ಆ್ಯಪ್ನಗರ

ಹುಲಿ ದಾಳಿಗೆ 2 ಹಸು ಬಲಿ

ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಮಂಗಳವಾರ ರಾತ್ರಿ ಬೀರುಗ ಗ್ರಾಮದಲ್ಲಿ ಎರಡು ಹಸುಗಳನ್ನು ಬಲಿ ತೆಗೆದುಕೊಂಡಿದೆ.

Vijaya Karnataka 21 Jun 2018, 5:00 am
ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಮಂಗಳವಾರ ರಾತ್ರಿ ಬೀರುಗ ಗ್ರಾಮದಲ್ಲಿ ಎರಡು ಹಸುಗಳನ್ನು ಬಲಿ ತೆಗೆದುಕೊಂಡಿದೆ.
Vijaya Karnataka Web  2
ಹುಲಿ ದಾಳಿಗೆ 2 ಹಸು ಬಲಿ


ಅಲ್ಲಿನ ಅಜ್ಜಮಾಡ ವಿಜು ಕಾರ್ಯಪ್ಪ ಎಂಬುವವರಿಗೆ ಸೇರಿದ ಎರಡು ಹಸುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಮನೆಯ ಅನತಿ ದೂರದಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಒಂದು ಹಸುವನ್ನು ಕೊಟ್ಟಿಗೆಯಲ್ಲಿ ಕೊಂದು ಹಾಕಿದೆ. ಮತ್ತೊಂದು ಹಸುವನ್ನು ಕೊಟ್ಟಿಗೆಯಿಂದ ಸುಮಾರು 300 ಮೀಟರ್‌ ದೂರದವರೆಗೆ ಎಳೆದೊಯ್ದು ಕೊಂದು ಅರ್ಧ ಭಾಗ ತಿಂದು ಹಾಕಿದೆ.

ಮುಂಜಾನೆ ಕೊಟ್ಟಿಗೆಗೆ ಆಗಮಿಸಿದ್ದ ಮನೆ ಮಾಲೀಕರಿಗೆ ಕೊಟ್ಟಿಗೆಯ ಬಾಗಿಲಿನಲ್ಲಿಯೇ ಹಸು ಸತ್ತು ಬಿದ್ದಿರುವುದು ಕಂಡು ಬಂದಿದೆ. ಹಸುಗಳನ್ನು ಲೆಕ್ಕ ಹಾಕಿದಾಗ ಮತ್ತೊಂದು ಹಸುವು ಕಾಣೆಯಾಗಿದ್ದು, ಹುಡುಕಾಟ ನಡೆಸಿದಾಗ ಗದ್ದೆಯ ಬಯಲಿನ ತೋಡಿನ ಸಮೀಪ ಮತ್ತೊಂದು ಹಸು ಸತ್ತು ಬಿದ್ದಿರುವುದು ಗೋಚರಿಸಿದೆ.

ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ, ಜೆಡಿಎಸ್‌ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್‌ ಪೂವಯ್ಯ ಸ್ಥಳಕ್ಕೆ ಆಗಮಿಸಿ ಹುಲಿ ಸೆರೆಗೆ ಆಗ್ರಹಿಸಿದರು. ಮಡಿಕೇರಿ ವನ್ಯ ಜೀವಿ ವಿಭಾಗದ ಎಸಿಎಫ್‌ ದಯಾನಂದ, ಶ್ರೀಮಂಗಲ ಎಸಿಎಫ್‌ ಶ್ರೀನಿವಾಸ ನಾಯಕ ಪರಿಶೀಲನೆ ನಡೆಸಿದರು. ಈ ಭಾಗದಲ್ಲಿ ಬೋನ್‌ ಅಳವಡಿಸಲಾಗಿದ್ದು, ಹುಲಿ ಸೆರೆಗೆ ಪ್ರಯತ್ನಿಸಲಾಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ