ಆ್ಯಪ್ನಗರ

ರಾಷ್ಟ್ರೀಯ ಮುಷ್ಕರ: ಬಸ್‌ ಸಂಚಾರ ಸ್ಥಗಿತ

ಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರುದ್ಧ ಬಿಎಂಎಸ್‌ ಹೊರತುಪಡಿಸಿ ನಾನಾ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಮುಷ್ಕರ ಬುಧವಾರ ಪೂರ್ಣಗೊಂಡಿದೆ.

Vijaya Karnataka 10 Jan 2019, 5:00 am
ಕಾಸರಗೋಡು: ಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರುದ್ಧ ಬಿಎಂಎಸ್‌ ಹೊರತುಪಡಿಸಿ ನಾನಾ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಮುಷ್ಕರ ಬುಧವಾರ ಪೂರ್ಣಗೊಂಡಿದೆ.
Vijaya Karnataka Web strike bus service halted
ರಾಷ್ಟ್ರೀಯ ಮುಷ್ಕರ: ಬಸ್‌ ಸಂಚಾರ ಸ್ಥಗಿತ


ಮುಷ್ಕರದ ಅಂಗವಾಗಿ ಬುಧವಾರ ಕೂಡ ಯಾವುದೇ ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು ಸಂಚಾರ ನಡೆಸಲಿಲ್ಲ. ಟ್ಯಾಕ್ಸಿ ವಾಹನಗಳು ಸಹ ಮುಷ್ಕರದಲ್ಲಿ ಭಾಗಿಯಾದವು. ದ್ವಿಚಕ್ರ ವಾಹನ ಸಹಿತ ಖಾಸಗಿ ವಾಹನಗಳು ಸಂಚಾರ ನಡೆಸಿದವು. ನಗರ ಪ್ರದೇಶಗಳಲ್ಲಿ ಅಂಗಡಿಮುಂಗಟ್ಟುಗಳು ಮುಚ್ಚಿಕೊಂಡಿದ್ದವು. ಕೆಲವು ತೆರೆದು ಕಾರ್ಯಾಚರಿಸಿದವು.

ಮುಷ್ಕರ ನಿರತ ಸಂಘಟನೆಗಳಿಗೆ ಸೇರಿದ ಸಿಬ್ಬಂದಿಗಳು ಹಾಜರಾಗದ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ಕಚೇರಿ, ಶಿಕ್ಷ ಣ ಸಂಸ್ಥೆ, ಅರೆ ಸರಕಾರಿ, ಸಹಕಾರಿ ಸಂಸ್ಥೆಗಳಲ್ಲಿ ಹಾಜರಾತಿ ಕಡಿಮೆಯಾಗಿತ್ತು. ಟ್ಯಾಕ್ಸಿ ವಾಹನಗಳು ಆಟೋ ರಿಕ್ಷಾಗಳು ರಸ್ತೆಗಳಿಯದ ಕಾರಣ ನಗರ ಪ್ರದೇಶಗಳಲ್ಲಿ ಜನಸಂದಣಿ ಕಡಿಮೆಯಾಗಿತ್ತು.

ಮುಷ್ಕರ ನಿರತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪಯ್ಯನ್ನೂರು ರೈಲ್ವೆ ನಿಲ್ದಾಣದಲ್ಲಿ ರೈಲು ತಡೆ ನಡೆಸಿತ್ತು. ಅರ್ಧ ತಾಸುಗಳ ರೈಲು ತಡೆಯಿಂದಾಗಿ ಕೇರಳದಲ್ಲಿ ಓಡಾಟ ನಡೆಸುವ ರೈಲು ಸೇವೆ ಅಸ್ತವ್ಯಸ್ಥಗೊಂಡಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು. ಬುಧವಾರ ಮಧ್ಯರಾತ್ರಿ 12ರ ತನಕ ಮುಷ್ಕರ ಮುಂದುವರಿಯಲಿದೆ.

ಜಿಲ್ಲೆಯ ಮಂಜೇಶ್ವರ, ಹೊಸಂಗಡಿ, ಕುಂಬಳೆ, ಬದಿಯಡ್ಕ, ಮುಳ್ಳೇರಿಯಾ, ಪೆರ್ಲ, ಚೆರ್ಕಳ ಸಹಿತ ಪೇಟೆಗಳಲ್ಲಿ ಅಂಗಡಿಮುಂಗಟ್ಟುಗಳು ತೆರೆದು ಕಾರ್ಯಾಚರಿಸಿತ್ತು. ಕೆಲವು ಕಡೆ ಆಟೋ ಟ್ಯಾಕ್ಸಿಗಳು ಸಹ ಸಂಚಾರ ನಡೆಸಿದವು.

ಬುಧವಾರ ನಗರದಲ್ಲಿ ನಾನಾ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ನಡೆಯಿತು. ಬಳಿಕ ನಗರದ ಹೊಸ ಬಸ್‌ ನಿಲ್ದಾಣ ಬಳಿ ನಡೆದ ಪ್ರತಿಭಟನಾ ಧರಣಿಯಲ್ಲಿ ನಾನಾ ಕಾರ್ಮಿಕ ಸಂಘಟನೆಗಳ ನೇತಾರರು ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ