ಆ್ಯಪ್ನಗರ

ಶಬರಿಮಲೆ ಭದ್ರತಾ ಸಿಬ್ಬಂದಿಯಿಂದ ವಾಕ್‌ದೋಷ : ಪರಿಹಾರಾರ್ಥ ಪೂಜೆ

ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರಿಗೆ ಕ್ಷೇತ್ರದ ಭದ್ರತಾ ಹಾಗೂ ಪೊಲೀಸ್‌ ಸಿಬ್ಬಂದಿಗಳಿಂದ ಆಗಿರುವ ವಾಕ್‌ದೋಷ ಪರಿಹಾರಾರ್ಥ ಶಬರಿಮಲೆ ಕ್ಷೇತ್ರದ ಪರವಾಗಿ ದೇವಸ್ವಂ ಮಂಡಳಿಯ ಉನ್ನತಾಧಿಕಾರಿಗಳು ಕೊಲ್ಲೂರು, ಸಾಲಿಗ್ರಾಮ ಹಾಗೂ ಕಾಸರಗೋಡಿನ ಕುಮಾರಮಂಗಳಂ ದೇವಸ್ಥಾನಗಳಲ್ಲಿ ಮಹಾಪೂಜೆ ನಡೆಸಿದ್ದಾರೆ

Vijaya Karnataka 10 Oct 2018, 5:00 am
ಕಾಸರಗೋಡು: ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರಿಗೆ ಕ್ಷೇತ್ರದ ಭದ್ರತಾ ಹಾಗೂ ಪೊಲೀಸ್‌ ಸಿಬ್ಬಂದಿಗಳಿಂದ ಆಗಿರುವ ವಾಕ್‌ದೋಷ ಪರಿಹಾರಾರ್ಥ ಶಬರಿಮಲೆ ಕ್ಷೇತ್ರದ ಪರವಾಗಿ ದೇವಸ್ವಂ ಮಂಡಳಿಯ ಉನ್ನತಾಧಿಕಾರಿಗಳು ಕೊಲ್ಲೂರು, ಸಾಲಿಗ್ರಾಮ ಹಾಗೂ ಕಾಸರಗೋಡಿನ ಕುಮಾರಮಂಗಳಂ ದೇವಸ್ಥಾನಗಳಲ್ಲಿ ಮಹಾಪೂಜೆ ನಡೆಸಿದ್ದಾರೆ.
Vijaya Karnataka Web wakdosha parihara pooja
ಶಬರಿಮಲೆ ಭದ್ರತಾ ಸಿಬ್ಬಂದಿಯಿಂದ ವಾಕ್‌ದೋಷ : ಪರಿಹಾರಾರ್ಥ ಪೂಜೆ


ಕಳೆದ ಜೂನ್‌ನಲ್ಲಿ ಶಬರಿಮಲೆಯಲ್ಲಿ ನಡೆದ ಜ್ಯೋತಿಷ್ಯ ಪ್ರಶ್ನೆಯಲ್ಲಿ ಮಂಡಲ ಹಾಗೂ ಮಕರ ಮಹೋತ್ಸವ ಅಲ್ಲದೇ ಇತರ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ದೇವಸ್ವಂ ಮಂಡಳಿಯ ಗಾರ್ಡ್‌ಗಳು ಮತ್ತು ಪೊಲೀಸರ ಅನವಶ್ಯಕ ನಡವಳಿಕೆಯಿಂದಾಗಿ ಅಯ್ಯಪ್ಪ ವ್ರತಧಾರಿಗಳು ಮಾನಸಿಕವಾಗಿ ನೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಶಬರಿಮಲೆಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತಾಧಿಕಾರಿಗಳೇ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಮಹಾಪೂಜೆ ಸಹಿತ ಇತರ ಪ್ರಾಯಶ್ಚಿತ್ತ ಪೂಜೆಗಳನ್ನು ಮಾಡಿದ್ದಾರೆ. ಅಲ್ಲದೆ ಶಬರಿಮಲೆ ಕ್ಷೇತ್ರದಲ್ಲಿ ಪೂಜೆಯಿಂದ ಸಂಕಲ್ಪಿಸಿದ ಬೆಳ್ಳಿಯನ್ನೂ ಸಮರ್ಪಿಸಲಾಗಿದೆ ಎಂದೂ ಹೇಳಲಾಗಿದೆ.

ಅಲ್ಲದೇ ಉಡುಪಿಯ ಸಾಲಿಗ್ರಾಮ ನರಸಿಂಹ ಸ್ವಾಮೀ ಕ್ಷೇತ್ರದಲ್ಲಿ ಸುಕೃತ ಹೋಮ ಮಾಡಲಾಗಿದೆ. ಶಬರಿಮಲೆ ಸನ್ನಿಧಾನದ ಸಮೀಪದ ಗೋ ಶಾಲೆಯಲ್ಲಿ ನಾಗರ ಹಾವೊಂದು ಮೃತಪಟ್ಟಿರುವ ಬಗ್ಗೆಯೂ ಜ್ಯೋತಿಷ್ಯ ಪ್ರಶ್ನೆಯಲ್ಲಿ ಕಂಡಂತೆ ಪರಿಹಾರಕ್ಕಾಗಿ ಮಾಳಯಕಡತ್ತ್‌ ಕ್ಷೇತ್ರದಲ್ಲಿ ಸರ್ಪ ಬಲಿ ಹಾಗೂ ಪಾಯಸ ಸೇವೆ ನಡೆಸಲಾಗಿದೆ.

ಪ್ರಶ್ನೆ ಪರಿಹಾರಕ್ಕೆ ಸಂಬಂಧಿಸಿದಂತೆ ದೇವಸ್ವಂ ಮುಖ್ಯಸ್ಥರು ಕಾಸರಗೋಡು ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಒಂದು ದಿನದ ಪೂಜೆ ನಡೆಸಿದ್ದಾರೆ. ಆಡಳಿತಾಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಸಹಿತ ಉನ್ನತ ಅಧಿಕಾರಿಗಳು ಕ್ಷೇತ್ರದಲ್ಲಿ ಶಬರಿಮಲೆ ಸನ್ನಿಧಾನದ ಜ್ಯೋತಿಷ್ಯ ಪ್ರಶ್ನೆ ಪರಿಹಾರಕ್ಕಾಗಿ ಪೂಜೆ ನಡೆಸಿದ್ದಾರೆ. ಗುರುವಾಯೂರು ಕ್ಷೇತ್ರ, ವಡಕ್ಕುನಾಥನ್‌ ಕ್ಷೇತ್ರ ಸಹಿತ ದೊಡ್ಡ ದೊಡ್ಡ ಕ್ಷೇತ್ರಗಳಲ್ಲದೆ ಗ್ರಾಮಗಳಲ್ಲಿನ ಅತಿ ಪ್ರಸಿದ್ಧ ಹೊಂದಿದ ಕ್ಷೇತ್ರಗಳಲ್ಲೂ ಪೂಜೆ ಸಹಿತ ಪ್ರಾಯಶ್ಚಿತ್ತ ಸೇವೆ ಮಾಡಲಾಗಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಬ್ರಾಹ್ಮಣರು ನಡೆಸಿದ ಪೂಜೆಯಲ್ಲಿ ಯಾವುದಾದರೂ ತಪ್ಪು ಅಥವಾ ವ್ಯತ್ಯಾಸ ಉಂಟಾದರೆ ಅದಕ್ಕೂ ಪರಿಹಾರ ಜ್ಯೋತಿಷ್ಯ ಪ್ರಶ್ನೆಯಲ್ಲಿ ತಿಳಿಸಲಾಗಿತ್ತು. ಬ್ರಾಹ್ಮಣ ದೋಷ ಪರಿಹಾರಕ್ಕಾಗಿ 12 ಬ್ರಾಹ್ಮಣರಿಗೆ ವಸ್ತ್ರ, ಅನ್ನಸಂತರ್ಪಣೆ ನೀಡಲಾಗಿದೆ. ಸುಮಂಗಲಿ ಪೂಜೆ ನಡೆಸಲಾಗಿದೆ.

ಹೀಗೆ ಶಬರಿಮಲೆಯ ಸನ್ನಿಧಾನದಲ್ಲಿ ನಡೆಸಿ ಜ್ಯೋತಿಷ್ಯ ಪ್ರಶ್ನೆಯ ಪರಿಹಾರ ಕಾರ್ಯಗಳು ಒಂದೆಡೆ ನಡೆಯುತ್ತಿರುವಾಗ ಇದೀಗ ಮಹಿಳಾ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ತೀರ್ಪು ಮುಂದಿಟ್ಟುಕೊಂಡು ಎಡರಂಗ ಸರಕಾರ ಹಾಗೂ ದೇವಸ್ವಂ ಮಂಡಳಿ ಇನ್ನೊಂದೆಡೆ ಪ್ರಯತ್ನಿಸುತ್ತಿರುವುದು ಮುಂದಿನ ದಿನಗಳಲ್ಲಿ ದೈವಜ್ಞ ಪ್ರಶ್ನೆಯಲ್ಲಿ ಇನ್ನಷ್ಟು ದೋಷ ಪರಿಹಾರ ಮಾಡಬೇಕಾಗಿ ಬರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ