ಆ್ಯಪ್ನಗರ

ಜಿಪಂ ವಾರ್ಷಿಕ ಯೋಜನೆ ಬಜೆಟ್‌ ಮೊತ್ತ 84.38 ಕೋಟಿ ರೂ.

ಜಿಲ್ಲಾಪಂಚಾಯಿತಿಯ 2020-21ನೇ ವಾರ್ಷಿಕ ಯೋಜನೆಗೆ 84.38 ರೂ.ನ ಬಜೆಟ್‌ ಮೊಬಲಗು ಮೀಸಲಿರಿಸಲಾಗಿದೆ. ಸಾಮಾನ್ಯ ವಿಭಾಗಕ್ಕೆ 29.56 ಕೋಟಿ ರೂ., ಪರಿಶಿಷ್ಟ ಜಾತಿ ವಿಭಾಗಕ್ಕೆ 4.17 ಕೋಟಿ ರೂ., ಪರಿಶಿಷ್ಟ ಪಂಗಡ ವಿಭಾಗಕ್ಕೆ 3.87 ಕೋಟಿ ರೂ. ವೆಚ್ಚ ಮಾಡಲಾಗುವುದು.

Vijaya Karnataka 14 Jan 2020, 5:00 am
ಕಾಸರಗೋಡು: ಜಿಲ್ಲಾಪಂಚಾಯಿತಿಯ 2020-21ನೇ ವಾರ್ಷಿಕ ಯೋಜನೆಗೆ 84.38 ರೂ.ನ ಬಜೆಟ್‌ ಮೊಬಲಗು ಮೀಸಲಿರಿಸಲಾಗಿದೆ. ಸಾಮಾನ್ಯ ವಿಭಾಗಕ್ಕೆ 29.56 ಕೋಟಿ ರೂ., ಪರಿಶಿಷ್ಟ ಜಾತಿ ವಿಭಾಗಕ್ಕೆ 4.17 ಕೋಟಿ ರೂ., ಪರಿಶಿಷ್ಟ ಪಂಗಡ ವಿಭಾಗಕ್ಕೆ 3.87 ಕೋಟಿ ರೂ. ವೆಚ್ಚ ಮಾಡಲಾಗುವುದು. ರಸ್ತೆ ದುರಸ್ತಿಗೆ 4.17 ಕೋಟಿ ರೂ., ರಸ್ತೆಯೇತರ ದುರಸ್ತಿಗೆ 5.67 ಕೋಟಿ ರೂ. ವೆಚ್ಚ ಮಾಡಲಾಗುವುದು.
Vijaya Karnataka Web zp


ಜಿಲ್ಲಾಪಂಚಾಯಿತಿ ಹದಿಮೂರನೇ ಪಂಚವಾರ್ಷಿಕ ಯೋಜನೆ (2017-2022) ವಾರ್ಷಿಕ ಯೋಜನೆ ರಚನೆಯ ಪೂರ್ವಭಾವಿಯಾಗಿ ವರ್ಕಿಂಗ್‌ ಗ್ರೂಪ್‌ ಮಹಾಸಭೆ ನಡೆಯಿತು. ಶಾಸಕ ಎನ್‌.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಅಧ್ಯಕ್ಷತೆ ವಹಿಸಿದ್ದರು.

ವರ್ಕಿಂಗ್‌ ಗ್ರೂಪ್‌ ಮಹಾಸಭೆಯಲ್ಲಿಮೂಡಿಬರುವ ಸಲಹೆಗಳನ್ನು ನಾನಾ ಹಂತಗಳಲ್ಲಿಕರಡು ರೂಪುರೇಷೆಯಲ್ಲಿ, ನಂತರ ವಾರ್ಷಿಕ ಯೋಜನೆಯಲ್ಲಿಅಳವಡಿಸಲಾಗುವುದು. ಸಭೆಯಲ್ಲಿಭಾಗವಹಿಸಿದ ವರ್ಕಿಂಗ್‌ ಗ್ರೂಪ್‌ ಸದಸ್ಯರು 15 ಮಂದಿಗಳಾಗಿ ವಿಂಗಡಿಸಿ ನೂತನ ಯೋಜನೆ-ಅಭಿವೃದ್ಧಿ ಸಲಹೆಗಳನ್ನು ಮಂಡಿಸಿದ್ದಾರೆ. ಆಡಳಿತ, ಆರ್ಥಿಕ, ಕೃಷಿ, ಮೀನುಗಾರಿಕೆ, ಪಶುಸಂಗೋಪನೆ-ಹೈನುಗಾರಿಕೆ, ಸ್ಥಳೀಯ ಹಣಕಾಸು ಅಭಿವೃದ್ಧಿ-ಸಹಕಾರ, ಬಡತನ ನಿವಾರಣೆ, ಸಮಾಜ ನೀತಿ, ಮಹಿಳಾ ಅಭಿವೃದ್ಧಿ, ಪರಿಶಿಷ್ಟ ಜಾತಿ ಅಭಿವೃದ್ಧಿ, ಪರಿಶಿಷ್ಟ ಪಂಗಡ ಅಭಿವೃದ್ಧಿ, ಆರೋಗ್ಯ, ಕುಡಿಯುವ ನೀರು, ಸ್ವಚ್ಛತೆ, ಶಿಕ್ಷಣ, ಕಲೆ-ಸಾಂಸ್ಕೃತಿಕ-ಯುವಜನ ಕಲ್ಯಾಣ, ಲೋಕೋಪಯೋಗಿ, ದುರಂತ ನಿವಾರಣೆ ಹೀಗೆ ಒಟ್ಟು 15 ಗುಂಪುಗಳಾಗಿ ಚರ್ಚೆಗಳು ನಡೆಯಿತು.

ಬಜೆಟ್‌ನಲ್ಲಿಶೇ. 30 ಉತ್ಪಾದನೆ ವಲಯಕ್ಕೆ, ಸ್ವಚ್ಛತೆ-ತ್ಯಾಜ್ಯ ಸಂಸ್ಕರಣೆಯಲ್ಲಿಶೇ. 10, ಮಹಿಳಾ ಘಟಕ ಯೋಜನೆಗಳಿಗೆ ಶೇ. 10, ಮಕ್ಕಳ, ವಿಶೇಷಚೇತನರ , ಮಂಗಳಮುಖಿಯರ ವಲಯಕ್ಕೆ ಶೇ. 5, ಹಿರಿಯರ ವಲಯಕ್ಕೆ (ಪಾಲಿಯೇಟಿವ್‌ ಕೇರ್‌ ಸಹಿತ) ಶೇ. 5, ಲೈಫ್‌, ಪಿಎಂವೈ ಸಹಿತ ವಸತಿ ವಲಯಕ್ಕೆ ಶೇ. 20 ಮೀಸಲಿರಿಸಲಾಗುವುದು.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಡಿ ಜಿಲ್ಲಾಪಂಚಾಯಿತಿ ನೇತೃತ್ವದಲ್ಲಿಸ್ಥಾಪಿಸಲಾದ 385 ಕಿಲೋವ್ಯಾಟ್‌ ಸೋಲಾರ್‌ ಯೋಜನೆಯ ದಾಖಲೆಗಳನ್ನು ಸಭೆಯಲ್ಲಿಸಂಬಂಧಪಟ್ಟ ಸಂಸ್ಥೆಯ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾಸ್ಪತ್ರೆ, ಜಿಲ್ಲಾಆಯುರ್ವೇದ ಆಸ್ಪತ್ರೆ, ಮೊಗ್ರಾಲ್‌ ಪುತ್ತೂರು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ, ಉಪ್ಪಳ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ, ಚಂದ್ರಗಿರಿ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಗಳಲ್ಲಿಸೋಲಾರ್‌ ಯೋಜನೆ ಜಾರಿಗೊಳಿಸಲಾಗಿದೆ. ಕೆಎಸ್‌ಇಬಿಗಾಗಿ ಇನ್‌ಕೇರ್‌ ಸಂಸ್ಥೆ ಯೋಜನೆಯ ನಿರ್ವಹಣೆ ನಡೆಸಿದೆ.

ಸಭೆಯಲ್ಲಿವರ್ಕಿಂಗ್‌ ಗ್ರೂಪ್‌ ಸದಸ್ಯರಾದ ಜಿಲ್ಲಾಪಂಚಾಯಿತಿ ಸದಸ್ಯರು, ಬ್ಲಾಕ್‌ ಪಂಚಾಯಿತಿ ಅಧ್ಯಕ್ಷರು, ಜನಪ್ರತಿನಿಧಿಗಳು, ಸಾರ್ವಜನಿಕ ವಲಯದ ಪ್ರತಿನಿಧಿಗಳು, ನಾನಾ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ