ಆ್ಯಪ್ನಗರ

ಡೆತ್‌ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಕಾಫಿ ತೋಟದ ರಸ್ತೆಗೆ ನೆರೆ ಮನೆಯವರು ಅಡ್ಡಿಪಡಿಸಿ, ಕಿರಿಕಿರಿ ನೀಡುತ್ತಿದ್ದಕ್ಕೆ ಮನನೊಂದ ವ್ಯಕ್ತಿಯೊಬ್ಬರು ಡೆತ್‌ನೋಟ್‌ ಬರೆಯಿಸಿಟ್ಟು ಆತ್ಮಹತ್ಯೆ ...

Vijaya Karnataka Web 25 Aug 2016, 9:00 am

ಮಡಿಕೇರಿ: ಕಾಫಿ ತೋಟದ ರಸ್ತೆಗೆ ನೆರೆ ಮನೆಯವರು ಅಡ್ಡಿಪಡಿಸಿ, ಕಿರಿಕಿರಿ ನೀಡುತ್ತಿದ್ದಕ್ಕೆ ಮನನೊಂದ ವ್ಯಕ್ತಿಯೊಬ್ಬರು ಡೆತ್‌ನೋಟ್‌ ಬರೆಯಿಸಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಟ್ಟಗೇರಿ ಗ್ರಾಮದ ಬೆಳೆಗಾರ ನಂದ (37) ಮೃತರು. ಆತ್ಮಹತ್ಯೆಗೂ ಮುನ್ನ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ತನ್ನ ಪುತ್ರನಿಂದ ''ಕಾಲು ದಾರಿ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್‌ ಠಾಣೆಗೆ ದೂರು ನೀಡಬೇಕು. ನಾನು ಹೇಳಿದ ಹಾಗೆ ಪತ್ರ ಬರೆದುಕೊಡು'' ಎಂದು ಹೇಳಿ ಮಗನಿಂದಲೇ ಪತ್ರ ಬರೆಸಿಕೊಂಡು, ಕಾಫಿ ತೋಟದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

''ನಮ್ಮ ಮನೆಗೆ ಹೋಗಲು ದಾರಿಯಿಲ್ಲ. ದಾರಿಗೆ ಬಾಳೆಗಿಡ ನೆಟ್ಟಿದ್ದಾರೆ. ನಡೆದುಕೊಂಡು ಹೋಗಲು ಆಗುವುದಿಲ್ಲ. ನಾನು ನೆರೆಮನೆಯವರ ತೋಟದಿಂದ ಕಾಫಿ, ಕಾಳುಮೆಣಸು ಕದ್ದಿದ್ದೇನೆ ಎಂದು ಆರೋಪಿಸಿದ್ದಾರೆ. ನನ್ನ ಸಾವಿಗೆ ಬಾಳೆಗಿಡ ನೆಟ್ಟ ನಾಲ್ವರೇ ಕಾರಣ'' ಎಂದು ಡೆತ್‌ ನೋಟ್‌ನಲ್ಲಿ ಬರೆಯಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ