಧಿಕಾರಿಗಳ ಕೈಗೆ ಸಿಕ್ಕಿ ಬೀಳುವರು. ತಾಂತ್ರಿಕ ವ್ಯವಸ್ಥೆಗಳನ್ನು ಉಪಯೋಗಿಸಿ ಪೊಲೀಸರಿಗೆ ನಿಯಂತ್ರಣ ಏರ್ಪಡಿಸಲು ದೊಡ್ಡ ಮೊತ್ತ ವಿನಿಯೋಗವಾಗಲಿದೆ.

ಪೊಲೀಸ್‌ ವಾಹನಗಳು ಸಂಚರಿಸುವ ದಿಕ್ಕು ಹಾಗೂ ಸ್ಥಳ ತಿಳಿಯಲು ಈಗಾಗಲೇ ಜಿಪಿಎಸ್‌ ವ್ಯವಸ್ಥೆ ಏರ್ಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ