ಆ್ಯಪ್ನಗರ

ದುರಂತ ಪರಿಹಾರ ನಿಧಿ ಸಂಗ್ರಹಣೆಯಲ್ಲಿ ಮಾದರಿಯಾಗಿ ವಿದ್ಯಾರ್ಥಿಕೂಟ

ಮುಖ್ಯಮಂತ್ರಿಯವರ ಕಚೇರಿಗೆ ತಲುಪಿ ದುರಂತ ಪರಿಹಾರ ನಿಧಿಗೆ ದೇಣಿಗೆಯಾಗಿ ಸಂಗ್ರಹಿಸಲು ರಾಜ್ಯದ ಎಲ್ಲ ಶಾಲೆಗಳಲ್ಲಿ ಜಾರಿಗೊಳಿಸಲಿರುವ ವಿಶೇಷ ಪ್ರಾಜೆಕ್ಟ್ನ್ನು ಮಂಡಿಸಿದ ಆದರ್ಶ್‌ನ್ನು ಮಾದರಿಯನ್ನಾಗಿ ಮೇಲಾಂಗೋಡಿನ ವಿದ್ಯಾರ್ಥಿ ಸಮೂಹ.

Vijaya Karnataka 21 Aug 2019, 5:00 am
ಕಾಸರಗೋಡು: ಮುಖ್ಯಮಂತ್ರಿಯವರ ಕಚೇರಿಗೆ ತಲುಪಿ ದುರಂತ ಪರಿಹಾರ ನಿಧಿಗೆ ದೇಣಿಗೆಯಾಗಿ ಸಂಗ್ರಹಿಸಲು ರಾಜ್ಯದ ಎಲ್ಲ ಶಾಲೆಗಳಲ್ಲಿ ಜಾರಿಗೊಳಿಸಲಿರುವ ವಿಶೇಷ ಪ್ರಾಜೆಕ್ಟ್ನ್ನು ಮಂಡಿಸಿದ ಆದರ್ಶ್‌ನ್ನು ಮಾದರಿಯನ್ನಾಗಿ ಮೇಲಾಂಗೋಡಿನ ವಿದ್ಯಾರ್ಥಿ ಸಮೂಹ.
Vijaya Karnataka Web student model disaster relief fund raising
ದುರಂತ ಪರಿಹಾರ ನಿಧಿ ಸಂಗ್ರಹಣೆಯಲ್ಲಿ ಮಾದರಿಯಾಗಿ ವಿದ್ಯಾರ್ಥಿಕೂಟ


ತಿರುವನಂತಪುರ ವ್ಲತಂಗರೆ ಹೈಯರ್‌ ಸೆಕೆಂಡರಿ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿಯಾದ ಆದರ್ಶ್‌ ಎಲ್‌ಪಿ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ತನಗೆ ಲಭಿಸುತ್ತಿದ್ದ ಪಾಕೆಟ್‌ ಮನಿಯನ್ನು ಸಂಗ್ರಹಿಸಿಟ್ಟು ಮುಖ್ಯಮಂತ್ರಿಯವರ ದುರಂತ ಪರಿಹಾರ ನಿಧಿಗೆ ನೀಡುತ್ತಿದ್ದ ಸುದ್ದಿ ಮಾಧ್ಯಮಗಳ ಮೂಲಕ ಕೇರಳದಾದ್ಯಂತ ಹಬ್ಬಿತ್ತು.

ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರಾದ ಎ.ಸಿ.ಕಣ್ಣನ್‌ ನಾಯರ್‌ ನಾಮಧೇಯದಲ್ಲಿರುವ ಕಾಞಂಗಾಡು ಮೇಲಾಂಗೊಡು ಸರಕಾರಿ ಯುಪಿ ಶಾಲೆಯ ವಿದ್ಯಾರ್ಥಿಗಳ ಗುಂಪೊಂದು ಆದರ್ಶ್‌ನ್ನು ಮಾದರಿಯನ್ನಾಗಿಸಿ ದುರಂತ ಪರಿಹಾರ ನಿಧಿಗೆ ಹಣ ಸಂಗ್ರಹಿಸಲು ವಿಭಿನ್ನ ದಾರಿ ಹುಡುಕಿದೆ. ಸ್ವಾತಂತ್ರ್ಯ ದಿನದಂದು ಕೀಕಾಂಗೋಡು ನೀಲೇಶ್ವರದಲ್ಲಿ ನಡೆದ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಯುಪಿ ವಿಭಾಗದಲ್ಲಿ ಬಹುಮಾನ ಗಿಟ್ಟಿಸಿಕೊಂಡಿದ್ದ ಆಯುಷ್‌ ಮಧು, ಶ್ರೀನಂದನ್‌ ಕೆ.ರಾಜ್‌, ಆನಂದ್‌ ಕೆ. ಅರವಿಂದ್‌, ರಾಮು ಜಯನ್‌, ಅದ್ವೈತ್‌ ಕೆ.ಅರವಿಂದ್‌ ಎಂಬಿವರು ತಮಗೆ ಬಹುಮಾನವಾಗಿ ಲಭಿಸಿದ ಎಲ್ಲ ಹಣವನ್ನು ದುರಂತ ಪರಿಹಾರ ನಿಧಿಗೆ ನೀಡಿರುವುದರ ಹೊರತು ತಮ್ಮ ಸಣ್ಣ ಸಂಪಾದನೆಯನ್ನು ದುರಂತ ಪರಿಹಾರ ನಿಧಿಗೆ ನೀಡಲು ರಾಷ್ಟ್ರೀಯ ಅಧ್ಯಾಪಕ ಪ್ರಶಸ್ತಿ ವಿಜೇತರಾದ ಮುಖ್ಯಶಿಕ್ಷಕ ಡಾ.ಕೊಡಕ್ಕಾಡು ನಾರಾಯಣನ್‌ ಅವರಿಗೆ ಹಸ್ತಾಂತರಿಸಿದರು. ದ್ವಿತೀಯ ತರಗತಿಯ ಶಿವಪ್ರಸಾದ್‌ ತನ್ನ ಹಣದ ಪೆಟ್ಟಿಗೆಯಲ್ಲಿದ್ದ ಎಲ್ಲ ಹಣವನ್ನು ದುರಂತ ಪರಿಹಾರ ನಿಧಿಗೆ ಹಸ್ತಾಂತರಿಸಿದನು. ತೃತೀಯ ತರಗತಿಯ ಮಣಿಕಂಠನ್‌ ತನ್ನ ಸಂಪಾದನೆಯೊಂದಿಗೆ ನೆರೆಮನೆಯವರಿಂದ ಹಾಗೂ ಸಂಬಂಧಿಕರಿಂದ ಸಂಗ್ರಹಿಸಿದ ಹಣ ಸೇರಿಸಿ 1410ರೂ.ವನ್ನು ದುರಂತ ಪರಿಹಾರ ನಿಧಿಗೆ ಹಸ್ತಾಂತರಿಸಿದನು. ನೆರವಿಗೆ ನಾಡುಪೂರ್ತಿ ಕೈ ಜೋಡಿಸುತ್ತಿರುವಾಗ ತಮ್ಮ ನೆರವನ್ನು ನೀಡಿ ಮೇಲಾಂಗೋಡಿನ ವಿದ್ಯಾರ್ಥಿಗಳು ಉದಾರತೆಯನ್ನು ಮೆರೆದಿದ್ದಾರೆ. ನಾನಾ ತರಗತಿಗಳಿಂದ ಈಗಾಗಲೇ ಮೂವತ್ತು ಸಾವಿರಕ್ಕಿಂತ ಹೆಚ್ಚು ಹಣವನ್ನು ದುರಂತ ಪರಿಹಾರ ನಿಧಿಗಾಗಿ ಸಂಗ್ರಹಿಸಲಾಗಿದೆ. ಈ ಹಣವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ