ಕಾಸರಗೋಡು: ಬೀದಿನಾಯಿಗಳ ಸಂತಾನಹರಣದ ಉದ್ದೇಶದೊಂದಿಗೆ ಜಾರಿಗೆ ತಂದ ಆನಿಮಲ್ ಬತ್ರ್ ಕಂಟ್ರೋಲ್(ಎಬಿಸಿ) ಯೋಜನೆ ಜಿಲ್ಲೆಯಲ್ಲಿಕೆಲ ತಿಂಗಳ ಕಾಲ ಕಾರ್ಯಾಚರಣಾರಹಿತವಾಗಿತ್ತು. ಆದರೆ ಇದೀಗ ಮತ್ತೆ ಆರಂಭಗೊಂಡಿದೆ. ಆದರೆ ಜಿಲ್ಲೆಯ ನಾನಾ ಭಾಗಗಳಲ್ಲಿಬಿದಿನಾಯಿಗಳ ಉಪಟಳ ಮಿತಿಮೀರುತ್ತಿದೆ. ಜಿಲ್ಲೆಯಲ್ಲಿಕಾಸರಗೋಡು ಹಾಗೂ ತೃಕ್ಕರಿಪುರದಲ್ಲಿಸಂತಾನಹರಣ ಚಿಕಿತ್ಸಾ ಕೇಂದ್ರ(ಎಬಿಸಿ)ಗಳು ಕಾರ್ಯಾಚರಿಸುತ್ತಿವೆ.
ಬೀದಿನಾಯಿಗಳನ್ನು ಶಸ್ತ್ರಕ್ರಿಯಾ ಕೇಂದ್ರಕ್ಕೆ ತಲುಪಿಸಿ ಶಸ್ತ್ರಕ್ರಿಯೆ ನಡೆಸಲು ಹಾಗೂ ಅವುಗಳ ಆರೈಕೆ ನಡೆಸಿದ ಬಳಿಕ ಅವುಗಳನ್ನು ಆವಾಸ ಕೇಂದ್ರಕ್ಕೆ ಹಿಂತಿರುಗಿಸುವ ಯೋಜನೆ ಇದಾಗಿದೆ.
ನೇಪಾಳದಿಂದ ಬಂದ ಕಾರ್ಮಿಕರು ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಕ್ರಿಯಾ ಕೇಂದ್ರಕ್ಕೆ ತಲುಪಿಸುತ್ತಿದ್ದರು. ಅವರು ಹೆಚ್ಚುವರಿ ವೇತನ ಆಗ್ರಹಿಸಿ ನೇಪಾಳಕ್ಕೆ ಹಿಂತಿರುಗಿರುವುದರಿಂದ ಬೀದಿನಾಯಿಗಳ ಸಂತಾನಹರಣ ಶಸ್ತ್ರಕ್ರಿಯಾ ಕೇಂದ್ರ ಕಾರ್ಯಾಚರಣಾರಹಿತವಾಗಿತ್ತು. ಪ್ರಸ್ತುತ ಜಿಲ್ಲೆಯ ಹಲವು ವಲಯಗಳಲ್ಲಿಬೀದಿನಾಯಿಗಳ ಉಪಟಳ ತೀವ್ರಗೊಂಡಿದೆ. ಆಡುಗಳು ಬೀದಿನಾಯಿಗಳಿಂದ ಅತ್ಯಧಿಧಿಕ ಉಪಟಳವನ್ನು ಎದುರಿಸುತ್ತಿವೆ. ಇದಲ್ಲದೆ ಶಾಲೆ, ಮದ್ರಸಾಗಳಿಗೆ ಹೋಗುವ ಮಕ್ಕಳಿಗೆ, ಬೆಳಗ್ಗಿನ ಸವಾರರಿಗೆ ರಕ್ಷೆಯಿಲ್ಲದ ಸ್ಥಿತಿಯುಂಟಾಗಿದೆ. ಹಾಡುಹಗಲೇ ಬೀದಿನಾಯಿಗಳು ಗುಂಪಾಗಿ ಬಂದು ಆಕ್ರಮಣ ನಡೆಸುತ್ತಿರುವುದು ಹೆಚ್ಚುತ್ತಿದೆ. ತೃಕ್ಕರಿಪುರ ಬಸ್ ನಿಲ್ದಾಣದಲ್ಲಿಬಸ್ಸಿಗಾಗಿ ಕಾದುನಿಲ್ಲುವವರ ಮುಂಭಾಗಕ್ಕೆ ಬೀದಿನಾಯಿಗಳು ಗುಂಪಾಗಿ ತಲುಪುವುದು ಭಯಾನಕವಾದ ವಾತಾವರಣವನ್ನು ಸೃಷ್ಟಿಸುತ್ತಿದೆ.
ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಬೀದಿನಾಯಿಗಳು ರಸ್ತೆಗಳಲ್ಲಿಪ್ರಧಾನ ರಸ್ತೆಗಳಲ್ಲಿ, ಒಳರಸ್ತೆಗಳಲ್ಲಿಗುಂಪಾಗಿ ಓಡಾಡುತ್ತಿರುವುದು ಕಾಲ್ನಡೆ ಪ್ರಯಾಣಿಕರಿಗೆ ಮಾತ್ರವಲ್ಲವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ. ಬೆಳಗ್ಗಿನ ಸಮಯದಲ್ಲಿವಾಹನಗಳು, ಜನರ ಓಡಾಟ ಕಡಿಮೆ ಇದ್ದಾಗ ಬೀದಿನಾಯಿಗಳು ರಸ್ತೆಯಲ್ಲೇ ಕಿತ್ತಾಡುವ ದೃಶ್ಯಗಳನ್ನು ಕಾಣಬಹುದಾಗಿದೆ. ಬಸ್ ತಂಗುದಾಣಗಳು, ಹೊಟೇಲ್ಗಳು, ಅಂಗಡಿಗಳ ಮುಂಭಾಗದಲ್ಲಿನಾಯಿಗಳು ಪರಸ್ಪರ ಕಿತ್ತಾಡುತ್ತಿರುವುದು ಶಾಲಾ ವಿದ್ಯಾರ್ಥಿಗಳು ಮೊದಲಾದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಬೀದಿನಾಯಿಗಳನ್ನು ನಿಯಂತ್ರಣಕ್ಕೆ ತರಲು ಸಂತಾನಹರಣ ಚಿಕಿತ್ಸಾ ಕೇಂದ್ರಗಳು ನಿರಂತರವಾಗಿ ಕಾರ್ಯಾಚರಿಸುವ ಅಗತ್ಯವಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.
ಬೀದಿನಾಯಿಗಳನ್ನು ಶಸ್ತ್ರಕ್ರಿಯಾ ಕೇಂದ್ರಕ್ಕೆ ತಲುಪಿಸಿ ಶಸ್ತ್ರಕ್ರಿಯೆ ನಡೆಸಲು ಹಾಗೂ ಅವುಗಳ ಆರೈಕೆ ನಡೆಸಿದ ಬಳಿಕ ಅವುಗಳನ್ನು ಆವಾಸ ಕೇಂದ್ರಕ್ಕೆ ಹಿಂತಿರುಗಿಸುವ ಯೋಜನೆ ಇದಾಗಿದೆ.
ನೇಪಾಳದಿಂದ ಬಂದ ಕಾರ್ಮಿಕರು ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಕ್ರಿಯಾ ಕೇಂದ್ರಕ್ಕೆ ತಲುಪಿಸುತ್ತಿದ್ದರು. ಅವರು ಹೆಚ್ಚುವರಿ ವೇತನ ಆಗ್ರಹಿಸಿ ನೇಪಾಳಕ್ಕೆ ಹಿಂತಿರುಗಿರುವುದರಿಂದ ಬೀದಿನಾಯಿಗಳ ಸಂತಾನಹರಣ ಶಸ್ತ್ರಕ್ರಿಯಾ ಕೇಂದ್ರ ಕಾರ್ಯಾಚರಣಾರಹಿತವಾಗಿತ್ತು. ಪ್ರಸ್ತುತ ಜಿಲ್ಲೆಯ ಹಲವು ವಲಯಗಳಲ್ಲಿಬೀದಿನಾಯಿಗಳ ಉಪಟಳ ತೀವ್ರಗೊಂಡಿದೆ. ಆಡುಗಳು ಬೀದಿನಾಯಿಗಳಿಂದ ಅತ್ಯಧಿಧಿಕ ಉಪಟಳವನ್ನು ಎದುರಿಸುತ್ತಿವೆ. ಇದಲ್ಲದೆ ಶಾಲೆ, ಮದ್ರಸಾಗಳಿಗೆ ಹೋಗುವ ಮಕ್ಕಳಿಗೆ, ಬೆಳಗ್ಗಿನ ಸವಾರರಿಗೆ ರಕ್ಷೆಯಿಲ್ಲದ ಸ್ಥಿತಿಯುಂಟಾಗಿದೆ. ಹಾಡುಹಗಲೇ ಬೀದಿನಾಯಿಗಳು ಗುಂಪಾಗಿ ಬಂದು ಆಕ್ರಮಣ ನಡೆಸುತ್ತಿರುವುದು ಹೆಚ್ಚುತ್ತಿದೆ. ತೃಕ್ಕರಿಪುರ ಬಸ್ ನಿಲ್ದಾಣದಲ್ಲಿಬಸ್ಸಿಗಾಗಿ ಕಾದುನಿಲ್ಲುವವರ ಮುಂಭಾಗಕ್ಕೆ ಬೀದಿನಾಯಿಗಳು ಗುಂಪಾಗಿ ತಲುಪುವುದು ಭಯಾನಕವಾದ ವಾತಾವರಣವನ್ನು ಸೃಷ್ಟಿಸುತ್ತಿದೆ.
ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಬೀದಿನಾಯಿಗಳು ರಸ್ತೆಗಳಲ್ಲಿಪ್ರಧಾನ ರಸ್ತೆಗಳಲ್ಲಿ, ಒಳರಸ್ತೆಗಳಲ್ಲಿಗುಂಪಾಗಿ ಓಡಾಡುತ್ತಿರುವುದು ಕಾಲ್ನಡೆ ಪ್ರಯಾಣಿಕರಿಗೆ ಮಾತ್ರವಲ್ಲವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ. ಬೆಳಗ್ಗಿನ ಸಮಯದಲ್ಲಿವಾಹನಗಳು, ಜನರ ಓಡಾಟ ಕಡಿಮೆ ಇದ್ದಾಗ ಬೀದಿನಾಯಿಗಳು ರಸ್ತೆಯಲ್ಲೇ ಕಿತ್ತಾಡುವ ದೃಶ್ಯಗಳನ್ನು ಕಾಣಬಹುದಾಗಿದೆ. ಬಸ್ ತಂಗುದಾಣಗಳು, ಹೊಟೇಲ್ಗಳು, ಅಂಗಡಿಗಳ ಮುಂಭಾಗದಲ್ಲಿನಾಯಿಗಳು ಪರಸ್ಪರ ಕಿತ್ತಾಡುತ್ತಿರುವುದು ಶಾಲಾ ವಿದ್ಯಾರ್ಥಿಗಳು ಮೊದಲಾದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಬೀದಿನಾಯಿಗಳನ್ನು ನಿಯಂತ್ರಣಕ್ಕೆ ತರಲು ಸಂತಾನಹರಣ ಚಿಕಿತ್ಸಾ ಕೇಂದ್ರಗಳು ನಿರಂತರವಾಗಿ ಕಾರ್ಯಾಚರಿಸುವ ಅಗತ್ಯವಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.