ಮಡಿಕೇರಿ: ಕೊಡವ ಸಮಾಜದ ಸಭಾಂಗಣದಲ್ಲಿ ಮಡಿಕೇರಿ ಸಹಕಾರಿ ಪಟ್ಟಣ ಬ್ಯಾಂಕ್ನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಕೆ.ಜಗದೀಶ್ ಅಧ್ಯಕ್ಷ ತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಮಡಿಕೇರಿ ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಕೆ.ಜಗದೀಶ್ ಮಾತನಾಡಿ, ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ನಲ್ಲಿ ಪ್ರಸ್ತುತ 2,297 ಮಂದಿ ಸದಸ್ಯರಿದ್ದಾರೆ. ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ 101.30 ಲಕ್ಷ ರೂ. ಸಂಗ್ರಹವಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು 3521.20 ಲಕ್ಷ ರೂ. ಆಗಿದ್ದು, ಕಳೆದ ಸಾಲಿಗಿಂತ 210.30 ಲಕ್ಷ ರೂ. ಅಧಿಕವಾಗಿದೆ. ಬ್ಯಾಂಕ್ ಪ್ರಸ್ತುತ 2864.51 ಲಕ್ಷ ದಷ್ಟು ವಿವಿಧ ಠೇವಣಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ 172.65 ಲಕ್ಷ ರೂ. ಏರಿಕೆಯಾಗಿದೆ. ಬ್ಯಾಂಕಿನ ಸದಸ್ಯರಿಗೆ ಲಾಭಾಂಶದಲ್ಲಿ ಶೇ.14ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ತನ್ನ ಶಾಖೆಯಲ್ಲಿ 2554.38 ಲಕ್ಷ ದಷ್ಟು ವ್ಯವಹಾರ ನಡೆಸಿದ್ದು, ರೂ.12.64 ಲಕ್ಷ ಲಾಭಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಶಾಖೆ 599.46 ಲಕ್ಷ ಠೇವಣಿ ಹೊಂದಿದ್ದು, 377.93 ಲಕ್ಷ ರೂ. ಸಾಲ ನೀಡಿದೆ. ಅಲ್ಲದೇ, ತನ್ನ ಗ್ರಾಹಕರಿಗೆ ನಾನಾ ರೂಪದ ಸಾಲಗಳಾದ ಜಾಮೀನು, ಆಭರಣ , ಮನೆ ಖರೀದಿ, ವಾಹನ, ವ್ಯಾಪಾರ ಅಭಿವೃದ್ಧಿ ಸಾಲ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಒಂದು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟು ಇಡುವಂತಹ ಠೇವಣಿಗಳಿಗೆ ಶೇಕಡ 0.50 ಹೆಚ್ಚಿನ ಬಡ್ಡಿ ನೀಡಲಾಗುತ್ತಿದ್ದು, ಈ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದ್ದು, ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರು ಇದರ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಆಡಳಿತ ಮಂಡಳಿಯ ವಾರ್ಷಿಕ ವರದಿ ಪರಿಶೀಲಿಸಲಾಯಿತು. ಇದರೊಂದಿಗೆ ಬ್ಯಾಂಕ್ನ ವಿವಿಧ ವಿಷಯವಾಗಿ ಸದಸ್ಯರು ಚರ್ಚೆ ನಡೆಸಿದರು.
ಸಭೆ ಆರಂಭಕ್ಕೂ ಮುನ್ನ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಂಘದ ಮೃತಪಟ್ಟ ಸದಸ್ಯರು ಹಾಗೂ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬ್ಯಾಂಕ್ನ ಉಪಾಧ್ಯಕ್ಷ ಎಸ್.ಸಿ. ಸತೀಶ್, ನಿರ್ದೇಶಕರಾದ ಎಂ.ಪಿ. ಮುತ್ತಪ್ಪ, ಕೋಡಿ ಚಂದ್ರಶೇಖರ್, ಇಗ್ಗುಡ ಶಿವಕುಮಾರಿ, ಕನ್ನಂಡ ಎ. ಸಂಪತ್, ಬಿ.ಎಂ. ರಾಜೇಶ್, ಗೋಪಾಲಕೃಷ್ಣ ಎ. ಹಾಗೂ ಬ್ಯಾಂಕ್ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಮಡಿಕೇರಿ ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಕೆ.ಜಗದೀಶ್ ಮಾತನಾಡಿ, ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ನಲ್ಲಿ ಪ್ರಸ್ತುತ 2,297 ಮಂದಿ ಸದಸ್ಯರಿದ್ದಾರೆ. ಬ್ಯಾಂಕಿನ ಅಧಿಕೃತ ಪಾಲು ಬಂಡವಾಳ 101.30 ಲಕ್ಷ ರೂ. ಸಂಗ್ರಹವಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು 3521.20 ಲಕ್ಷ ರೂ. ಆಗಿದ್ದು, ಕಳೆದ ಸಾಲಿಗಿಂತ 210.30 ಲಕ್ಷ ರೂ. ಅಧಿಕವಾಗಿದೆ. ಬ್ಯಾಂಕ್ ಪ್ರಸ್ತುತ 2864.51 ಲಕ್ಷ ದಷ್ಟು ವಿವಿಧ ಠೇವಣಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ 172.65 ಲಕ್ಷ ರೂ. ಏರಿಕೆಯಾಗಿದೆ. ಬ್ಯಾಂಕಿನ ಸದಸ್ಯರಿಗೆ ಲಾಭಾಂಶದಲ್ಲಿ ಶೇ.14ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ತನ್ನ ಶಾಖೆಯಲ್ಲಿ 2554.38 ಲಕ್ಷ ದಷ್ಟು ವ್ಯವಹಾರ ನಡೆಸಿದ್ದು, ರೂ.12.64 ಲಕ್ಷ ಲಾಭಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಶಾಖೆ 599.46 ಲಕ್ಷ ಠೇವಣಿ ಹೊಂದಿದ್ದು, 377.93 ಲಕ್ಷ ರೂ. ಸಾಲ ನೀಡಿದೆ. ಅಲ್ಲದೇ, ತನ್ನ ಗ್ರಾಹಕರಿಗೆ ನಾನಾ ರೂಪದ ಸಾಲಗಳಾದ ಜಾಮೀನು, ಆಭರಣ , ಮನೆ ಖರೀದಿ, ವಾಹನ, ವ್ಯಾಪಾರ ಅಭಿವೃದ್ಧಿ ಸಾಲ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಒಂದು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟು ಇಡುವಂತಹ ಠೇವಣಿಗಳಿಗೆ ಶೇಕಡ 0.50 ಹೆಚ್ಚಿನ ಬಡ್ಡಿ ನೀಡಲಾಗುತ್ತಿದ್ದು, ಈ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದ್ದು, ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರು ಇದರ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸಭೆಯಲ್ಲಿ ಆಡಳಿತ ಮಂಡಳಿಯ ವಾರ್ಷಿಕ ವರದಿ ಪರಿಶೀಲಿಸಲಾಯಿತು. ಇದರೊಂದಿಗೆ ಬ್ಯಾಂಕ್ನ ವಿವಿಧ ವಿಷಯವಾಗಿ ಸದಸ್ಯರು ಚರ್ಚೆ ನಡೆಸಿದರು.
ಸಭೆ ಆರಂಭಕ್ಕೂ ಮುನ್ನ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಂಘದ ಮೃತಪಟ್ಟ ಸದಸ್ಯರು ಹಾಗೂ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬ್ಯಾಂಕ್ನ ಉಪಾಧ್ಯಕ್ಷ ಎಸ್.ಸಿ. ಸತೀಶ್, ನಿರ್ದೇಶಕರಾದ ಎಂ.ಪಿ. ಮುತ್ತಪ್ಪ, ಕೋಡಿ ಚಂದ್ರಶೇಖರ್, ಇಗ್ಗುಡ ಶಿವಕುಮಾರಿ, ಕನ್ನಂಡ ಎ. ಸಂಪತ್, ಬಿ.ಎಂ. ರಾಜೇಶ್, ಗೋಪಾಲಕೃಷ್ಣ ಎ. ಹಾಗೂ ಬ್ಯಾಂಕ್ ಸದಸ್ಯರು ಹಾಜರಿದ್ದರು.