ಆ್ಯಪ್ನಗರ

ತಿರುವನಂತಪುರ-ಮಂಗಳೂರು ಮಲಬಾರ್‌ ಎಕ್ಸ್‌ಪ್ರೆಸ್‌ ವಿಳಂಬ

ತಿರುವನಂತಪುರ-ಮಂಗಳೂರು ಮಲಬಾರ್‌ ಎಕ್ಸ್‌ಪ್ರೆಸ್‌ ಕಣ್ಣೂರಿಗೆ ಬೆಳಗ್ಗೆ 7.10ಕ್ಕೆ ತಲುಪಿದರೂ ಇಪ್ಪತ್ತು ನಿಮಿಷಗಳ ಕಾಲ ಅಲ್ಲಿ ನಿಂತು ತಮ್ಮೊಡನೆ ಯಾಕೆ ನಿಷ್ಠುತರೆ ತೋರಿಸುತ್ತಿದ್ದೀರಿ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

Vijaya Karnataka 6 Dec 2018, 5:00 am
ಕಾಸರಗೋಡು: ತಿರುವನಂತಪುರ-ಮಂಗಳೂರು ಮಲಬಾರ್‌ ಎಕ್ಸ್‌ಪ್ರೆಸ್‌ ಕಣ್ಣೂರಿಗೆ ಬೆಳಗ್ಗೆ 7.10ಕ್ಕೆ ತಲುಪಿದರೂ ಇಪ್ಪತ್ತು ನಿಮಿಷಗಳ ಕಾಲ ಅಲ್ಲಿ ನಿಂತು ತಮ್ಮೊಡನೆ ಯಾಕೆ ನಿಷ್ಠುತರೆ ತೋರಿಸುತ್ತಿದ್ದೀರಿ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
Vijaya Karnataka Web trivendram mangaluru malabar express delay
ತಿರುವನಂತಪುರ-ಮಂಗಳೂರು ಮಲಬಾರ್‌ ಎಕ್ಸ್‌ಪ್ರೆಸ್‌ ವಿಳಂಬ


ಮಲಬಾರ್‌ ಎಕ್ಸ್‌ಪ್ರೆಸ್‌ ಕಾಸರಗೋಡಿಗೆ 8.40ಕ್ಕೆ ತಲುಪುತ್ತಿತ್ತು. ಇದೀಗ 9.40ಕ್ಕೆ ತಲುಪುತ್ತದೆ. ಇದರಿಂದ ಕಾಸರಗೋಡು, ಮಂಗಳೂರಿಗೆ ತಲುಪಬೇಕಾದ ಅಧ್ಯಾಪಕರು ಮೊದಲಾದ ನೌಕರರು, ಕಾರ್ಮಿಕರು, ರೋಗಿಗಳಿಗೆ ಸಂಕಷ್ಟದ ಪ್ರಯಾಣ ನಡೆಸುವಂತಾಗಿದೆ.

ನಿರ್ದಿಷ್ಟ ಸಮಯಕ್ಕೆ ಕಚೇರಿಗಳು, ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗದವರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕಚೇರಿ ಮೊದಲಾದೆಡೆಗಳಿಗೆ ತಲುಪಬೇಕಾದವರು ಈಗ ಮಂಗಳೂರು-ಕಣ್ಣೂರು ಪ್ಯಾಸೆಂಜರ್‌ನ್ನು ಆಶ್ರಯಿಸುತ್ತಿದ್ದಾರೆ. ಈ ರೈಲ್‌ನಲ್ಲಿ ಜನ ದಟ್ಟಣೆ ಹೆಚ್ಚಿದ್ದು, ಉಸಿರುಗಟ್ಟಿ ಪ್ರಯಾಣಿಸುವಂತಾಗಿದೆ. ಕಾಸರಗೋಡಿಗೆ 9.20ಕ್ಕೆ ತಲುಪುವ ಮಂಗಳೂರು-ಕಣ್ಣೂರು ಪ್ಯಾಸೆಂಜರ್‌ ಕುಂಬಳೆ, ಮಂಜೇಶ್ವರ ಪ್ರದೇಶಗಳಿಗೆ ನಿರ್ದಿಷ್ಟ ಸಮಯಕ್ಕೆ ತಲುಪುತ್ತಿಲ್ಲ.

ಬುಧವಾರ, ಶುಕ್ರವಾರ, ಶನಿವಾರಗಳಂದು ಕಂಚಿಗುಡ್ಡ-ಮಂಗಳೂರು, ಸಾಂದ್ರ-ಕಚ್ಚ್‌ ಮತ್ತಿತರ ರೈಲುಗಳು ಕಣ್ಣೂರು-ಮಂಗಳೂರು ಪ್ಯಾಸೆಂಜರ್‌ ರೈಲಿನ ಸಂಚಾರ ಸ್ಥಗಿತಗೊಳಿಸುತ್ತವೆ. ಈ ರೈಲುಗಳು ಹಾದುಹೋಗುವುದರಿಂದ ಚೆರುವತ್ತೂರು ಹಾಗೂ ನೀಲೇಸ್ವರದಲ್ಲಿ ನಿಲ್ಲಿಸಬೇಕಾಗಿರುವುದರಿಂದ ಹೆಚ್ಚಿನ ಸಮಯ ನಷ್ಟವಾಗುತ್ತಿದೆ. ಕೆಲವೊಮ್ಮೆ ಕಾಸರಗೋಡಿಗೆ ತಲುಪುವಾಗ 10 ಗಂಟೆಯಾಗುತ್ತದೆ.

ಪ್ಯಾಸೆಂಜರ್‌ ಟ್ರೈನ್‌ನಲ್ಲಿ ಬೋಗಿಗಳನ್ನು ಹೆಚ್ಚಿಸಲಾಗುವುದು ಎಂದೂ, ಮಲಬಾರ್‌ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆಯಿಂದ ಉಂಟಾದ ಸಮಸ್ಯೆ ಪರಿಹರಿಸಲು ಮೆಮು ರೈಲು ಓಡಿಸಲಾಗುವುದು ಮತ್ತಿತರ ಭರವಸೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.

ಪ್ಯಾಸೆಂಜರ್‌ನಲ್ಲಿ ಎರಡು ಬೋಗಿಗಳು ಸೇರಿ 16 ಆಗಲಿವೆ ಎಂದು ಭರವಸೆ ನೀಡಿದರೂ 14 ಬೋಗಿಗಳಲ್ಲಿ ಮಾತ್ರ ಸಂಚಾರ ನಡೆಯುತ್ತಿದೆ.

ಮಲಬಾರ್‌ ಎಕ್ಸ್‌ಪ್ರೆಸ್‌ನ ಸಮಯ ಬದಲಾವಣೆ ಹಿನ್ನ್ನೆಲೆಯಲ್ಲಿ ಬಸ್‌ಗೆ ಪ್ರಯಾಣ ಬದಲಾಯಿಸಿದವರಿದ್ದಾರೆ. ಕಾಞಂಗಾಡು-ಕಾಸರಗೋಡು ಕೆಎಸ್‌ಟಿಪಿ ರಸ್ತೆಯಲ್ಲಿ ಪ್ರಯಾಣ ಸುಲಭಗೊಳಿಸಬಹುದು ಎಂದು ನಿರೀಕ್ಷಿಸಿದವರು ಕೂಡ ನಿರಾಸರಾಗಿದ್ದಾರೆ.

ಹೆಚ್ಚುವರಿ ಬಸ್‌ಗೆ ಆಗ್ರಹ: ಅಗತ್ಯಕ್ಕೆ ತಕ್ಕಂತೆ ಕೆಎಸ್‌ಆರ್‌ಟಿಸಿ ಬಸ್‌ ಸವೀರ್‍ಸ್‌ಗಳು ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಕಾಸರಗೋಡು-ಕಾಞಂಗಾಡು ನಾನ್‌ ಸ್ಟಾಪ್‌ ಸರ್ವಿಸ್‌ ಪುನರಾರಂಭಿಸಬೇಕು ಎಂದು ಆರು ತಿಂಗಳ ಹಿಂದೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿತ್ತು. ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸರಗೋಡು-ಚೆರ್ಕಳ ಮೂಲಕ ಕಣ್ಣೂರಿಗೆ ಟೌನ್‌ ಟು ಟೌನ್‌ ಸರ್ವಿಸ್‌ ನಡೆಸುವ ಕೆಎಸ್‌ಆರ್‌ಟಿಸಿ ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಎರಡು ಬಸ್‌ಗಳನ್ನಾದರೂ ಕೆಎಸ್‌ಟಿಪಿ ರಸ್ತೆಯ ಮೂಲಕ ಟೌನ್‌ ಟು ಟೌನ್‌ ಸರ್ವಿಸ್‌ ಆಗಿ ಓಡಿಸಿದರೆ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ