ಆ್ಯಪ್ನಗರ

ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಯುವಜನತೆ ಮುಂದಾಗಬೇಕು: ಶೋಭನಾ ಜಾರ್ಜ್‌

ಸ್ವ ಉದ್ಯೋಗ ಕೈಗೊಳ್ಳಲು ಮುಂದಾಗುವ ಜನರಿಗೆ ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯು ಎಲ್ಲ ಸಹಕಾರಗಳನ್ನೂ ಒದಗಿಸಲು ಮುಂದಾಗುವುದು ಎಂದು ರಾಜ್ಯ ಖಾದಿ ಮಂಡಳಿ ಉಪಾಧ್ಯಕ್ಷೆ ಶೋಭನಾ ಜಾರ್ಜ್‌ ಹೇಳಿದ್ದಾರೆ.

Vijaya Karnataka 10 Dec 2018, 5:00 am
ಉಪ್ಪಳ: ಸರಕಾರಿ ಉದ್ಯೋಗ ಇಲ್ಲವೇ ವಿದೇಶದಲ್ಲಿ ಉದ್ಯೋಗವನ್ನು ನಿರೀಕ್ಷಿಸಿ ಯೌವನವನ್ನು ವ್ಯರ್ಥಗೊಳಿಸುವ ಬದಲು ವ್ಯವಸ್ಥಿತ ಕ್ರಿಯಾ ಯೋಜನೆ, ದೃಢ ನಿರ್ಧಾರ ಹಾಗೂ ಪ್ರಾಮಾಣಿಕತೆಗಳನ್ನು ಮೂಲಧನವನ್ನಾಗಿಸಿ ಸ್ವ ಉದ್ಯೋಗ ಕೈಗೊಳ್ಳಲು ಮುಂದಾಗುವ ಜನರಿಗೆ ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿಯು ಎಲ್ಲ ಸಹಕಾರಗಳನ್ನೂ ಒದಗಿಸಲು ಮುಂದಾಗುವುದು ಎಂದು ರಾಜ್ಯ ಖಾದಿ ಮಂಡಳಿ ಉಪಾಧ್ಯಕ್ಷೆ ಶೋಭನಾ ಜಾರ್ಜ್‌ ಹೇಳಿದ್ದಾರೆ.
Vijaya Karnataka Web youth come forward to self employment
ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಯುವಜನತೆ ಮುಂದಾಗಬೇಕು: ಶೋಭನಾ ಜಾರ್ಜ್‌


ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ಮಂಜೇಶ್ವರ ಶಾಂತಿಸೇನಾ ಫೌಂಡೇಶನ್‌ ಮಂಜೇಶ್ವರ ಹೊಸಂಗಡಿಯ ಗೇಟ್‌ ವೇ ಆಡಿಟೋರಿಯಂನಲ್ಲಿ ಜಂಟಿಯಾಗಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಜಿಲ್ಲಾ ಮಟ್ಟದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾವಲಂಬಿ ಮಹಿಳೆಯರು ಕುಟುಂಬ ಹಾಗೂ ಸಮಾಜದ ಐಶ್ವರ್ಯಗಳಾಗಿದ್ದಾರೆ. ಈ ಹಿಂದಿಗಿಂತ ಮಹಿಳೆಯರು ಸ್ವ ಉದ್ಯೋಗಕ್ಕೆ ಮುಂದೆ ಬರುತ್ತಿದ್ದಾರೆ. ಪ್ರಾಮಾಣಿಕತೆ ಹಾಗೂ ದೃಢ ಸಂಕಲ್ಪದಿಂದ ಮಹಿಳೆಯರು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳು ಆರಂಭಿಸಿದ ಹಲವಾರು ಉದ್ಯಮಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸ್ವ ಉದ್ಯೋಗ ಹಾಗೂ ಉದ್ಯಮಶೀಲತೆಯ ನೂತನ ಶಕೆಯನ್ನು ಆರಂಭಿಸಲು ಹಾಗೂ ತನ್ಮೂಲಕ ಹಲವರಿಗೆ ಉದ್ಯೋಗ ಒದಗಿಸಲು ಮುಂದಾಗುವ ಎಲ್ಲರಿಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಆಕರ್ಷಕ ಸಬ್ಸಿಡಿ ಸಹಿತ ನಾನಾ ಸಹಾಯಗಳನ್ನು ಒದಗಿಸಲು ಉತ್ಸುಕವಾಗಿದೆ. ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಮಂಜೇಶ್ವರದಲ್ಲಿ ಈ ಮಾಹಿತಿ ಶಿಬಿರ ಆಯೋಜಿಸಿದ್ದು ಸಕಾಲಿಕ ಎಂದರು.

ಕಾರ್ಯಕ್ರಮದಲ್ಲಿ ಕಾಸರಗೋಡು ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್‌ ವರ್ಕಾಡಿ ಅಧ್ಯಕ್ಷ ತೆ ವಹಿಸಿದ್ದರು. ಖಾದಿ ಬೋರ್ಡ್‌ ನಿರ್ದೇಶಕ ಸಿ.ಕೆ.ಅನಿಲ್‌ ಕುಮಾರ್‌, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಬಂಧಕಿ ರೇಖಾ, ಲೀಡ್‌ ಬ್ಯಾಂಕ್‌ ಪ್ರಬಂಧಕ ರಮಣನ್‌, ಗ್ರಾ.ಪಂ.ಉಪಾಧ್ಯಕ್ಷೆ ಶಶಿಕಲಾ, ಶಾಂತಿ ಸೇನಾ ಫೌಂಡೇಶನ್‌ ಟ್ರಸ್ಟಿಗಳಾದ ಉಮ್ಮರ್‌ ಬೋರ್ಕಳ, ದಿವಾಕರ್‌ ಎಸ್‌.ಜೆ ಮತ್ತಿತರರು ಉಪಸ್ಥಿತರಿದ್ದರು.

ಪಿ.ಎನ್‌. ಅಜಯ್‌ ಕುಮಾರ್‌ ಯೋಜನೆಯ ಮಾಹಿತಿ ನೀಡಿದರು. ಯೋಜನಾಧಿಕಾರಿ ಗಿರೀಶ್‌ ಕುಮಾರ್‌ ಸ್ವಾಗತಿಸಿದರು. ಸುಭಾಶ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ