ಕಾಸರಗೋಡು: ವೆಳ್ಳರಿಕುಂಡು ಸಿವಿಲ್ ಸ್ಟೇಷನ್ ನಿರ್ಮಾಣ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದರು.
ಬಳಾಲ್ ಗ್ರಾಮ ಕಚೇರಿಯ ಸ್ಟಾಫ್ ಕ್ವಾರ್ಟರ್ಸ್ ಉದ್ಘಾಟಿಸಿ ಮಾತನಾಡಿದರು.
ಮಲೆನಾಡು ಪ್ರದೇಶದ ಎಲ್ಲಪ್ರಮುಖ ರಸ್ತೆಗಳ ದುರಸ್ತಿ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸ್ಮಾರ್ಟ್ ವಿಲೇಜ್ ಕಚೇರಿ ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಿಬ್ಬಂದಿಗಳಿಗೆ ಕ್ವಾರ್ಟರ್ಸ್ ನಿರ್ಮಿಸಲಾಗಿದೆ. ಗ್ರಾಮ ಕಚೇರಿಗೆ ಬರುವ ಸಿಬ್ಬಂದಿಗೆ ಅಗತ್ಯದ ಸೇವೆ ನೀಡಲು ಸಾಧ್ಯವಾಗಬೇಕು ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಪಿ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಉಪ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಎಡಿಎಂ. ಎನ್. ದೇವಿದಾಸ್, ಬಳಾಲ್ ಗ್ರಾಪಂ ಅಧ್ಯಕ್ಷ ಎಂ. ರಾಧಮಣಿ, ಉಪಾಧ್ಯಕ್ಷ ರಾಜು ಕಟ್ಟಕಾಯಂ, ಬ್ಲಾಕ್ ಪಂ. ಸದಸ್ಯರಾದ ಪಿ.ಜಿ. ದೇವ್, ಬಳಾಲ್ ಪಂಚಾಯಿತಿ ಸದಸ್ಯರು ಇ.ಜೆ. ಜೇಕಬ್, ಕೆ. ಮಾಧವನ್ ನಾಯರ್, ಎ.ವಿ. ಮ್ಯಾಥ್ಯೂ, ಟಾಮಿ ವಟ್ಟಕ್ಕತ್, ರಾಜಕೀಯ ಪಕ್ಷ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬಳಾಲ್ ಗ್ರಾಮ ಕಚೇರಿಯ ಸ್ಟಾಫ್ ಕ್ವಾರ್ಟರ್ಸ್ ಉದ್ಘಾಟಿಸಿ ಮಾತನಾಡಿದರು.
ಮಲೆನಾಡು ಪ್ರದೇಶದ ಎಲ್ಲಪ್ರಮುಖ ರಸ್ತೆಗಳ ದುರಸ್ತಿ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಸ್ಮಾರ್ಟ್ ವಿಲೇಜ್ ಕಚೇರಿ ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಿಬ್ಬಂದಿಗಳಿಗೆ ಕ್ವಾರ್ಟರ್ಸ್ ನಿರ್ಮಿಸಲಾಗಿದೆ. ಗ್ರಾಮ ಕಚೇರಿಗೆ ಬರುವ ಸಿಬ್ಬಂದಿಗೆ ಅಗತ್ಯದ ಸೇವೆ ನೀಡಲು ಸಾಧ್ಯವಾಗಬೇಕು ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಪಿ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಉಪ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಎಡಿಎಂ. ಎನ್. ದೇವಿದಾಸ್, ಬಳಾಲ್ ಗ್ರಾಪಂ ಅಧ್ಯಕ್ಷ ಎಂ. ರಾಧಮಣಿ, ಉಪಾಧ್ಯಕ್ಷ ರಾಜು ಕಟ್ಟಕಾಯಂ, ಬ್ಲಾಕ್ ಪಂ. ಸದಸ್ಯರಾದ ಪಿ.ಜಿ. ದೇವ್, ಬಳಾಲ್ ಪಂಚಾಯಿತಿ ಸದಸ್ಯರು ಇ.ಜೆ. ಜೇಕಬ್, ಕೆ. ಮಾಧವನ್ ನಾಯರ್, ಎ.ವಿ. ಮ್ಯಾಥ್ಯೂ, ಟಾಮಿ ವಟ್ಟಕ್ಕತ್, ರಾಜಕೀಯ ಪಕ್ಷ ಪ್ರತಿನಿಧಿಗಳು ಉಪಸ್ಥಿತರಿದ್ದರು.