ಆ್ಯಪ್ನಗರ

ಕಾರ್ಮಿಕ ಸಂಘಟನೆಗಳ ಮುಷ್ಕರ: ರಸ್ತೆಗಿಳಿಯದ ಕೆಎಸ್ಸಾರ್ಟಿಸಿ, ಖಾಸಗಿ, ಟ್ಯಾಕ್ಸಿಗಳು

ಕೇಂದ್ರ ಸರಕಾರದ ಕಾರ್ಮಿಕರ ನೀತಿ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಕರೆ ನೀಡಿದ ದ್ವಿದಿನ ಭಾರತ ಮುಷ್ಕರ ಮಂಗಳವಾರ ಜಿಲ್ಲೆಯಲ್ಲಿ ಪೂರ್ಣವಾಗಿದೆ.

Vijaya Karnataka 9 Jan 2019, 3:37 pm
ಕಾಸರಗೋಡು: ಕೇಂದ್ರ ಸರಕಾರದ ಕಾರ್ಮಿಕರ ನೀತಿ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಕರೆ ನೀಡಿದ ದ್ವಿದಿನ ಭಾರತ ಮುಷ್ಕರ ಮಂಗಳವಾರ ಜಿಲ್ಲೆಯಲ್ಲಿ ಪೂರ್ಣವಾಗಿದೆ.
Vijaya Karnataka Web workers organitation strike
ಕಾರ್ಮಿಕ ಸಂಘಟನೆಗಳ ಮುಷ್ಕರ: ರಸ್ತೆಗಿಳಿಯದ ಕೆಎಸ್ಸಾರ್ಟಿಸಿ, ಖಾಸಗಿ, ಟ್ಯಾಕ್ಸಿಗಳು


ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು, ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ಸರಕಾರಿ ಕಚೇರಿಗಳು, ಶಾಲೆಗಳು ಕಾರ್ಯನಿರ್ವಹಿಸಲಿಲ್ಲ. ಅಂಗಡಿ ಮುಗ್ಗಟ್ಟುಗಳು ಮುಚ್ಚಿಕೊಂಡಿತ್ತು. ದ್ವಿಚಕ್ರ ಸಹಿತ ಖಾಸಗಿ ವಾಹನಗಳು ಸಂಚಾರ ನಡೆಸಿತ್ತು. ಇದರಿಂದಾಗಿ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬುಧವಾರವೂ ಮುಷ್ಕರ ನಡೆಯಲಿದೆ.

ಮುಷ್ಕರ ನಿರತ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು. ಅಲ್ಲದೇ ಚೆರ್ವತ್ತೂರು, ಕಾಞಂಗಾಡು ಹಾಗೂ ಕಾಸರಗೋಡು ರೈಲ್ವೇ ನಿಲ್ದಾಣಗಳಲ್ಲಿ ರೈಲು ತಡೆ ನಡೆಸಿದ್ದರು. ಇದರಿಂದ ರೈಲು ಗಾಡಿ ಅರ್ಧ ತಾಸುಗಳ ವಿಳಂಬವಾಗಿ ಸಂಚಾರ ನಡೆಸಿತ್ತು.

ಮುಷ್ಕರದಲ್ಲಿ ಬಿಎಂಎಸ್‌ ಹೊರತುಪಡಿಸಿ ರಾಜ್ಯದ 19 ಕಾರ್ಮಿಕ ಸಂಘಟನೆಗಳು ಪಾಲ್ಗೊಂಡಿತ್ತು. ಕೆಎಸ್ಸಾರ್ಟಿಸಿ ಸಿಬ್ಬಂದಿಗಳು, ಸರಕಾರಿ ಸಿಬ್ಬಂದಿಗಳು, ಖಾಸಗಿ ಬಸ್‌ ಸಿಬ್ಬಂದಿಗಳು, ಟ್ಯಾಕ್ಸಿ ಚಾಲಕರು, ನಾನಾ ಖಾಸಗಿ ವಲಯದ ಕಾರ್ಮಿಕರು ಸಹ ಮುಷ್ಕರದಲ್ಲಿ ಪಾಲ್ಗೊಂಡರು.

ಕಾಸರಗೋಡಿನಲ್ಲಿ ಮಧ್ಯಾಹ್ನ ಮಂಗಳೂರು-ಚೆನ್ನೈ ಮೇಲ್‌ ರೈಲು ಗಾಡಿಯನ್ನು ತಡೆಲಾಯಿತು. ಅರ್ಧ ತಾಸುಗಳ ತನಕ ರೈಲು ಗಾಡಿ ವಿಳಂಬವಾಗಿ ಮಂಗಳೂರಿಗೆ ತೆರಳಿತ್ತು. ಬಳಿಕ ಕಾರ್ಯಕರ್ತರು ಗಂಜಿ ತಯಾರಿಸಿ ಪ್ರತಿಭಟಿಸಿದರು.

ಕಾಸರಗೋಡು ನಗರದಲ್ಲಿ ನಡೆದ ಪ್ರತಿಭಟನಾ ಧರಣಿಯಲ್ಲಿ ಪಿ.ದಾಮೋದರನ್‌ ಅಧ್ಯಕ್ಷ ತೆ ವಹಿಸಿದರು. ನಾನಾ ಸಂಘಟನೆಗಳಾದ ನೇತಾರರಾದ ಕೆ. ಭಾಸ್ಕರನ್‌, ಟಿ.ಕೆ.ರಾಜನ್‌, ಟಿ.ಕೃಷ್ಣನ್‌, ಕೆ.ಭಾಸ್ಕರನ್‌, ಜಯರಾಜನ್‌, ಕೆ.ಕುಮಾರನ್‌, ಭುವನಚಂದ್ರನ್‌, ಕರಿವೆಳ್ಳೂರು ವಿಜಯನ್‌, ಬಿಜು ಉಣ್ಣಿತ್ತಾನ್‌, ಎ.ಅಹಮ್ಮದ್‌ ಹಾಜಿ, ಸಿಜಿ ಟೋನಿ, ಸಿಎಂಎ ಜಲೀಲ್‌, ಮುನೀರ್‌, ಬಿಜು, ಶರೀಫ್‌, ಮುತಾಲಿಬ್‌, ಸುಬೈರ್‌ ಮುಂತಾದವರು ಮಾತನಾಡಿದರು.

ಅದೇ ರೀತಿಯಲ್ಲಿ ಬದಿಯಡ್ಕ ಪೇಟೆಯಲ್ಲಿ ಸಂಯುಕ್ತ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲೆಯ ಕಾಸರಗೋಡು, ಮಂಜೇಶ್ವರ, ಕಾಞಂಗಾಡು ಸಹಿತ ನಾನಾ ತಾಲೂಕು ಕಚೇರಿಗಳಲ್ಲಿ ಹಾಜರಾತಿ ಕಡಿಮೆಯಾಗಿತ್ತು. ಬುಧವಾರ ಮದ್ಯರಾತ್ರಿ ತನಕ ಮುಷ್ಕರ ಮುಂದುವರಿಯಲಿದೆ.

ಮುಷ್ಕರ ನಿರತರು ಜಿಲ್ಲೆಯ ಹಲವು ಕಡೆ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು. ಸರಕು ಲಾರಿ ಸಹಿತ ಟ್ಯಾಕ್ಸಿಗಳನ್ನು ತಡೆದರು. ಪಾಲಕುನ್ನು ಬಳಿ ಅಂಗಡಿಮುಚ್ಚಿಸುವ ಸಂದರ್ಭದಲ್ಲಿ ಪ್ರತಿಭಟನಾಗಾರರ ಮತ್ತು ವ್ಯಾಪಾರಿಗಳ ಮಧ್ಯೆ ಘರ್ಷಣೆ ನಡೆಯಿತು. ಇದರಿಂದ ಖಾಸಗಿ ಹಣಕಾಸು ಸಂಸ್ಥೆಯನ್ನು ಪುಡಿಗೈಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ