ಆ್ಯಪ್ನಗರ

ಕರಿಂದಳದಲ್ಲಿ ಯೋಗ, ನ್ಯಾಚುರೋಪತಿ ಇನ್‌ಸ್ಟಿಟ್ಯೂಟ್‌

ಕರಿಂದಳದಲ್ಲಿ 100 ಮಂಚಗಳಿರುವ ಆಸ್ಪತ್ರೆ ಒಳಗೊಂಡ ಯೋಗ ಹಾಗೂ ನ್ಯಾಚುರೋಪತಿ ಸ್ನಾತಕೋತ್ತರ ಸಂಸ್ಥೆ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡುವ ಪೂರ್ವಭಾವಿಯಾಗಿ ಸ್ಥಳ ಹಸ್ತಾಂತರಿಸಲಿರುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲಾಯಿತು.

Vijaya Karnataka 14 Oct 2018, 3:19 pm
ಕಾಸರಗೋಡು: ಕರಿಂದಳದಲ್ಲಿ 100 ಮಂಚಗಳಿರುವ ಆಸ್ಪತ್ರೆ ಒಳಗೊಂಡ ಯೋಗ ಹಾಗೂ ನ್ಯಾಚುರೋಪತಿ ಸ್ನಾತಕೋತ್ತರ ಸಂಸ್ಥೆ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡುವ ಪೂರ್ವಭಾವಿಯಾಗಿ ಸ್ಥಳ ಹಸ್ತಾಂತರಿಸಲಿರುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲಾಯಿತು. ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ಹಾಗೂ ಸೆಂಟ್ರಲ್‌ ಕೌನ್ಸಿಲ್‌ ಫಾರ್‌ ರಿಸರ್ಚ್‌ ಇನ್‌ ಯೋಗ ಆ್ಯಂಡ್‌ ನ್ಯಾಚುರೋಪತಿ ನಿರ್ದೇಶಕ ಡಾ. ಈಶ್ವರ ಎನ್‌. ಆಚಾರ್ಯ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು.
Vijaya Karnataka Web yoga naturopathy institute at karindala
ಕರಿಂದಳದಲ್ಲಿ ಯೋಗ, ನ್ಯಾಚುರೋಪತಿ ಇನ್‌ಸ್ಟಿಟ್ಯೂಟ್‌


ಕಂದಾಯ ಸಚಿವ ಇ. ಚಂದ್ರಶೇಖರನ್‌ ಅವರ ವಿಶೇಷ ಆಸಕ್ತಿಯಂತೆ ವೆಳ್ಳರಿಕುಂಡು ತಾಲೂಕಿನ ಕರಿಂದಳದಲ್ಲಿ ಸಂಸ್ಥೆ ನಿರ್ಮಾಣಗೊಳ್ಳಲಿದೆ. ಕೇಂದ್ರ ಆಯುಷ್‌ ಇಲಾಖೆ ಅಧೀನದ ಸ್ವಯಂ ಆಡಳಿತ ಸಂಸ್ಥೆಯಾದ ಸೆಂಟ್ರಲ್‌ ಕೌನ್ಸಿಲ್‌ ಫಾರ್‌ ರಿಸರ್ಚ್‌ ಇನ್‌ ಯೋಗ ಆ್ಯಂಡ್‌ ನ್ಯಾಚುರೋಪತಿಯು ಕರಿಂದಳದಲ್ಲಿ ಸಂಸ್ಥೆ ಆರಂಭಿಸುತ್ತಿದೆ.

ಆಸ್ಪತ್ರೆಗೆ ಹಾಗೂ ಸಂಸ್ಥೆಗಾಗಿ 30 ವರ್ಷಗಳಿಗೆ 15 ಎಕರೆ ಸ್ಥಳವನ್ನು ರಾಜ್ಯ ಸರಕಾರ ಲೀಸಿಗೆ ನೀಡುತ್ತಿದೆ. ಕೇಂದ್ರ ಆಯುಷ್‌ ಇಲಾಖೆ ಅಧೀನದ ಸ್ವಯಂ ಆಡಳಿತ ಸಂಸ್ಥೆಗೆ ನೇರವಾಗಿ ಭೂಮಿ ಹಸ್ತಾಂತರಿಸಲು ವ್ಯವಸ್ಥೆ ಇಲ್ಲದ್ದರಿಂದ ಲೀಸ್‌ ವ್ಯವಸ್ಥೆಯಲ್ಲಿ ಮಂಜೂರುಗೊಳಿಸಲಾಗಿದೆ.

ಸಹಾಯಕ ಜಿಲ್ಲಾಧಿಕಾರಿ ಕೆ. ರವಿಕುಮಾರ್‌, ಕಿನಾನೂರು-ಕರಿಂದಳ ಗ್ರಾ.ಪಂ.ಅಧ್ಯಕ್ಷೆ ಎ. ವಿಧುಬಾಲ, ಮಾಜಿ ಶಾಸಕ ಕುಮಾರನ್‌ ಎಂ. ವೆಳ್ಳರಿಕುಂಡು, ತಹಸೀಲ್ದಾರ ಕುಂಞಿಕಣ್ಣನ್‌, ಡಾ. ಶಿಂಜಿ, ಕರಿಂದಳ ಗ್ರಾಮಾಧಿಕಾರಿ ಟಿ. ಸುರೇಶ್‌, ನ್ಯಾಯವಾದಿ ಕೆ. ಕೆ. ನಾರಾಯಣನ್‌, ಒ. ಎಂ. ಬಾಲಕೃಷ್ಣನ್‌, ಸಿ. ಪಿ. ಬಾಬು, ಎನ್‌. ಪುಷ್ಪರಾಜ್‌, ಅಧಿಕಾರಿಗಳು ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ