ಆ್ಯಪ್ನಗರ

ವಿದ್ಯುತ್‌ ಬೇಲಿ ಸ್ಪರ್ಶಿಸಿ ಯುವಕ ಸಾವು: ಆರೋಪಿ ಖುಲಾಸೆ

ಹೊಲಕ್ಕೆ ಬರುವ ಕಾಡುಪ್ರಾಣಿಗಳ ಉಪಟಳವನ್ನು ತಡೆಯುವುದಕ್ಕಾಗಿ ಅಳವಡಿಸಿದ ವಿದ್ಯುತ್‌ ಚಾಲಿತ ಬೇಲಿಯಿಂದ ಶಾಕ್‌ ತಗುಲಿ ಯುವಕ ಮೃತಪಟ್ಟ ಪ್ರಕರಣದ ಆರೋಪಿ ಕುಂಟಾರು ಹಸಂತ್ತಡ್ಕ ನಿವಾಸಿ ವೀರೋಜಿ ರಾವ್‌(82) ಎಂಬವರ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ದ್ವಿತೀಯ)ದಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಕೊಳ್ಳದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದೆ.

Vijaya Karnataka 28 Jun 2019, 5:00 am
ಕಾಸರಗೋಡು: ಹೊಲಕ್ಕೆ ಬರುವ ಕಾಡುಪ್ರಾಣಿಗಳ ಉಪಟಳವನ್ನು ತಡೆಯುವುದಕ್ಕಾಗಿ ಅಳವಡಿಸಿದ ವಿದ್ಯುತ್‌ ಚಾಲಿತ ಬೇಲಿಯಿಂದ ಶಾಕ್‌ ತಗುಲಿ ಯುವಕ ಮೃತಪಟ್ಟ ಪ್ರಕರಣದ ಆರೋಪಿ ಕುಂಟಾರು ಹಸಂತ್ತಡ್ಕ ನಿವಾಸಿ ವೀರೋಜಿ ರಾವ್‌(82) ಎಂಬವರ ಮೇಲಿನ ಆರೋಪ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ದ್ವಿತೀಯ)ದಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಕೊಳ್ಳದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದೆ.
Vijaya Karnataka Web youth death due to electric fence touch accused free
ವಿದ್ಯುತ್‌ ಬೇಲಿ ಸ್ಪರ್ಶಿಸಿ ಯುವಕ ಸಾವು: ಆರೋಪಿ ಖುಲಾಸೆ


ಅದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂಟಾರು ಉಮಿತ್ತಡ್ಕದ ಎಲ್ಲೋಜಿ ರಾವ್‌ ಎಂಬವರ ಪುತ್ರ ಕಿಶೋರ್‌(28) ಎಂಬವರು 2014, ಅ.7ರಂದು ರಾತ್ರಿ ಕುಂಟಾರು ಹಂಸತ್ತಡ್ಕ ಎಂಬಲ್ಲಿನ ಹೊಲದ ಬಳಿ ಅಳವಡಿಸಿದ ವಿದ್ಯುತ್‌ ಚಾಲಿತ ಬೇಲಿ ಸ್ಪರ್ಶಗೊಂಡು ಶಾಕ್‌ ತಗುಲಿ ಸಾವನ್ನಪ್ಪಿದರು. ಕಾಡುಪ್ರಾಣಿಗಳು ಕೃಷಿ ನಾಶಗೊಳಿಸುವುದನ್ನು ತಡೆಯುವುದಕ್ಕಾಗಿ ಹೊಲಕ್ಕೆ ವಿದ್ಯುತ್‌ ಚಾಲಿತ ಬೇಲಿ ನಿರ್ಮಿಸಲಾಗಿತ್ತು. ಹೊಲದ ಮಾಲೀಕ ವೀರೋಜಿ ರಾವ್‌ ವಿರುದ್ಧ ಆದೂರು ಪೊಲೀಸರು ಉದ್ದೇಶ ಪೂರ್ವಕವಲ್ಲದ ನರಹತ್ಯೆ ಸೆಕ್ಷ ನ್‌ ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ಆದರೆ ವಿಚಾರಣೆಯಲ್ಲಿ ಆರೋಪಿ ಮೇಲಿನ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ