ಆ್ಯಪ್ನಗರ

15ರಂದು ಸ್ನೇಹ ಸಭೆ

71ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ 15ರ ಮಂಗಳವಾರ ಪತ್ರಿಕಾ ಭವನದಲ್ಲಿ ಸ್ನೇಹ ಸಭೆ ನಡೆಯಲಿದೆ ಎಂದು ಖತಿಬರು ಹಾಗೂ ರಾಜ್ಯ ಹಜ್‌ ಸಮಿತಿ ಸದಸ್ಯ ಕೆಎಂ...

Vijaya Karnataka Web 13 Aug 2017, 9:00 am

ಸೋಮವಾರಪೇಟೆ: 71ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ. 15ರ ಮಂಗಳವಾರ ಪತ್ರಿಕಾ ಭವನದಲ್ಲಿ ಸ್ನೇಹ ಸಭೆ ನಡೆಯಲಿದೆ ಎಂದು ಖತಿಬರು ಹಾಗೂ ರಾಜ್ಯ ಹಜ್‌ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್‌ ಸಿದ್ದೀಖ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುನ್ನಿ ಬಾಲ ಸಂಘ, ಜಲಾಲಿಯ ಮದರಸ ಮತ್ತು ಸುನ್ನಿ ಸ್ಟೂಡೆಂಟ್ಸ್‌ ಫೆಡರೇಷನ್‌ ಸಂಯುಕ್ತ ಆಶ್ರಯಲ್ಲಿ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಜಲಾಲಿಯ ಮಸೀದಿ ಅಧ್ಯಕ್ಷ ಕೆ.ಎಂ. ಆದಮ್‌ ವಹಿಸಲಿದ್ದಾರೆ. ತಹಸೀಲ್ದಾರ್‌ ಮಹೇಶ್‌ ಉದ್ಘಾಟನೆ ನಡೆಸುವರು. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ಎ.ಜೀವಿಜಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಭಾರತೀಶ್‌, ರಾಜ್ಯ ಕಾಂಗ್ರೆಸ್‌ ಕಾರ್ಮಿಕ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಕೊಡಗು ಎಸ್‌ವೈಎಸ್‌ನ ಜಿಲ್ಲಾಧ್ಯಕ್ಷ ಅಬ್ದುಲ್‌ ಹಫೀಳ್‌ ಸಂದಿ, ರೇಂಜ್‌ ಎಸ್‌ಜೆಎಂ ಕಾರ್ಯದರ್ಶಿ ಅಬ್ದುಲ್‌ ಅಜೀಜ್‌ ಹಾಗೂ ವೃತ್ತ ನಿರೀಕ್ಷ ಕ ಪರಶಿವಮೂರ್ತಿ ಪಾಲ್ಗೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ