ಆ್ಯಪ್ನಗರ

ಹೋಂ ವರ್ಕ್‌ ವ್ಯಸನ: ಮಕ್ಕಳಿಗೆ ಥಳಿಸಿದ ಶಿಕ್ಷಕಿ

ಹೋಂ ವರ್ಕ್‌ ಮಾಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷ ಕಿಯೊಬ್ಬರು ಕೇಬಲ್‌ ವಯರ್‌ನಿಂದ ವಿದ್ಯಾರ್ಥಿಗಳಿಗೆ ಥಳಿಸಿರುವ ಘಟನೆ ವಿರಾಜಪೇಟೆ ತಾಲೂಕು ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ವಿಕ ಸುದ್ದಿಲೋಕ 5 Mar 2017, 9:00 am
ಸಿದ್ದಾಪುರ (ಕೊಡಗು): ಹೋಂ ವರ್ಕ್‌ ಮಾಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷ ಕಿಯೊಬ್ಬರು ಕೇಬಲ್‌ ವಯರ್‌ನಿಂದ ವಿದ್ಯಾರ್ಥಿಗಳಿಗೆ ಥಳಿಸಿರುವ ಘಟನೆ ವಿರಾಜಪೇಟೆ ತಾಲೂಕು ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
Vijaya Karnataka Web
ಹೋಂ ವರ್ಕ್‌ ವ್ಯಸನ: ಮಕ್ಕಳಿಗೆ ಥಳಿಸಿದ ಶಿಕ್ಷಕಿ


ಶಾಲೆಯ 9 ಮತ್ತು 10ನೇ ತರಗತಿಯ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕಿಯ ಕೋಪಕ್ಕೆ ಗುರಿಯಾಗಿದ್ದಾರೆ. ಮಕ್ಕಳ ಮೈಮೇಲೆ ಬಾಸುಂಡೆ ಬಂದಿರುವುದು ಹಾಗೂ ರಕ್ತ ಹೆಪ್ಪುಗಟ್ಟಿರುವ ಕಲೆಯನ್ನು ಗಮನಿಸಿದ ಪೋಷಕರು ಶನಿವಾರ ಶಾಲೆ ಎದುರು ಜಮಾಯಿಸಿ ಶಿಕ್ಷ ಕಿ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಹಿಂದೆಯೂ ಸಹ ಹಲವು ಬಾರಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಿದ್ದಾಪುರ ಪೊಲೀಸರು ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿ ಸದಸ್ಯರು ಸ್ಥಳಕ್ಕೆ ಆಗಮಿಸಿ ಪೋಷಕರನ್ನು ಸಮಾಧಾನಪಡಿಸಿದರು. ಬಳಿಕ ನಡೆದ ವಿದ್ಯಾರ್ಥಿ, ಶಿಕ್ಷಕರು ಹಾಗೂ ಪಾಲಕರ ಸಭೆಯಲ್ಲಿ ಹಲ್ಲೆ ನಡೆಸಿದ ಶಿಕ್ಷ ಕಿ ತಪೊ್ಪಪ್ಪಿಕೊಂಡು ಕ್ಷ ಮೆಯಾಚಿಸಿದರು. ಶಾಲಾ ಮುಖ್ಯ ಶಿಕ್ಷ ಕರಾದ ಜಿಮ್ಮಿ ಸಿಕ್ವೇರಾ ಮಾತನಾಡಿ, ''ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಿ ಶಾಲೆಯು ಪ್ರತಿವರ್ಷ ಉತ್ತಮ ಫಲಿತಾಂಶವನ್ನು ಗಳಿಸುತ್ತಿದೆ. ಅದೇ ರೀತಿ ಪ್ರಸಕ್ತ ಸಾಲಿನಲ್ಲೂ ಉತ್ತಮ ಫಲಿತಾಂಶ ಬರಲಿ ಎಂಬ ಕಾರಣಕ್ಕೆ ಶಿಕ್ಷ ಕಿಯಿಂದ ಇಂತಹ ಪ್ರಮಾದ ನಡೆದಿರಬಹುದು,''ಎಂದು ಹೇಳಿದರಲ್ಲದೇ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದರು. ಸಭೆಯಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯ್ತಿ ಸದಸ್ಯ ಎ.ಕೆ.ಹಕೀಂ ಮತ್ತು ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾ ಶಿಕ್ಷ ಕಿಯರು ಹಾಜರಿದ್ದರು.

ಶಿಕ್ಷೆಯಿಂದ ಬಚಾವ್‌ ಮಾಡಿ

ಶಿಕ್ಷ ಕಿಯು ಮನಬಂದಂತೆ ಥಳಿಸುತ್ತಾರೆ. ಇದರಿಂದ ಮನನೊಂದ ಸಹಪಾಠಿಗಳು ಏನಾದರೂ ಅನಾಹುತ ಮಾಡಿಕೊಳ್ಳುವ ಮುನ್ನ ಶಿಕ್ಷ ಕಿಯನ್ನು ಬೇರೆಡೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಿ ಎಂದು ಕೋರಿ ಶಾಲೆಯ ಕೆಲವು ವಿದ್ಯಾರ್ಥಿಗಳು ಶುಕ್ರವಾರ ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಿಗೆ ಪತ್ರ ಬರೆದಿದ್ದರು. ಆದರೆ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸದ ಕಾರಣ ಶನಿವಾರ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಂದಿದ್ದರೆನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ