ಆ್ಯಪ್ನಗರ

ಹೆಜ್ಜೇನು ಭೀತಿ: ರಾಜಾಸೀಟ್‌ ಕೆಲಕಾಲ ಬಂದ್‌

ರಾಜಾಸೀಟ್‌ನಲ್ಲಿ ಪ್ರವಾಸಿಗರಿಗೆ ಹೆಜ್ಜೇನು ದಾಳಿಯ ಭೀತಿ ಮೂಡಿದೆ. ಶನಿವಾರ ಬೆಳಗ್ಗೆ ಕೆಲವು ಪ್ರವಾಸಿಗರ ಮೇಲೆ ಅವು ದಾಳಿ ನಡೆಸಿದ ಪರಿಣಾಮ ಮೂವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸಾಗಿದ್ದರು.

Vijaya Karnataka 16 Oct 2017, 5:00 am

ಮಡಿಕೇರಿ: ರಾಜಾಸೀಟ್‌ನಲ್ಲಿ ಪ್ರವಾಸಿಗರಿಗೆ ಹೆಜ್ಜೇನು ದಾಳಿಯ ಭೀತಿ ಮೂಡಿದೆ. ಶನಿವಾರ ಬೆಳಗ್ಗೆ ಕೆಲವು ಪ್ರವಾಸಿಗರ ಮೇಲೆ ಅವು ದಾಳಿ ನಡೆಸಿದ ಪರಿಣಾಮ ಮೂವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸಾಗಿದ್ದರು.

ಅಲ್ಲದæೕ, ಭಾನುವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದ ಕಾರಣಕ್ಕೆ ಮತ್ತೆ ಹೆಜ್ಜೇನು ಉದ್ಯಾನ ಆವರಿಸಿದ ಹಿನ್ನೆಲೆಯಲ್ಲಿ ರಾಜಾಸೀಟ್‌ ಅನ್ನು ಬೆಳಗ್ಗæ್ಗ 10 ರಿಂದ 12.30ರ ತನಕ ಬಂದ್‌ ಮಾಡಲಾಗಿತ್ತು. ಪರಿಣಾಮವಾಗಿ ರಾಜಸೀಟ್‌ ನೋಡಲು ಬಂದಿದ್ದ ಪ್ರವಾಸಿಗರು ನಿರಾಸೆ ಅನುಭವಿಸಿದರು. 12.30ರ ನಂತರ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ನೀಡಲಾಯಿತು.

ಈ ಸಂಬಂಧ ಸಿಬ್ಬಂದಿಯನ್ನು ಪ್ರಶ್ನಿಸಿದ ವೇಳೆ, ಕಿಡಿಗೇಡಿಗಳು ಜೇನುಗೂಡಿಗೆ ಕಲ್ಲು ಹೊಡೆದಿರುವ ಕಾರಣ ಅವು ದಾಳಿ ನಡೆಸಿವೆ. ಆದ್ದÜರಿಂದ, ಮುಂಜಾಗ್ರತಾ ಕ್ರಮವಾಗಿ ಬಂದ್‌ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ