ಆ್ಯಪ್ನಗರ

15 ಅಡಿ ಉದ್ದದ ಹೆಬ್ಬಾವು ರಕ್ಷಣೆ

ಗೋಣಿಕೊಪ್ಪಲು ಕಾಫಿ ತೋಟದಲ್ಲಿ ಪತ್ತೆಯಾದ ಹೆಬ್ಬಾವನ್ನು ಉರಗ ಪ್ರೇಮಿಗಳು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Vijaya Karnataka 30 Mar 2019, 5:00 am
ಮಡಿಕೇರಿ: ಗೋಣಿಕೊಪ್ಪಲು ಕಾಫಿ ತೋಟದಲ್ಲಿ ಪತ್ತೆಯಾದ ಹೆಬ್ಬಾವನ್ನು ಉರಗ ಪ್ರೇಮಿಗಳು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
Vijaya Karnataka Web 15 feet long python protection
15 ಅಡಿ ಉದ್ದದ ಹೆಬ್ಬಾವು ರಕ್ಷಣೆ


ಸುಮಾರು 15 ಅಡಿ ಉದ್ದವಿದ್ದ ಹಾವು, ಸುಮಾರು 28 ಕೆಜಿ ತೂಕವಿತ್ತು. ಮಾಯಮುಡಿ ಗ್ರಾಮದ ಕಾಫಿ ಬೆಳೆಗಾರ ಚೆಪ್ಪುಡೀರ ಸುಬಿನ್‌ ಸುಬ್ಬಯ್ಯ ಅವರ ತೋಟದಲ್ಲಿ ಗುರುವಾರ ತಡ ರಾತ್ರಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನು ಉರಗ ಪ್ರೇಮಿ ತೀತೀರ ಅಭಿಷೇಕ್‌ ಹಾಗೂ ಭಾವೆ ಹಿಡಿದು ಮತ್ತಿಗೋಡು ಅರಣ್ಯಕ್ಕೆ ಬಿಟ್ಟಿದ್ದಾರೆ.

ಬೆಳೆಗಾರ ಸುಬಿನ್‌ ಸುಬ್ಬಯ್ಯ ತೋಟಕ್ಕೆ ನೀರು ಹಾಯಿಸಲು ಗದ್ದೆಯಲ್ಲಿನ ಕೆರೆಗೆ ತೆರಳುತ್ತಿದ್ದಾಗ ಹಾವು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿರುವುದು ಗೋಚರಿಸಿದೆ. ನಂತರ ಗ್ರಾಮಸ್ಥರ ಸಹಾಯದಿಂದ ಉರಗ ಪ್ರೇಮಿಗಳನ್ನು ಕರೆದು ರಕ್ಷ ಣೆ ಮಾಡಿದರು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಮತ್ತಿಗೋಡು ಅರಣ್ಯಕ್ಕೆ ಬಿಡಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉರಗ ಪ್ರೇಮಿ ತೀತೀರ ಅಭಿಷೇಕ್‌, ಮೈಯಲ್ಲಿನ ಚಿಹ್ನೆಗಳು ಹೆಣ್ಣು ಹಾವು ಎಂದು ಗುರುತಿಸುವಂತಿದೆ. ಇಂಡಿಯನ್‌ ರಾಕ್‌ ಪೈಥಾನ್‌ ಎಂದು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ