ಆ್ಯಪ್ನಗರ

ಪ್ರಜಾಪ್ರಭುತ್ವದಲ್ಲೂ ಕೊಡವರು ಸುರಕ್ಷಿತರಾಗಿಲ್ಲ

ಕೊಡಗು ಹಿಂದಿನ ಕಾಲದಿಂದಲೂ ನಿರಂತರ ದಾಳಿಗೆ ತುತ್ತಾಗುತ್ತಿತ್ತು. ಅಂದು ಇಲ್ಲಿನ ಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ದಿನದ 24 ಗಂಟೆಯೂ ಕಾರ್ಯೋನ್ಮುಖರಾಗಿರಬೇಕಾಗಿತ್ತು.

Vijaya Karnataka 25 Dec 2018, 5:00 am
ಶ್ರೀಮಂಗಲ: ಕೊಡಗು ಹಿಂದಿನ ಕಾಲದಿಂದಲೂ ನಿರಂತರ ದಾಳಿಗೆ ತುತ್ತಾಗುತ್ತಿತ್ತು. ಅಂದು ಇಲ್ಲಿನ ಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ದಿನದ 24 ಗಂಟೆಯೂ ಕಾರ್ಯೋನ್ಮುಖರಾಗಿರಬೇಕಾಗಿತ್ತು. ಇಂತಹ ದಾಳಿಯನ್ನು ಎದುರಿಸಿ ಕೊಡವ ಸಂಸ್ಕೃತಿ ಬೆಳೆದು ನಿಂತಿದೆ. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಸೂಕ್ತ ಭದ್ರತೆ ದೊರೆಯದೆ ಅಲ್ಪಸಂಖ್ಯಾತ ಕೊಡವರಲ್ಲಿ ಅಸುರಕ್ಷಿತ ಭಾವನೆಯಿದೆ. ತಮ್ಮ ನಾಡು-ನುಡಿಯ ರಕ್ಷ ಣೆಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಖ್ಯಾತ ಅಂಕಣಕಾರ ಮಾಣಿಪಂಡ ಸಂತೋಷ್‌ ತಮ್ಮಯ್ಯ ಕಳವಳ ವ್ಯಕ್ತಪಡಿಸಿದರು.
Vijaya Karnataka Web
ಪ್ರಜಾಪ್ರಭುತ್ವದಲ್ಲೂ ಕೊಡವರು ಸುರಕ್ಷಿತರಾಗಿಲ್ಲ


ಅವರು ಪೊನ್ನಂಪೇಟೆಯ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಪುತ್ತರಿ ಉರೋರ್ಮೆ ಹಾಗೂ ಕೊಡವ ಸಾಂಸ್ಕೃತಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೊಡಗಿನ ಸುತ್ತಲ ಪ್ರದೇಶಗಳು ನಿರಂತರ ದಾಳಿಗೆ ಒಳಗಾಗಿತ್ತು. ಇಲ್ಲಿನ ಜನ ವೀರತ್ವದಿಂದ ಅದನ್ನು ಎದುರಿಸಿದ್ದರು. ವೈನಾಡು, ಕಣ್ಣೂರು ಪ್ರದೇಶದಿಂದ ಮತ್ತು ಪಿರಿಯಾಪಟ್ಟಣ ಮತ್ತು ಮೈಸೂರು ಸೀಮೆಗಳಿಂದಲೂ ನಿರಂತರ ದಾಳಿಗೆ ಕೊಡಗು ಒಳಗಾಗಿತ್ತು. ಕೊಡಗಿನ ರಾಜರ ಆಡಳಿತದಲ್ಲಿಯೂ ಕೊಡವರ ಮೇಲೆ ದೊಡ್ಡ ಮಟ್ಟದ ದೌರ್ಜನ್ಯ ನಡೆಯಿತು ಎಂದು ಹೇಳಿದರು.

ಇತಿಹಾಸಲ್ಲಿ ಇಂತಹ ದುರಂತಗಳನ್ನು ಎದುರಿಸಿರುವ ಕೊಡವರು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಸುರಕ್ಷಿತವಾಗಿಲ್ಲ. ಕೊಡವರು ವಾಸ್ತವವನ್ನು ಹೇಳುವ ಅಭಿವ್ಯಕ್ತಿ ಸಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಯಹೂದಿಗಳು, ಗ್ರೀಕರು ಹಾಗೂ ಇಸ್ರೇಲ್‌ನ ಜನತೆ ತಮ್ಮ ಮಾತೃಭಾಷೆಯನ್ನು ಬಳಸದೆ, ಸಂಸ್ಕೃತಿಯನ್ನು ನೈಜ್ಯತೆಯೊಂದಿಗೆ ಆಚರಿಸದ ಹಿನ್ನೆಲೆಯಲ್ಲಿ ಅಳಿವಿನಂಚಿನಲ್ಲಿದ್ದಾರೆ. ಕೊಡವ ಭಾಷೆ ಎಂಬುದು ಹೃದಯದ ಭಾಷೆಯಾಗಿದ್ದು, ಇದನ್ನು ಬಳಸಲು ಹಿಂದೇಟು ಹಾಕುವುದನ್ನು ನಿಲ್ಲಿಸಬೇಕೆಂದು ಎಂದು ಸಲಹೆ ನೀಡಿದರು.

ಕೊಡವ ಧೀನಬಂದು ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಕಟ್ಟೆರ ಕೆ.ಕಾರ್ಯಪ್ಪ ಮಾತನಾಡಿ, ಕೊಡವರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ತಮ್ಮ ಜನಾಂಗದ ಬಡ ಹಾಗೂ ಪೋಷಕರಿಲ್ಲದ ಮಕ್ಕಳ ಶಿಕ್ಷ ಣಕ್ಕೆ ನೆರವು ನೀಡಬೇಕು, ಧೀನಬಂದು ಟ್ರಸ್ಟ್‌ನಿಂದ ಪ್ರಸಕ್ತ ವರ್ಷ 20 ಲಕ್ಷ ರೂ. ಹಣವನ್ನು ಕೊಡವ ಮಕ್ಕಳ ಶಿಕ್ಷ ಣಕ್ಕೆ ನೀಡಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಅತ್ಯವಶ್ಯ. ಆದರೆ, ಮನೆಯಲ್ಲಿ ಮಕ್ಕಳಿಗೆ ಕೊಡವ ಭಾಷೆಯನ್ನು ಕಲಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್‌ ಬೋಪಯ್ಯ, ಕೊಡವರ ಹಬ್ಬಗಳನ್ನು ಮಕ್ಕಳೊಂದಿಗೆ ಆಚರಿಸಬೇಕು. ಕೊಡವ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಭಾಷೆ ಮೇಲೆ ಅಭಿಮಾನವಿದ್ದರೆ ಸಂಸ್ಕೃತಿ ಉಳಿಯುತ್ತದೆ. ಪೋಷಕರು ಸುಸಂಸ್ಕೃತರಾದರೆ ಮಕ್ಕಳು ಸಹ ಒಳ್ಳೆಯ ಹಾದಿಯಲ್ಲಿ ನಡೆಯುತ್ತಾರೆಂದು ಹೇಳಿದರು.

ಇದೇ ಸಂದರ್ಭ ವೇದಿಕೆಯಲ್ಲಿ ವಿವಿಧ ತಂಡಗಳಿಂದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು. ನಡಿಕೇರಿಯ ತಪಸ್ಯಾ ಶಾಲೆಯ ಪ್ರಾಂಶುಪಾಲ ಚೊಟ್ಟೆಕಾಳಪಂಡ ಪ್ರಥ್ವಿಕ್‌ ಪೂಣಚ್ಚ , ಕೊಡವ ಸಮಾಜದ ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್‌, ಖಜಾಂಚಿ ಮೂಕಳೇರ ಲಕ್ಷ ್ಮಣ, ಸಹಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ನಿರ್ದೇಶಕರಾದ ಮಲ್ಲಮಾಡ ಪ್ರಭುಪೂಣಚ್ಚ, ಮಂಡಚಂಡ ದಿನೇಶ್‌ ಚಿಟ್ಟಿಯಪ್ಪ, ಚೆಪ್ಪುಡೀರ ರಾಕೇಶ್‌ ದೇವಯ್ಯ, ಚೆಪ್ಪುಡೀರ ರೂಪ ಉತ್ತಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್‌, ಅಡ್ಡಂಡ ಸುನೀಲ್‌, ಮೂಕಳಮಾಡ ಅರಸು ನಂಜಪ್ಪ, ಕಾಯಂ ಆಹ್ವಾನಿತರಾದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಕಾರ್ಯಕ್ರಮ ಸಂಯೋಜಕರಾದ ಕಾಳಿಮಾಡ ಮೋಟಯ್ಯ ಉಪಸ್ಥಿತರಿದ್ದರು.

ಚೊಟ್ಟೆಕಾಳಪಂಡ ಆಶಾ ಪ್ರಕಾಶ್‌ ಪ್ರಾರ್ಥಿಸಿ ಉಳುವಂಗಡ ಲೋಹಿತ್‌ ಭೀಮಯ್ಯ ಜಬ್ಭೂಮಿ ಬಾಳೋ ಹಾಡು ಹಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ