ಆ್ಯಪ್ನಗರ

ರಾಜ್ಯದಲ್ಲಿ ಹಣ್ಣು-ತರಕಾರಿಯ 2 ಸಾವಿರ ಸ್ಟಾಲ್‌ಗಳು!

ಓಣಂ-ಬಕ್ರೀದ್‌ ಅಂಗವಾಗಿ ಕೃಷಿ ಇಲಾಖೆ 2000 ಹಣ್ಣು-ತರಕಾರಿಯ ಸುಮಾರು 2 ಸಾವಿರಕ್ಕೂ ಅಧಿಕ ಅಂಗಡಿಗಳ ಸಿದ್ಧತೆ ನಡೆಸಿದೆ.

Vijaya Karnataka 29 Jul 2018, 5:00 am
ಕಾಸರಗೋಡು: ಓಣಂ-ಬಕ್ರೀದ್‌ ಅಂಗವಾಗಿ ಕೃಷಿ ಇಲಾಖೆ 2000 ಹಣ್ಣು-ತರಕಾರಿಯ ಸುಮಾರು 2 ಸಾವಿರಕ್ಕೂ ಅಧಿಕ ಅಂಗಡಿಗಳ ಸಿದ್ಧತೆ ನಡೆಸಿದೆ.
Vijaya Karnataka Web two thousand stals for fruits vegitables
ರಾಜ್ಯದಲ್ಲಿ ಹಣ್ಣು-ತರಕಾರಿಯ 2 ಸಾವಿರ ಸ್ಟಾಲ್‌ಗಳು!


ಆ. 20ರಿಂದ 24ರ ವರೆಗೆ ಸ್ಟಾಲ್‌ಗಳು ಕಾರ್ಯಾಚರಿಸಲಿವೆ. ಕೃಷಿ ಇಲಾಖೆ, ಹಾರ್ಟಿಕಾರ್ಪ್‌, ವಿಎಫ್‌ಪಿಸಿಕೆ, ಕುಟುಂಬಶ್ರೀ ಆಶ್ರಯದಲ್ಲಿ ವಾರದಸಂತೆಗಳು, ಇಕೋಶಾಪ್‌ಗಳು, ಬ್ಲಾಕ್‌ಮಟ್ಟದ ಐಡರೇಟೆಡ್‌ ಕ್ಲಸ್ಟರ್‌ಗಳ ಮೂಲಕ ರಾಜ್ಯಾದ್ಯಂತ ಸ್ಟಾಲ್‌ಗಳನ್ನು ನಡೆಸಲಾಗುವುದು. ಹಾರ್ಟಿಕಾರ್ಪ್‌ -450 ಮಾರುಕಟ್ಟೆಗಳು, ವಿಎಫ್‌ಪಿಸಿಕೆ -200 ಮಾರುಕಟ್ಟೆಗಳನ್ನು ಕಾರ‍್ಯಗತಗೊಳಿಸಲು ತೀರ್ಮಾನಿಸಲಾಗಿದೆ. ಮೂಲ ಸೌಕರ್ಯ, ಸಂಗ್ರಹಣೆ, ಸಂಬಂಧಪಟ್ಟ ವೆಚ್ಚಗಳು ಇತ್ಯಾದಿಗಳಿಗೆ ಒಂದು ಮಾರುಕಟ್ಟೆಗೆ 65 ಸಾವಿರ ರೂ. ಇಲಾಖಾ ವೆಚ್ಚವಾಗಿದೆ. ಜಿಲ್ಲಾಮಟ್ಟದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಕಾರ್ಪೋರೇಶನ್‌, ನಗರಸಭಾ ಪ್ರದೇಶಗಳಲ್ಲಿ ಮೆಗಾಸ್ಟಾಲ್‌ಗಳನ್ನು ಆರಂಭಿಸಲು ಮಾರುಕಟ್ಟೆ ಬೆಲೆಯನ್ನು ಎಲ್ಲ ಸ್ಟಾಲ್‌ಗಳಿಗೆ ತಲುಪಿಸಲು ಅಂಗವಾಗಿ ಮೊಬೈಲ್‌ ಆ್ಯಪ್ಲಿಕೇಶನ್‌ ಉಪಯೋಗಿಸಲು ಇಲಾಖೆ ತೀರ್ಮಾನಿಸಿದೆ.

ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನು ಜಿಲ್ಲಾಮಟ್ಟದ ಸಮಿತಿ ನಿಗದಿಪಡಿಸಲಿದೆ. ಕೃಷಿಕರಿಂದ ನೇರವಾಗಿ ಸಂಗ್ರಹಿಸುವ ಹಣ್ಣು-ಹಂಪಲು, ತರಕಾರಿಗಳಿಗೆ ಶೇ.10ರಷ್ಟು ಹೆಚ್ಚುವರಿ ಬೆಲೆ ನೀಡಲಿದ್ದು, ಓಣಂ-ಬಕ್ರಿದ್‌ ಮಾರುಕಟ್ಟೆಯ ಮೂಲಕ ಮಾರಾಟ ನಡೆಸುವಾಗ ಶೇ. 30ರಷ್ಟು ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯಗೊಳಿಸಲಾಗುವುದು. ಕೇರಳದಲ್ಲಿ ಉತ್ಪಾದನೆಯಿಲ್ಲದ ತರಕಾರಿಗಳನ್ನು ಮಾತ್ರವೇ ಇತರ ರಾಜ್ಯಗಳಿಂದ ಆಮದು ಮಾಡಿ ನ್ಯಾಯ ಬೆಲೆಗೆ ಗ್ರಾಹಕರಿಗೆ ತಲುಪಿಸಲಾಗುವುದು. ಸೇಫ್‌ ಟು ಈಟ್‌ ತರಕಾರಿಗಳು, ಹಣ್ಣುಹಂಪಲುಗಳನ್ನು ಜನರಿಗೆ ತಲುಪಿಸಲು, ಉತ್ಸವ ಕಾಲಘಟ್ಟದ ಬೆಲೆ ಏರಿಕೆ ನಿಯಂತ್ರಿಸಲು ಇಲಾಖೆ ಪ್ರಯತ್ನಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ