ಆ್ಯಪ್ನಗರ

ವಯೋಮಧುರ ಯೋಜನೆ: 18200 ಮಂದಿಗೆ ಗ್ಲುಕೋಮೀಟರ್‌ ವಿತರಣೆ

ಮಧುಮೇಹ ರೋಗವಿರುವ ಹಿರಿಯರಿಗಾಗಿ ಸಾಮಾಜಿಕ ನ್ಯಾಯ ಇಲಾಖೆ ಜಾರಿಗೊಳಿಸುವ ವಯೋ ಮಧುರ ಯೋಜನೆ ದ್ವಿತೀಯ ಹಂತ ಆರಂಭವಾಗಿದೆ.

Vijaya Karnataka 10 Jun 2019, 5:00 am
ಕಾಸರಗೋಡು: ಮಧುಮೇಹ ರೋಗವಿರುವ ಹಿರಿಯರಿಗಾಗಿ ಸಾಮಾಜಿಕ ನ್ಯಾಯ ಇಲಾಖೆ ಜಾರಿಗೊಳಿಸುವ ವಯೋ ಮಧುರ ಯೋಜನೆ ದ್ವಿತೀಯ ಹಂತ ಆರಂಭವಾಗಿದೆ.
Vijaya Karnataka Web vayomadhura plan glucometre for 18200 people
ವಯೋಮಧುರ ಯೋಜನೆ: 18200 ಮಂದಿಗೆ ಗ್ಲುಕೋಮೀಟರ್‌ ವಿತರಣೆ


ರಕ್ತದ ಸಕ್ಕರೆಯ ಪ್ರಮಾಣ ತಪಾಸಣೆಗೊಳಪಡಿಸಲು ಉಚಿತವಾಗಿ ಗ್ಲುಕೋಮೀಟರ್‌ ವಿತರಿಸುವ ಯೋಜನೆಯನ್ನು ಈ ವರ್ಷ ಜಾರಿಗೊಳಿಸಲು ಸರಕಾರ ತೀರ್ಮಾನಿಸಿದೆ. ಇದರ ಪ್ರಕಾರ 18200 ಮಂದಿಗೆ ಉಚಿತವಾಗಿ ಗ್ಲುಕೋಮೀಟರ್‌ ಲಭಿಸಲಿದೆ.

ಕೇರಳ ರಾಜ್ಯದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನಂಪ್ರತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಗ್ಲ್ಲುಕೋಮೀಟರ್‌ ಹಾಗೂ ಸ್ಟ್ರಿಪ್‌ ಅನ್ನು ಉಚಿತವಾಗಿ ವಿತರಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಗ್ಲ್ಲುಕೋಮೀಟರ್‌ ಲಭಿಸುವುದರೊಂದಿಗೆ ಇನ್ನು ಮುಂದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅರಿಯಲು ಲ್ಯಾಬ್‌ಗೆ ಹೋಗಬೇಕಾಗಿಲ್ಲ.

60 ವರ್ಷ ದಾಟಿದ ಬಿಪಿಎಲ್‌ ವಿಭಾಗಕ್ಕೊಳಪಟ್ಟವರಿಗೆ ಗ್ಲುಕೋಮೀಟರ್‌ ಮಂಜೂರುಗೊಳಿಸಲಾಗುವುದು. ಸರಕಾರಿ ಅಂಗೀಕೃತ ಮೆಡಿಕಲ್‌ ಉಪಕರಣಗಳ ವಿತರಣಾ ಏಜೆನ್ಸಿಯಾದ ಕೇರಳ ಮೆಡಿಕಲ್‌ ಸರ್ವಿಸಸ್‌ ಕಾರ್ಪೊರೇಷನ್‌ ಮೂಲಕ ಗ್ಲುಕೋಮೀಟರ್‌ ವಿತರಿಸಲಾಗುವುದು. ಕಳೆದ ವರ್ಷ ಅರ್ಜಿ ಸ್ವೀಕರಿಸಿ ಜಿಲ್ಲಾ ಸಾಮಾಜಿಕ ನ್ಯಾಯ ಇಲಾಖೆಯ ಮೂಲಕ ಅರ್ಹರಾದ ಫಲಾನುಭವಿಗಳಿಗೆ ಗ್ಲ್ಲುಕೋಮೀಟರ್‌ ವಿತರಿಸಲಾಗಿತ್ತು.

ಪ್ರತಿಯೊಂದು ಜಿಲ್ಲೆಯಿಂದ ಸಾವಿರ ಮಂದಿಗೆ ಅಂದು ಗ್ಲ್ಲುಕೋಮೀಟರ್‌ ವಿತರಿಸಲಾಗಿತ್ತು. ಆದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಧಾರಾಳ ಅರ್ಜಿಗಳು ಇನ್ನೂ ಬಾಕಿ ಇರುವುದರಿಂದ ಯೋಜನೆ ಪ್ರಕಾರ ಗ್ಲ್ಲುಕೋಮೀಟರ್‌ ವಿತರಣೆ ಮುಂದುವರಿಸಲು ಸಾಮಾಜಿಕ ನ್ಯಾಯ ಇಲಾಖೆ ತೀರ್ಮಾನಿಸಿದೆ.

ಜಿಲ್ಲೆಗಳಲ್ಲಿ ಗ್ಲ್ಲುಕೋಮೀಟರ್‌ ವಿತರಿಸುವುದಕ್ಕಾಗಿ ಕಳೆದ ವರ್ಷ ಲಭ್ಯವಾಗಿದ್ದ ಅರ್ಜಿಗಳನ್ನು ಈ ಬಾರಿ ಪರಿಗಣಿಸಲಾಗುವುದು. ಜಿಲ್ಲೆಯಿಂದ ಲಭ್ಯವಾದ ಅರ್ಜಿಗಳ ಆಧಾರದಲ್ಲಿ ಎರಡು ಹಂತಗಳಲ್ಲಿ ಗ್ಲುಕೋಮೀಟರ್‌ ವಿತರಿಸಲಾಗುವುದು.

ಪ್ರಥಮ ಹಂತದಲ್ಲಿ ನಾನಾ ಜಿಲ್ಲೆಗಳಲ್ಲಿ 10390, ದ್ವಿತೀಯ ಹಂತದಲ್ಲಿ 7810 ಗ್ಲ್ಲುಕೋಮೀಟರ್‌ ವಿತರಿಸಲಾಗುವುದು. ಪ್ರಥಮ ಹಂತ ಆ. 15ರ ಮುಂಚಿತವಾಗಿ ಹಾಗೂ ದ್ವಿತೀಯ ಹಂತ ಡಿ. 15ರ ಮುಂಚಿತವಾಗಿ ಪೂರ್ಣಗೊಳಿಸಲಾಗುವುದು. ತಿರುವನಂತಪುರ 2000, ಕೊಲ್ಲಂ 1167, ಆಲಪ್ಪುಯ 2277, ಎರ್ನಾಕುಳಂ 2000, ಕೊಟ್ಟಾಯಂ 1606, ಪತ್ತನಂತಿಟ್ಟ 696, ಪಾಲಕ್ಕಾಡು 1500, ತೃಶ್ಯೂರು 1500, ಮಲಪ್ಪ್ಪುರ 2000, ಕೋಝಿಕ್ಕೋಡು 973, ಕಣ್ಣೂರು 444, ಕಾಸರಗೋಡು 377 ಹೀಗೆ ಪ್ರತಿಯೊಂದು ಜಿಲ್ಲೆಗಳಿಗೆ ಗ್ಲ್ಲುಕೋಮೀಟರ್‌ ಮಂಜೂರುಗೊಳಿಸಲಾಗಿದೆ. 25 ಸ್ಟ್ರಿಪ್‌ಗಳ ಸಹಿತ 385 ರೂ. ಬೆಲೆಬಾಳುವ ಗ್ಲುಕೋಮೀಟರ್‌ಗಳನ್ನು ಸರಕಾರ ಉಚಿತವಾಗಿ ವಿತರಿಸಲಿದೆ.

ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಕೇರಳವು ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ ಶೇ. 80ರಷ್ಟು ಹಿರಿಯ ನಾಗರಿಕರು ಮಧುಮೇಹ ರೋಗಿಗಳಾಗಿದ್ದಾರೆ ಎಂದು ಅಧ್ಯಯನಗಳು ಹೇಳುತ್ತಿವೆ. ಇದರ ಆಧಾರದಲ್ಲಿ ಸಾಮಾಜಿಕ ನ್ಯಾಯ ಇಲಾಖೆ ವಯೋಮಧುರ ಯೋಜನೆಯನ್ನು ಜಾರಿಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ