ಆ್ಯಪ್ನಗರ

ನೆರೆಸಂತ್ರಸ್ತರಿಗೆ ಹಣ ಸಂಗ್ರಹಿಸಿದ ಪುಟಾಣಿಗಳು

ಓಣಂ ರಜೆಯನ್ನು ಉಪಯೋಗಿಸಿ ಮೇಲಾಂಗೋಡು ಎ. ಸಿ. ಕಣ್ಣನ್‌ ಸ್ಮಾರಕ ಸರಕಾರಿ ಯುಪಿ ಶಾಲೆಯ ದುರಂತ ಪರಿಹಾರ ನಿಧಿಗೆ ವಿದ್ಯಾರ್ಥಿಗಳು 3 ದಿನಗಳಲ್ಲಿ 1, 31, 010ರೂ. ಸಂಗ್ರಹಿಸಿದ್ದಾರೆ.

Vijaya Karnataka 25 Aug 2018, 3:37 pm
ಕಾಸರಗೋಡು: ಓಣಂ ರಜೆಯನ್ನು ಉಪಯೋಗಿಸಿ ಮೇಲಾಂಗೋಡು ಎ. ಸಿ. ಕಣ್ಣನ್‌ ಸ್ಮಾರಕ ಸರಕಾರಿ ಯುಪಿ ಶಾಲೆಯ ದುರಂತ ಪರಿಹಾರ ನಿಧಿಗೆ ವಿದ್ಯಾರ್ಥಿಗಳು 3 ದಿನಗಳಲ್ಲಿ 1, 31, 010ರೂ. ಸಂಗ್ರಹಿಸಿದ್ದಾರೆ.
Vijaya Karnataka Web students collected money for relief fund
ನೆರೆಸಂತ್ರಸ್ತರಿಗೆ ಹಣ ಸಂಗ್ರಹಿಸಿದ ಪುಟಾಣಿಗಳು


ಶಾಲೆಯ ಅಧ್ಯಾಪಕರು. ವಿದ್ಯಾರ್ಥಿಗಳು, ರಕ್ಷಕರು ದುರಂತ ಪರಿಹಾರ ನಿಧಿಗೆ ಹಣ ಸಂಗ್ರಹಿಸಿದ್ದಾರೆ. ಶಾಲೆಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಕಾಞಂಗಾಡು ನಗರಸಭಾಧ್ಯಕ್ಷ ವಿ. ವಿ. ರಮೇಶನ್‌ ಹಣ ಸ್ವೀಕರಿಸಿದರು. ಶಾಲೆ ಮುಖ್ಯ ಶಿಕ್ಷಕ ಕೂಡಕ್ಕಾಡು ನಾರಾಯಣನ್‌ ಅವರು 1 ತಿಂಗಳ ವೇತನವನ್ನು ಸಂಪೂರ್ಣವಾಗಿಯೂ, ಸೇವಾ ಕಾಲಾವಧಿ ಕೊನೆಗೊಳ್ಳುವವರೆಗಿನ ತಿಂಗಳ ಎರಡು ದಿನದ ವೇತನವನ್ನು ಮುಖ್ಯಮಂತ್ರಿಯವರ ದುರಂತ ಪರಿಹಾರ ನಿಧಿಗೆ ನೀಡಿ ಮಾದರಿಯಾಗಿದ್ದರು.

ವೈಎಂಸಿಎ ಹೊಸದುರ್ಗ ಅಧ್ಯಕ್ಷ ಕುರ‍್ಯನ್‌ ಚಕ್ಕಾಲ ಕುನ್ನೇಲ್‌ 50 ಸಾವಿರ ರೂ. ಮೌಲ್ಯದ ಚೆಕ್‌ ಹಸ್ತಾಂತರಿಸಿದರು. ಸಿ ಒ ಸಿ ಬಿಜು ಮುಖ್ಯ ಅತಿಥಿಯಾಗಿದ್ದರು. ಚಹಾ ಮಾರಾಟ ಮಾಡಿ ಲಭಿಸಿದ ಎಲ್ಲ ಹಣವನ್ನು ಮುಖ್ಯಮಂತ್ರಿಯವರ ದುರಂತ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ ಮಹೇಶ್‌ನನ್ನು ಅಭಿನಂದಿಸಲಾಯಿತು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೆ. ವಿ. ಸುಗತನ್‌ ಅಧ್ಯಕ್ಷತೆ ವಹಿಸಿದ್ದರು. ಉಪ ಜಿಲ್ಲಾ ಶಿಕ್ಷಣಾಧಿಕಾರಿ ಪಿ. ವಿ. ಜಯರಾಜನ್‌, ಬಿಪಿಒ ವಿ. ಮಧು, ಪಿ. ಮುರಳಿ, ರತೀಶ ಕಾಲಿಕ್ಕಡವ್‌, ಟಿ. ವಿ. ಸೀನ, ಪಿ. ಕುಂಞಿಕಣ್ಣನ್‌ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ